ಕಳ್ಳತನ: ಐಟಿ ಕಂಪೆನಿ ಮಹಿಳಾ ಉದ್ಯೋಗಿ ಬಂಧನ

ಆತ್ಮೀಯ ಸ್ನೇಹಿತೆ ಮನೆಯಲ್ಲೇ ಚಿನ್ನಾಭರಣ ಕದಿಯುತ್ತಿದ್ದ ಗೋವಿಂದಪುರ ನಿವಾಸಿ ಎಲಿಜಬೆತ್ ಉರುಫ್ ಮೇರಿ (23) ಬಂಧಿತ ಉದ್ಯೋಗಿ. ಈಕೆಯಿಂದ 4.5 ಲಕ್ಷ ರೂ. ಮೌಲ್ಯದ 210 ಗ್ರಾಂ ತೂಕದ ಚಿನ್ನಾಭರಣವನ್ನು ಹೆಣ್ಣೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪಿಯುಸಿಯಲ್ಲಿ ಸಹಪಾಠಿಯಾಗಿದ್ದ ಬಿಡಿಎಸ್ ಗಾರ್ಡನ್ ನಿವಾಸಿ ಪೂಜಾ ಶರ್ಮಾ ಮನೆಗೆ ಆಗಾಗ್ಗೆ ಎಲಿಜಬೆತ್ ಬರುತ್ತಿದ್ದಳು. ಈ ಸಂದರ್ಭದಲ್ಲಿ ಪೂಜಾ ಶರ್ಮಾ ತನ್ನ ಆತ್ಮೀಯ ಸ್ನೇಹಿತೆಯಾದ ಎಲಿಜಬೆತ್ ಜೊತೆ ಮನೆಯ ಚಿನ್ನಾಭರಣದ ಮಾಹಿತಿಯನ್ನು ಹೇಳಿದ್ದರು. ಪೂಜಾ ಶರ್ಮ ಮನೆಯಲ್ಲಿ ಬಂಗಾರವಿದೆ ಎಂದು ತಿಳಿದು ಗೆಳತಿಯ ಮನೆಯನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಎಲಿಜಬೆತ್ ಕಳೆದ ಆರು ತಿಂಗಳಿಂದ ಅವರ ಮನೆಗೆ ಬಂದಾಗಲೆಲ್ಲಾ ಚಿನ್ನದ ಸರ, ಬಳೆ ಹೀಗೆ ಒಂದೊಂದೇ ಆಭರಣ ಕಳವು ಮಾಡುತ್ತಿದ್ದಳು.
ಮನೆಯಲ್ಲಿ ಇದ್ದಕ್ಕಿದಂತೆ ಚಿನ್ನದ ಆಭರಣಗಳು ನಾಪತ್ತೆಯಾಗುತ್ತಿರುವ ಆತಂಕಗೊಂಡ ಪೂಜಾ ಕುಟುಂಬ ಮನೆಯ ಕೆಲಸದವರ ಮೇಲೆ ಅನುಮಾನ ವ್ಯಕ್ತಪಡಿಸಿತ್ತು. ಈ ಸಂಬಂಧ ಪೂಜಾ ಸಹೋದರಿ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಿದ್ದರು. ಪೊಲೀಸರು ಕೆಲಸದರನ್ನು ವಿಚಾರಿಸಿದರೂ ಕಳ್ಳತನದ ಮಾಹಿತಿ ಸಿಕ್ಕಿರಲಿಲ್ಲ. ನಂತರ ಪೂಜಾ ಮನೆಗೆ ಆಗಾಗ ಬಂದು ಹೋಗುತ್ತಿರುವ ಪರಿಚಯಸ್ಥರ ಮಾಹಿತಿ ಸಂಗ್ರಹಿಸಿದಾಗ ಎಲಿಜಬೆತ್ ಬಂದು ಹೋಗುತ್ತಿರುವ ಮಾಹಿತಿ ಗೊತ್ತಾಗಿದೆ.
ಸಿಕ್ಕಿದ್ದು ಹೇಗೆ?
ಎಲಿಜಬೆತ್ ಬಗ್ಗೆ ಸಂಶಯ ಬಂದರೂ ಅವಳೇ ಕಳ್ಳತನ ಮಾಡುತ್ತಿದ್ದಾಳೆ ಎಂಬುದನ್ನು ಪತ್ತೆ ಮಾಡಲು ಎಲಿಜಬೆತ್ಳನ್ನು ಪೂಜಾ ಆಹ್ವಾನಿಸಿದ್ದರು. ಮೊದಲೇ ಟೇಬಲ್ ಮೇಲೆ ಮೂರು ಉಂಗುರವನ್ನು ಇಟ್ಟಿದ್ದರು. ನೀರು ತರುವ ನೆಪದಲ್ಲಿ ಆಡುಗೆ ಕೋಣೆಗೆ ಹೋಗಿ ಬರುವಷ್ಟರಲ್ಲಿ ಟೇಬಲ್ ಮೆಲಿದ್ದ ಉಂಗುರುಗಳು ನಾಪತ್ತೆಯಾಗಿದ್ದವು. ಎಲಿಜಬೆತ್ ಕದ್ದು ಸ್ವಲ್ಪ ಸಮಯದ ಬಳಿಕ ಹೊರಟು ಹೋಗಿದ್ದಳು. ಪೂಜಾ ಶರ್ಮ ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಹಿಳಾ ಸಿಬ್ಬಂದಿಗಳು ಎಲಿಜಬೆತ್ ಮನೆಯವರೆಗೆ ಹಿಂಬಾಲಿಸಿ ತಪಾಸಣೆ ಮಾಡಿದಾಗ ಕಂಚುಕ(ಬ್ರಾ)ದೊಳಗೆ ಮೂರು ಉಂಗರುಗಳು ಪತ್ತೆಯಾದವು.
ಮಧ್ಯಮವರ್ಗದ ಕುಟುಂಬದ ಹಿನ್ನೆಲೆಯಿಂದ ಬಂದ ಈಕೆ, ಪ್ರತಿಷ್ಠಿತ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಒಂದು ವರ್ಷದಿಂದ ಮಾರತ್ಹಳ್ಳಿಯ ಸಾಫ್ಟ್ವೇರ್ ಕಂಪೆನಿಯೊಂದರಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಳು. ಕುಟುಂಬದಲ್ಲಿ ಆರ್ಥಿಕ ಸಮಸ್ಯೆವಿದ್ದರೂ ಐಷಾರಾಮಿ ಜೀವನಕ್ಕೆ ಆಕೆ ಆಕರ್ಷಿತಳಾಗಿ ಈ ಕಳ್ಳತನ ಮಾಡುತ್ತಿದ್ದಳು. ಕದ್ದ ಆಭರಣಗಳನ್ನು ಮಾರಿ ಕಾರು ಹಾಗೂ 60 ಸಾವಿರ ಮೌಲ್ಯದ ಮೊಬೈಲ್ನ್ನು ಖರೀದಿಸಿದ್ದಳು.
-
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ












Click it and Unblock the Notifications