ಪುಸ್ತಕ ಪ್ರೇಮಿಗಳ ನೆಚ್ಚಿನ ಪುಸ್ತಕ 'ಮಲೆಗಳಲ್ಲಿ ಮದುಮಗಳು!'
ಬೆಂಗಳೂರು, ಆಗಸ್ಟ್ 10: "ಪುಸ್ತಕಗಳು ಕನ್ನಡಿಯಿದ್ದ ಹಾಗೇ. ನಿನ್ನ ಒಳಗೇನಿದೆ ಎಂಬುದನ್ನು ನೀನೇ ನೋಡಿಕೊಳ್ಳುವುದಕ್ಕೆ ಅವು ಸಾಧನ" ಇದು ಮಹಾನುಭಾವರೊಬ್ಬರ ನುಡಿ. ನಮ್ಮೊಳಗನ್ನು ಅರಿತುಕೊಳ್ಳುವುದಕ್ಕೆ ನೆರವಾಗುವ ಸ್ನೇಹಿತರಲ್ಲಿ ಹೊತ್ತಿಗೆಗಿಂತ ಉತ್ತಮ ಯಾರಿದ್ದಾರೆ?
ಆಗಸ್ಟ್ 9 ಅಂದರೆ ನಿನ್ನೆ 'ವಿಶ್ವ ಪುಸ್ತಕ ಪ್ರೇಮಿಗಳ ದಿನ'. ಪ್ರತಿಪುಟದಲ್ಲೂ ಹೊಸತೇನನ್ನೂ ಕಲಿಸುವ, ಪ್ರತಿ ಅಧ್ಯಾಯದಲ್ಲೂ ಮೇರು ನೀತಿಯನ್ನು ಸ್ಫುರಿಸುವ, ಪ್ರತಿ ಪದದಲ್ಲೂ ಜೀವನ ಪ್ರೀತಿಯನ್ನು ತುಂಬುವ ಸಾಕಷ್ಟು ಪುಸ್ತಕಗಳು ನಮ್ಮ ನಡುವಲ್ಲಿವೆ. ಅವುಗಳಲ್ಲಿ ಹಲವನ್ನು ಓದಿ ಆನಂದಿಸಿದ್ದೇವೆ, ಚರ್ಚಿಸಿದ್ದೇವೆ, ಅಳವಡಿಸಿಕೊಂದಿದ್ದೇವೆ, ಅತ್ತಿದ್ದೇವೆ, ಬೈದೂ ಇದ್ದೇವೆ!
ಹೀಗಿರುವಾಗ ನೀವು ಓದಿದ ಅತ್ಯುತ್ತಮ ಕನ್ನಡ ಪುಸ್ತಕ ಯಾವುದು ಎಂಬ ಕುರಿತಂತೆ 'ಒನ್ ಇಂಡಿಯಾ ಕನ್ನಡ' ನಿನ್ನೆ ಫೇಸ್ ಬುಕ್ ನಲ್ಲಿ ನಿಮ್ಮ ಬಳಿ ಅಭಿಪ್ರಾಯ ಕೇಳಿತ್ತು. ಅದಕ್ಕೆ ಸಾಕಷ್ಟು ಜನರು ಪ್ರತಿಕ್ರಿಯಿಸಿ, ತಮ್ಮ ನೆಚ್ಚಿನ ಪುಸ್ತಕ ಯಾವುದು ಎಂಬ ಬಗ್ಗೆ ಬರೆದುಕೊಂಡಿದ್ದರು.
ಅವುಗಳಲ್ಲಿ ಆಯ್ದ ಕೆಲವು ನಿಮಗಾಗಿ ಇಲ್ಲಿವೆ...

ಮಲೆಗಳಲ್ಲಿ ಮದುಮಗಳು
ರಾಷ್ಟ್ರಕವಿ ಕುವೆಂಪು ಅವರ ಎರಡು ಕಾದಂಬರಿಗಳಲ್ಲಿ ಪ್ರಮುಖವಾದ 'ಮಲೆಗಳಲ್ಲಿ ಮದುಮಗಳು' ಕೃತಿಯನ್ನು ಅತ್ಯತ್ತಮ ಕನ್ನಡ ಕೃತಿ ಎಂದವರ ಸಂಖ್ಯೆ ಸಾಕಷ್ಟಿದೆ. ಶಿವಣ್ಣ ಲೋಕೇಶ್, ಹೇಮಾಮಾಲಿನಿ, ರಂಜನಾ ರಘು, ಅಂಬೋಜಿ ಲಕ್ಶ್ಮಿ, ಪ್ರಸಾದ್, ಮಹೇಶ್ ಸೇರಿದಂತೆ ಹಲವರು 'ಮಲೆಗಳಲ್ಲಿ ಮದುಮಗಳು' ಕೃತಿ ತಮ್ಮ ನೆಚ್ಚಿನ ಕನ್ನಡ ಕೃತಿ ಎಂದಿದ್ದಾರೆ.

ಗೃಹಭಂಗ
ಕಾದಂಬರಿ ಸಾಮ್ರಾಟ್ ಎಸ್.ಎಲ್.ಭೈರಪ್ಪನವರ 'ಗೃಹಭಂಗ' ಕೃತಿಗೆ ಅಭಿಮಾನಿಗಳ ಸಂಖ್ಯೆ ಕಡಿಮೆಯಿಲ್ಲ. ಪ್ರಕಾಶ್ ರಾಜಾರಾವ್, ಅಣ್ಣಪ್ಪ ಪೂಜಾರಿ, ರಂಜನಾ ರಘು ಮುಂತಾದವರು ಎಸ್.ಎಲ್.ಭೈರಪ್ಪನವರ ಗೃಹಭಂಗ ಕೃತಿ ತಮ್ಮ ನೆಚ್ಚಿನ ಕನ್ನಡ ಕೃತಿ ಎಂದು ಕಮೆಂಟ್ ಮಾಡಿದ್ದಾರೆ.

ಮೂಕಜ್ಜಿಯ ಕನಸುಗಳು
ಕಡಲತೀರದ ಭಾರ್ಗವ ಶಿವರಾಮ ಕಾರಂತರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ 'ಮೂಕಜ್ಜಿಯ ಕನಸುಗಳು' ಕೃತಿಯನ್ನೂ ಹಲವರು ಮೆಚ್ಚಿಕೊಂಡಿದ್ದಾರೆ. ಜೊತೆಗೆ ಅವರದೇ ಕೃತಿಗಳಾದ ಮರಳಿ ಮಣ್ಣಿಗೆ, ಅಳಿದ ಮೇಲೆ, ಬೆಟ್ಟದ ಜೀವ, ಪುಸ್ತಕಗಳೂ ಹಲವರಿಗೆ ನೆಚ್ಚಿನ ಪುಸ್ತಕವಾಗಿದೆ.

ಚಿದಂಬರ ರಹಸ್ಯ
ರಾಷ್ಟ್ರಕವಿ ಕುವೆಂಪು ಅವರ ಪುತ್ರ ಪೂರ್ಣಚಂದ್ರ ತೇಜಸ್ವಿ ಅವರ 'ಚಿದಂಬರ ರಹಸ್ಯ' ಕೃತಿಯನ್ನೂ ಹಲವರು ಮೆಚ್ಚಿಕೊಂಡಿದ್ದಾರೆ. ಜೊತೆಗೆ ತೇಜಸ್ವಿ ಅವರ ಇನ್ನಿತರ ಪ್ರಮುಖ ಕೃತಿಗಳಾದ ಕರ್ವಾಲೋ, ಕಾಡಿನ ಕತೆಗಳನ್ನು ಕೆಲವರು ಮೆಚ್ಚಿಕೊಂಡಿದ್ದಾರೆ.

ಇತರ ಪುಸ್ತಕಗಳು
ಈ ಎಲ್ಲದರೊಟ್ಟಿಗೆ ರವಿಬೆಳಗೆರೆ, ಸುಧಾಮೂರ್ತಿ, ಯಂಡಮೂರಿ ವೀರೇಂದ್ರನಾಥ್, ಶಂಕರ ಮೊಕಾಶಿ ಪುಣೇಕರ್, ಯಶವಂತ ಚಿತ್ತಾಲರ ಕೆಲವು ಕೃತಿಗಳನ್ನೂ ಪುಸ್ತಕ ಪ್ರೇಮಿಗಳು ಕನ್ನಡದ ಅತ್ಯುತ್ತಮ ಪುಸ್ತಕ ಎಂದಿದ್ದಾರೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications