Get Updates
Get notified of breaking news, exclusive insights, and must-see stories!

Terror plot: ಮಸೀದಿಗೂ ಬಂಧಿತ ಶಂಕಿತ ಉಗ್ರರಿಗೂ ಯಾವುದೇ ಸಂಬಂಧ ಇಲ್ಲ: ಸಮಿವುಲ್ಲಾ

ಬೆಂಗಳೂರು, ಜುಲೈ 19: ಬೆಂಗಳೂರಿನಲ್ಲಿ ಬಂಧಿತರಾಗಿರುವ ಶಂಕಿತ ಉಗ್ರರಿಗೂ ನಮ್ಮ ಮಸೀದಿಗೂ ಯಾವುದೇ ಸಂಬಂಧ ಇಲ್ಲ ಎಂದು ಆರ್‌ಟಿ ನಗರದ ಮಸೀದಿಯ ಮೌಲ್ವಿ ಸಮಿವುಲ್ಲಾ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ಐವರು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ನಗರದಲ್ಲಿ ಆತಂಕ ಸೃಷ್ಟಿಯಾಗಿತ್ತು. ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಬೆಂಗಳೂರಿನ ಸಿಸಿಬಿ ಪೊಲೀಸರು ಆರ್‌ಟಿ ನಗರದಲ್ಲಿ ಕಾರ್ಯಾಚರಣೆ ಕೈಗೊಂಡು ಐವರನ್ನು ಬಂಧಿಸಿದ್ದರು.

RT Nagar mosque has nothing to do with arrested suspected militants: Samiullah

ಅವರು ಯಾರು ಏನು ಒಂದೂ ನಮಗೆ ಗೊತ್ತಿಲ್ಲ, ಎಲ್ಲಿ ತಂಗಿದ್ದರೂ ಎಂಬುದೂ ಕೂಡ ನಮಗೆ ಗೊತ್ತಿಲ್ಲ. ಇಲ್ಲಿಗೆ ಅವರು ಬರುತ್ತಲೂ ಇರಲಿಲ್ಲ. ಈ ಬಂಧಿತರಾಗಿರುವ ಐವರು ನನಗೆ ಪರಿಚಯವೂ ಇಲ್ಲ ಎಂದು ಹೇಳಿದರು. ಇನ್ನು ಸ್ಥಳಿಯರೊಬ್ಬರು ಮಾತನಾಡಿ, ತಾವು ಮೊದಲೇ ಹೇಳಿದಂತೆ ಮಸೀದಿಗೂ ಇಲ್ಲಿ ವಾಸವಿರುವ ನಮಗೂ ಯಾವುದೇ ಸಂಬಂಧ ಇಲ್ಲ, ಅವರ ಪರಿಚಯವೂ ನಮಗೆ ಇಲ್ಲ. ಪೊಲೀಸರು ಯಾವುದೇ ಕ್ರಮ ಬೇಕಾದರೂ ಜರುಗಿಸಬಹುದು. ಬಂಧಿತರಿಗೆ ಯಾವುದೇ ನೆಲೆ ಇಲ್ಲ ಎಂದು ತಿಳಿಸಿದರು.

ವಶಕ್ಕೆ ಪಡೆದ ಐವರು ಶಂಕಿತ ಉಗ್ರರು ಬೆಂಗಳೂರಿನ ಆರ್ ಟಿ ನಿವಾಸಿಗಳು ಮತ್ತು ಜುನೈದ್ ಗುಂಪಿನವರು ಎಂದು ಹೇಳಲಾಗಿದೆ. ಬಂಧಿತರನ್ನು ಸುಹೈಲ್, ಉಮರ್, ತಬ್ರೇಜ್, ಮುದಾಸಿರ್, ಫೈಜಲ್‌ರಬ್ಬಾ ಎಂದು ಗುರುತಿಸಲಾಗಿದೆ. ಸಿಸಿಬಿ ಹಾಗೂ ಕೇಂದ್ರ ಗುಪ್ತಚರ ಇಲಾಖೆ ಈ ಜಂಟಿ ಕಾರ್ಯಾಚರಣೆ ನಡೆಸಿದೆ ಎಂದು ತಿಳಿದು ಬಂದಿದೆ.

ಶಂಕಿತರ ಬಗ್ಗೆ ಮಾತನಾಡಿದ ಮನೆ ಬಾಡಿಗೆ ನೀಡಿದ್ದ ಮಾಲೀಕರು ಮಾತನಾಡಿ, ಶಂಕಿತನೊಬ್ಬ ಒಂದು ತಿಂಗಳಿಂದ 5,000 ಸಾವಿರ ಬಾಡಿಗೆಗೆ ಇಲ್ಲಿ ಉಳಿದುಕೊಂಡಿದ್ದರು, ಅವರ ಹಿನ್ನೆಲೆ ಬಗ್ಗೆ ನನಗೆ ಗೊತ್ತಿರಲಿಲ್ಲ, ನೀವು ನಮಗೆ ಅವಮಾನ ಮಾಡಬೇಡಿ ಸ್ವಾಮಿ. ಅವರು ಮೊದಲು ಮನೆ ಖಾಲಿ ಮಾಡುತ್ತೇವೆ ಎಂದು ಹೇಳಿದ್ದರು.

ನಾವು 40 ವರ್ಷದಿಂದ ಇಲ್ಲಿ ಇದ್ದೇವೆ. ಅವರ ಮಗು ಹೆಂಡತಿ ಜೊತೆ ಬಂದು ಮನೆ ಕೇಳಿದ್ದರು. ಹಾಗಾಗಿ ಅವರಿಗೆ ಮನೆ ಕೊಟ್ಟಿದ್ದೆ. ಅವರು ನಮಗೆ ಮನೆಗೆ ಅಡ್ವಾನ್ಸ್‌ ಕೊಟ್ಟಿರಲಿಲ್ಲ. ಅದ್ದರಿಂದ ಮನೆ ಖಾಲಿ ಮಾಡುವಂತೆ ಹೇಳಿದ್ದೆ. ಅದಕ್ಕೆ ಅವರು ಆಯ್ತು ಬೇರೆ ಮನೆ ಸಿಕ್ಕರೆ ಖಾಲಿ ಮಾಡುತ್ತೇವೆ ಶೀಘ್ರದಲ್ಲೇ ಎಂದು ಹೇಳಿದ್ದರು. ಅವರ ಹಿನ್ನೆಲೆ ಬಗ್ಗೆ ನನಗೆ ಅಷ್ಟಾಗಿ ಗೊತ್ತಿಲ್ಲ ಎಂದು ಹೇಳಿದರು.

ಇನ್ನು ಸುಲ್ತಾನ್ ಪಾಳ್ಯದಲ್ಲಿ ಬಂಧಿತ ಸಯ್ಯದ್‌ನ ಪತ್ನಿ ಮಾತನಾಡಿ, ಇದು ಯಾವ ಪ್ರಕರಣದಲ್ಲಿ ನಮ್ಮ ಯಜಮಾನರನ್ನು ಬಂಧಿಸಿದ್ದಾರೋ ಗೊತ್ತಿಲ್ಲ. ನಾನು ಅವರ ಪತ್ನಿ. ನಮ್ಮ ಮನೆಯಲ್ಲಿ ನಾನು ಅವರು ಮತ್ತು ನಮ್ಮ ಅತ್ತೆ ಮಾತ್ರವೇ ಇದ್ದೆವು. ಈಗ ಬಂಧಿತರಾಗಿರುವವರು ಇಲ್ಲಿ ಯಾರು ಕೂಡ ಬರುತ್ತಿರಲಿಲ್ಲ. ಅವರು ಯಾರು ಎಂದು ನನಗೆ ಗೊತ್ತಿಲ್ಲ. ಅವರನ್ನು ನಾನು ನೋಡಿಯೂ ಇಲ್ಲ. ಸುನೈದ್ ಮಾತ್ರವೇ ಗೊತ್ತಿತ್ತು ಅವನು ಈ ಮೊದಲು ಕೊಲೆ ಪ್ರಕರಣದಲ್ಲಿ ಆರೋಪಿತನಾಗಿದ್ದನು, ಎಲ್ಲ ವಿಚಾರಣೆ ಮಾಡಿಯೇ ಬಂಧಿಸಿದ್ದಾರೆ. ಗನ್‌ ಕೂಡ ಹೇಗೆ ಬಂತು ಎಂದು ಗೊತ್ತಿಲ್ಲ ಎಂದರು.

ಈ ಬಗ್ಗೆ ಬೆಂಗಳೂರಿನಲ್ಲಿ ವಿದ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು ಬಂಧಿಸುವ ಮೂಲಕ‌ ಸಂಭವಿಸಬಹುದಾಗಿದ್ದ ಭಾರೀ ಅನಾಹುತವನ್ನು ವಿಫಲಗೊಳಿಸಿರುವ ರಾಜ್ಯದ ಸಿಸಿಬಿ ಪೊಲೀಸರಿಗೆ ಅಭಿನಂದನೆಗಳು. ಭಯೋತ್ಪಾದಕ ಚಟುವಟಿಕೆಗಳು ಸೇರಿದಂತೆ ಯಾವುದೇ ತೆರನಾದ ದೇಶವಿರೋಧಿ ಚಟುವಟಿಗಳಲ್ಲಿ ತೊಡಗಿರುವವರನ್ನು ಪತ್ತೆಹಚ್ಚಿ, ಬೇರು ಸಮೇತ ಅಂತಹ ಶಕ್ತಿಗಳನ್ನು ರಾಜ್ಯದಿಂದ ಕಿತ್ತೊಗೆಯಲು ನಾವು ಸದಾ ಸಿದ್ಧರಿದ್ದೇವೆ. ನಾಡಿನ ಪ್ರತಿಯೊಬ್ಬರೂ ಸುರಕ್ಷತೆಯ ಬದುಕು ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+