ಬೆಂಗಳೂರಿನ ಮಳೆಯಲ್ಲಿ ಕೆಲಸಕ್ಕೆ ಹೋದವರ ಪರದಾಟ: ಮನೆಗೆ ಹೋಗಬೇಕಾ? ಆಫಿಸ್ ಅಂಗಳದಲ್ಲೇ ಮಲಗಬೇಕಾ?
ಬೆಂಗಳೂರಿನ ಹವಾಮಾನ ಮುನ್ಸೂಚನೆ ನೋಡಿದರೆ ರಾತ್ರಿ ತನಕ ಕೂಡ ಮಳೆ ನಿಲ್ಲುವುದಿಲ್ಲ. ರಾಜಧಾನಿ ಬೆಂಗಳೂರಿಗೆ ಮುತ್ತಿಗೆ ಹಾಕಿರುವ ಹಿಂಗಾರು ಮಳೆ ಮೋಡಗಳು ಧೋ.. ಅಂತಾ ಮಳೆ ಸುರಿಸುತ್ತಿವೆ. ಹೀಗಾಗಿ ಜನರು ಕೂಡ ಮನೆಗೆ ಹೋಗುವ ಬದಲು ಇವತ್ತು ಕಚೇರಿಯಲ್ಲೇ ಮಲಗಿಬಿಡೋದು ಒಳ್ಳೆಯದು ಎಂಬ ಚಿಂತೆಯಲ್ಲಿ ಇದ್ದಾರೆ. ಯಾಕಪ್ಪಾ ಅಂದ್ರೆ ಕಚೇರಿ ಅಂದ್ರೆ ಆಫಿಸ್ ಬಿಟ್ಟು ಹೊರಟ ಸಮಯದಲ್ಲಿ ಭರ್ಜರಿ ಮಳೆ ಬಂದರೆ ಕಥೆ ಏನು? ಲ್ಯಾಪ್ಟಾಪ್ & ಮೊಬೈಲ್ ಪರಿಸ್ಥಿತಿ ಏನು? ಎಂಬ ಚಿಂತೆ ಶುರುವಾಗಿದೆ.
ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ
ಬೆಂಗಳೂರಿನಲ್ಲಿ ಮಳೆಯ ಪರಿಣಾಮ ಇಷ್ಟೆಲ್ಲಾ ಸಮಸ್ಯೆ ಶುರುವಾಗಿರುವ ಕಾರಣಕ್ಕೆ ಜನರು ಇದೀಗ ಬಿಬಿಎಂಪಿ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕುತ್ತಿದ್ದಾರೆ. ಅಲ್ಲದೆ ಈಗಿನ ಸಮಸ್ಯೆಗಳಿಗೆ ಬಿಬಿಎಂಪಿ ಕಾರಣ & ಬಿಬಿಎಂಪಿ ಅಧಿಬೆಂಗಳೂರಿನಲ್ಲಿ ಮಳೆರಾಯ ತನ್ನ ನಿಜವಾದ ಮುಖ ತೋರಿಸುತ್ತಿದ್ದಾನೆ, ಹೀಗಾಗಿ ಜನರು ಬೆಚ್ಚಿಬಿದ್ದಿದ್ದಾರೆ. ಕಳೆದ 2 ವಾರ ಭರ್ಜರಿ ಮಳೆ ಕಾರಣ ಕನ್ನಡಿಗರು ನರಳಾಡಿ ಹೋಗಿದ್ದರು. ಹೀಗಿದ್ದಾಗ ಈ ವಾರ ನೆಮ್ಮದಿ ಸಿಗುತ್ತೆ ಬಿಡು, ಅನ್ನೋ ನಂಬಿಕೆ ಜನರಲ್ಲಿ ಇತ್ತು. ಆದರೆ ಈ ವಾರ ಕೂಡ ಮಳೆ ತನ್ನ ಅಸಲಿ ರೂಪ ತೋರಿಸಿದ್ದು, ಮಂಗಳವಾರ ಕೂಡ ಭಾರಿ ಮಳೆ ಶುರುವಾಗಿದೆ. ಆದರೆ ಮಳೆ ಮುನ್ಸೂಚನೆ ಇಲ್ಲದೆ ಕಚೇರಿಗೆ ಬಂದ ಜನರ ಪರಿಸ್ಥಿತಿ ಏನಾಗಿದೆ? ಬನ್ನಿ ತಿಳಿಯೋಣ.

ಬೆಂಗಳೂರಿನಲ್ಲಿ ಮಳೆಯ ಆರ್ಭಟದ ಹಿನ್ನೆಲೆ ಜನರ ಪರದಾಟ ಶುರುವಾಗಿದೆ. ಮಧ್ಯಾಹ್ನದ ತನಕ ಬಿಸಿಲು ಇದ್ದು, ಮಧ್ಯಾಹ್ನದ ನಂತರ ದಿಢೀರ್ ಶುರುವಾದ ಭಾರಿ ಮಳೆ ಕಂಡು ಜನರು ಹೆದರಿದ್ದಾರೆ. ಮಳೆ ಬೀಳುವ ಮುನ್ಸೂಚನೆ ಇಲ್ಲದೆ ಕಚೇರಿ ಮುಗಿಸಿ ಮನೆಗೆ ಹೋಗಲು ಪರದಾಡುತ್ತಿರುವ ಬೆಂಗಳೂರು ನಿವಾಸಿಗಳು, ಮಳೆ ನಿಲ್ಲುವ ನಿರೀಕ್ಷೆಯಲ್ಲಿ ಆಕಾಶ ನೋಡುತ್ತಿದ್ದಾರೆ. ಆದರೆ ರಾತ್ರಿ ತನಕ ಮಳೆ ನಿಲ್ಲುವ ಸಾಧ್ಯತೆ ಇಲ್ಲ. ಅದರಲ್ಲೂ ಉತ್ತರ ಬೆಂಗಳೂರಿನ ಪರಿಸ್ಥಿತಿ ಏನಾಗಿದೆ ಗೊತ್ತಾ?
ಆಫಿಸ್ ಅಂಗಳದಲ್ಲೇ ಮಲಗಬೇಕಾ?
ಬೆಂಗಳೂರಿನ ಮಳೆಯ ಮುನ್ಸೂಚನೆ ನೋಡಿದರೆ ಸದ್ಯಕ್ಕೆ ಮಳೆ ನಿಲ್ಲುವ ಯಾವುದೇ ಲಕ್ಷಣ ಈಗ ಕಾಣಿಸುತ್ತಿಲ್ಲ. ಅದ್ರಲ್ಲೂ ಬೆಂಗ್ಳೂರಿನ ಉತ್ತರ ಭಾಗದಲ್ಲಿ ಹೆಬ್ಬಾಳ, ಯಲಹಂಕ ಹೀಗೆ ಹಲವು ಪ್ರದೇಶಗಳು ಸೇರಿದಂತೆ ಉತ್ತರ ಬೆಂಗಳೂರು ತತ್ತರಿಸಿ ಹೋಗಿದೆ. ಮೇಘಸ್ಫೋಟ ಕಾರಣಕ್ಕೆ ಉತ್ತರ ಬೆಂಗಳೂರಿನ ರಸ್ತೆಗಳು ತುಂಬಿ ತುಳುಕುತ್ತಿದ್ದು, ರಸ್ತೆಗಳಲ್ಲಿ ವಾಹನ ಸಂಚಾರ ಕೂಡ ದೊಡ್ಡ ಸಮಸ್ಯೆಯಾಗಿದೆ. ಮತ್ತೊಂದು ಕಡೆ ಜನರು ಹೇಗಾದರೂ ಮಾಡಿ ಮನೆ ತಲುಪಬೇಕು ಎಂಬ ಪ್ರಯತ್ನದಲ್ಲಿ ಪರದಾಡುತ್ತಿದ್ದಾರೆ.ಕಾರಿಗಳ ನಿರ್ಲಕ್ಷ್ಯದ ಪರಿಣಾಮ ಹೀಗೆಲ್ಲಾ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದು ಕಡೆ ನಿನ್ನೆ ರಾತ್ರಿಯಿಂದ ಕೂಡ ಬಿಬಿಎಂಪಿ ಅಧಿಕಾರಿ ವರ್ಗ ನೀರು ನಿಂತ ಕಡೆಗಳಲ್ಲಿ ಹೋಗಿ ಪರಿಸ್ಥಿತಿ ಸರಿ ಮಾಡಲು ಪರದಾಡುತ್ತಿದೆ. ಇನ್ನೊಂದು ಕಡೆ ಬೆಂಗಳೂರಿನ ಬಹುತೇಕ ಕೆರೆ & ಕಟ್ಟೆಗಳು ತುಂಬಿ ತುಳುಕುತ್ತಿವೆ.
-
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ












Click it and Unblock the Notifications