ಪ್ರತಿಮಾ ಬೇಡಿಯ 'ನೃತ್ಯ ಗ್ರಾಮ' ಶೀಘ್ರವೇ ಸರ್ಕಾರದ ಸುಪರ್ದಿಗೆ?
ಖ್ಯಾತ ಒಡಿಸ್ಸಿ ನೃತ್ಯ ಕಲಾವಿದೆ ಪ್ರತಿಮಾ ಬೇಡಿ ನಿರ್ಮಿಸಿದ್ದ 'ನೃತ್ಯ ಗ್ರಾಮ' ದತ್ತು ಪಡೆಯಲು ರಾಜ್ಯ ಸರ್ಕಾರದ ನಿರ್ಧಾರ. ಸೋಮವಾರ ಅಂಗೀಕಾರವಾದ ಸಂಸ್ಕೃತಿ ಕುರಿತ ಶಿಫಾರಸುಗಳ ಮುಂದುವರಿದ ಭಾಗವಾಗಿ ಈ ಸಂಸ್ಥೆ ದತ್ತು ಪಡೆಯಲು ನಿರ್ಧಾರ. ಬೆಂಗಳ
ಬೆಂಗಳೂರು, ಆಗಸ್ಟ್ 10: ಖ್ಯಾತ ಒಡಿಸ್ಸಿ ನೃತ್ಯ ಕಲಾವಿದೆ, ದಿವಂಗತ ಪ್ರತಿಮಾ ಬೇಡಿ ಅವರ ಕನಸಿನ ಕೂಸಾದ 'ನೃತ್ಯ ಗ್ರಾಮ'ವನ್ನು ಸರ್ಕಾರ ದತ್ತು ಪಡೆಯಲು ಮುಂದಾಗಿದೆ.
ಬೆಂಗಳೂರಿನ ಹೊರವಲಯದಲ್ಲಿರುವ 'ಹೆಸರುಘಟ್ಟ'ದಲ್ಲಿ 1990ರಲ್ಲಿ ಪ್ರತಿಮಾ ಬೇಡಿ ಅವರು, ನೃತ್ಯ ಗ್ರಾಮವನ್ನು ಕಟ್ಟಿದ್ದರು. ತನ್ನದೇ ಆದ ವಿಶಿಷ್ಠ ಬೋಧನಾ ಮಾದರಿಗಳಿಂದಾಗಿ ಇದು ದೇಶದ ಮೊಟ್ಟ ಮೊದಲ ಆಧುನಿಕ ಗುರುಕುಲ ಎಂದೂ ಹೆಸರು ಗಳಿಸಿತ್ತು. ಇದೇ ಗುರುಕುಲವನ್ನು ದತ್ತು ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ.

ಮೂರು ವರ್ಷಗಳ ಹಿಂದೆ, ಹಿರಿಯ ಸಾಹಿತಿ, ಚಿಂತಕ ಬರಗೂರು ರಾಮಚಂದ್ರಪ್ಪ ಅವರ ಸಮಿತಿಯು ನೀಡಿದ್ದ ಸಂಸ್ಕೃತಿ ಶಿಫಾರಸುಗಳನ್ನು ರಾಜ್ಯ ಸರ್ಕಾರ ಸೋಮವಾರ (ಆಗಸ್ಟ್ 7) ಅಂಗೀಕರಿಸಿದೆ. ಇದರ ಮುಂದುವರಿದ ಭಾಗವಾಗಿ, ನೃತ್ಯ ಗ್ರಾಮವನ್ನು ದತ್ತು ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ.
ಆದರೆ, ಈ ನಿರ್ಧಾರಕ್ಕೆ ಕೆಲ ನೃತ್ಯ ಪಟುಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಖ್ಯಾತ ನೃತ್ಯಪಟು ಪ್ರತಿಭಾ ಪ್ರಹ್ಲಾದ್, ''ಈಗಾಗಲೇ ಸರ್ಕಾರಿ ಸ್ವಾಮ್ಯದ ರಂಗಮಂದಿರಗಳು ಹಾಗೂ ಸಭಾಂಗಣಗಳು ದುರವಸ್ಥೆಯಲ್ಲಿವೆ. ಅವುಗಳಿಗೆ ಮೊದಲು ಸರ್ಕಾರ ಕಾಯಕಲ್ಪ ನೀಡಲಿ. ನೃತ್ಯ ಗ್ರಾಮವನ್ನು ಸರ್ಕಾರ ದತ್ತು ಪಡೆಯುವುದು ಬೇಡ. ಅದಕ್ಕೆ ಬದಲಾಗಿ, ಸೂಕ್ತ ವ್ಯಕ್ತಿಗಳ ಆಡಳಿತ ಮಂಡಳಿಯೊಂದನ್ನು ರಚಿಸಿ, ಈ ನೃತ್ಯ ಗ್ರಾಮವನ್ನು ಖಾಸಗಿಯಾಗಿಯೇ ನಿರ್ವಹಣೆ ಮಾಡಲು ಅವಕಾಶ ಮಾಡಿಕೊಡಲಿ'' ಎಂದಿದ್ದಾರೆ.
-
SSLC ಪರೀಕ್ಷೆ-1 ಆರಂಭ: ಮಲ್ಲೇಶ್ವರಂನ ಕೆಪಿಎಸ್ ಶಾಲೆಗೆ ಸಚಿವ ಮಧು ಬಂಗಾರಪ್ಪ ಭೇಟಿ, ವಿದ್ಯಾರ್ಥಿಗಳಿಗೆ ಶುಭಹಾರೈಕೆ -
Gold Price Today: ಯುಗಾದಿಗೂ ಮೊದಲೇ ಚಿನ್ನದ ದರದಲ್ಲಿ ಭಾರೀ ಇಳಿಕೆ; ಆಭರಣ ಪ್ರಿಯರಿಗೆ ಇಂದೇ ಹಬ್ಬ -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
ವಲಸೆ ಕಾರ್ಮಿಕರಿಂದಾಗಿ ಉದ್ಯೋಗ ನಷ್ಟವಾಗುತ್ತಿರುವ ಬಗ್ಗೆ ಅಧಿಕೃತ ದೂರು ಸಲ್ಲಿಕೆಯಾಗಿಲ್ಲ: ಕಾರ್ಮಿಕ ಇಲಾಖೆ ಸ್ಪಷ್ಟನೆ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
RCB: ಆರ್ಸಿಬಿಯಲ್ಲಿ ಜೋಶ್ ಹ್ಯಾಜಲ್ವುಡ್ ಸ್ಥಾನ ತುಂಬುವ ಆಟಗಾರ ಇವರೇ ನೋಡಿ -
ಶೆಲ್ ಬಂಕ್ನಲ್ಲಿ ಪೆಟ್ರೋಲ್ ದರ ಏರಿಕೆ: ಬೆಂಗಳೂರಿನಲ್ಲಿ 10 ದಿನಗಳಲ್ಲಿ 4.50 ರೂಪಾಯಿ ಹೆಚ್ಚಳ; ಇಲ್ಲಿದೆ ದರಪಟ್ಟಿ -
ಕನ್ನಡಿಗರ ಮುಕ್ತಜ್ಞಾನದ ತಾಣ ‘ಕಣಜ’ಕ್ಕೆ ಸಿಕ್ಕಿಬಿಟ್ಟಿತೆ ಮುಕ್ತಿ? 3 ತಿಂಗಳಿಂದ ಕಣ್ಮರೆಯಾದ ವೆಬ್ಸೈಟ್ -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
ಯುಗಾದಿ, ರಂಜಾನ್ ಹಬ್ಬಕ್ಕೆ 2000 ವಿಶೇಷ ಬಸ್: ಮುಂಗಡ ಟಿಕೆಟ್ ಗೆ ರಿಯಾಯ್ತಿ ಘೋಷಿಸಿದ KSRTC -
ಬೆಂಗಳೂರು ಕರಡು ಮತಪಟ್ಟಿ ಹಾಗೂ ಕಾಂಗ್ರೆಸ್ನ ಮತಚೋರಿಯ ಸುಳ್ಳುಗಳ ಅನಾವರಣ: ಲೇಖಕ ರಾಜೀವ ಹೆಗಡೆ ಬರಹ










Click it and Unblock the Notifications