Airtel: ಬೆಂಗಳೂರು ಏರ್ಟೆಲ್ ಬಳಕೆದಾರರಿಗೆ ನೆಟ್ವರ್ಕ್ ಕಿರಿಕಿರಿ, ಅಡಚಣೆ!
ಬೆಂಗಳೂರು, ಮಾರ್ಚ್ 06: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ರಾತ್ರಿ ಟೆಲಿಕಾಂ ಮೊಬೈಲ್ ಬಳಕೆದಾರರು ಸಾಕಷ್ಟು ಅಡಚರಣೆ ಎದುರಿಸಿದ್ದಾರೆ. ಏಕೆಂದರೆ ರಾತ್ರಿ ತುಂಬಾ ಸಮಯದವರೆಗೆ ಕರೆ ಮಾಡಲು, ಸಂದೇಶ ರವಾನಿಸಲು ಹರಸಾಹರಪಡುವಂತಾಯಿತು. ಕರೆ ಸಾಧ್ಯವಾದರೂ ಸಹಿತ ಸಾಕಷ್ಟು ಅಡೆತಡೆ, ಕರೆ ಕಡಿತಗೊಳ್ಳುವುದು ನಡೆಯಿತು. ಹಾಗಾದರೆ ಯಾವ ನೆಟ್ವರ್ಕ್ ಅಡಿ ನಡೆಯಿತು, ಅದಕ್ಕೆ ಕಾರಣವೇನು?.
ಬೆಂಗಳೂರಿನ ಅನೇಕ ಭಾಗಗಳಲ್ಲಿ ಮೊಬೈಲ್ ಫೋನ್ ಬಳಕೆದಾರರು ನೆನ್ನೆ ಸಂಜೆ ಬಳಿಕ ಸಾಕಷ್ಟು ಅಡಚಣೆ ಎದುರಿಸಿದ್ದಾರೆ. ಯಾರೆ ಕರೆ ಮಾಡಿದರೂ ಧ್ವನಿ ಕರೆಯಲ್ಲಿ ಅಸ್ಪಷ್ಟತೆ, ಇಂಟರ್ನೆಟ್ ವೇಗವು ಕಡಿಮೆ ಆಗಿದೆ. ಇದು ಎಲ್ಲ ಜಿಯೋ, ವಡಾಫೋನ್, ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ನಲ್ಲಿ ಆಗಿಲ್ಲ. ಬದಲಾಗಿ ಏರ್ಟೆಲ್ ಬಳಕೆದಾರರಿಗೆ ಮಾತ್ರ ಅನುಭವವಾಗಿದೆ.

ಕರೆ ಮಾಡಿದಾಗ ಎರಡು ಬದಿಯ ಏರ್ಟೆಲ್ ಗ್ರಾಹಕರು ಇದ್ದರಂತೂ ಸಮಸ್ಯೆ ಮೊದಲೇ ಅನುಭವಕ್ಕೆ ಬಂದಿರುತ್ತದೆ. ತಾಂತ್ರಿಕ ಸಮಸ್ಯೆಯೇ ಇದಕ್ಕೆ ಕಾರಣ ಎಂದು ಏರ್ಟೆಲ್ ಆಪರೇಟರ್ಸ್ಗಳು ಮಾಹಿತಿ ನೀಡಿದ್ದಾರೆ. ಕರೆ ಮಾಡಲು, ಸಂದೇಶ ಕಳುಹಿಸಿ ರಾತ್ರಿ ಹೆಚ್ಚಿನ ಸಮಸ್ಯೆಯಾಗಿತ್ತು.
ಇದಷ್ಟೇ ಅಲ್ಲದೇ ಕರೆ ಮಾಡಿದಾಗ ಕೇಳುವ ಅಸಾಮಾನ್ಯ ರಿಂಗ್ಟೋನ್ ಇದು ಸಾಕಷ್ಟು ಕಿರಿ ಕಿರಿ ಉಂಟು ಮಾಡುತ್ತಿದೆ. ಸೈಬರ್ ಅಪರಾಧ ಕುರಿತು ಕರೆ ಮಾಡಿದ ಕೂಡಲೇ ಕೇಳುವ ಧ್ವನಿ ಆರಂಭದಲ್ಲಿ ಹಿತವೆನಿಸಿದರೆ, ಮಾಹಿತಿ ಅಂಶವೆನಿಸಿದರೂ ಸಹಿತ ಬರು ಬರುತ್ತಾ ಅದೊಂದು ಕಿರಿ ಕಿರಿ ಅನ್ನಿಸುತ್ತದೆ. ತುರ್ತು ಸಂದರ್ಭಗಳಲ್ಲಿ ಕರೆ ಮಾಡುವವರಿಗೆ ರಿಂಗ್ಟೋನ್ ಕೊಂಚ ಅಹಿತವೆನಿಸುತ್ತಿದೆ ಎಂದು ಕೆಲವು ಹೇಳಿಕೊಂಡಿದ್ದಾರೆ.
ಜಿಯೋ, ವಡಾಫೋನ್, ಬಿಎಸ್ಎನ್ಎಲ್ ಟೆಲಿಕಾಂ ಆಪರೇಟರ್ಗಳ ಚಂದಾದಾರರಿಗೆ ಯಾವುದೇ ಸಮಸ್ಯೆ ಆಗಿಲ್ಲ. ಆ ಕಂಪನಿಗಳ ನೆಟ್ವರ್ಕ್ ಗೆ ಸಮಸ್ಯೆ ಆಗಿಲ್ಲ. ಈ ಸಮಸ್ಯೆ ಏರ್ಟೆಲ್ ನೆಟ್ವರ್ಕ್ ವ್ಯಾಪ್ತಿಯಲ್ಲಿ ಮಾತ್ರವೇ ಆಗಿದ್ದರಿಂದ ಆ ಗ್ರಾಹಕರು ಸ್ವಲ್ಪ ತೊಂದರೆ ಎದುರಿಸಬೇಕಾಯಿತು.
ಏರ್ಟೆಲ್ ಸೈಟ್ಗಳ ಪೈಕಿ ಒಂದರಲ್ಲಿ ಮೂಲಸೌಕರ್ಯಕ್ಕೆ ಸಂಬಂಧಿತ ಸಮಸ್ಯೆ ಕಂಡು ಬಂದಿತ್ತು. ಅದನ್ನು ಈಗ ಪರಿಹರಿಸಲಾಗಿದೆ. ಯಾವುದೇ ಸಮಸ್ಯೆ ಇಲ್ಲ. ವ್ಯವಸ್ಥೆಯನ್ನು ಸಂಪೂರ್ಣ ಮರು ಸ್ಥಾಪನೆ ಮಾಡಿ, ತಾಂತ್ರಿಕ ಸಮಸ್ಯೆ ಸರಿಪಡಿಸಲಾಗಿದೆ. ಹೀಗಾಗಿ ಕರೆಗಳು, ಎಸ್ಎಂಎಸ್, ಇಂಟರ್ನೆಟ್ಗೆ ಯಾವುದೇ ಸಮಸ್ಯೆ ಆಗುತ್ತಿಲ್ಲ ಎಂದು ಟೆಲಿಕಾಂ ಆಪರೇಟರ್ಸ್ಗಳು ತಿಳಿಸಿದ್ದಾರೆ.
ಜೋರು ಗಾಳಿ ಬೀಸಿದಾಗ ಸಮಸ್ಯೆ ಸೃಷ್ಟಿ
ತಡರಾತ್ರಿ ತಂಪು ವಾತಾವರಣ ಕಂಡು ಬರುತ್ತಿರುವ ಬೆಂಗಳೂರಿನಲ್ಲಿ ಕೆಲವು ಪ್ರದೇಶಗಳಲ್ಲಿ ಜೋರು ಗಾಳಿ ಬೀಸುತ್ತದೆ. ಹೆಚ್ಚು ಗಿಡ ಮರಗಳು ಇರುವ ಪ್ರದೇಶಗಳಲ್ಲಿ ಹೀಗೆ ವ್ಯಾಪಕ ಗಾಳಿ ದಿಢೀರ್ ಬೀಸಿದಾಗ ಇಂತಹ ತಾಂತ್ರಿಕ ಸಮಸ್ಯೆಗಳು ಉದ್ಭವಿಸುವುದು ಸಾಮಾನ್ಯ. ಅದನ್ನು ಕಂಡು ಕೊಂಡು ಕೂಡಲೇ ಸರಿ ಮಾಡಿದ್ದೇವೆ. ಸರಿಪಡುವವರೆಗೆ ಗ್ರಾಹಕರು ತಾತ್ಕಾಲಿಕವಾಗಿ ಧ್ವನಿ ಕರೆ, ಇಂಟರ್ನೆಟ್ ಸಮಸ್ಯೆ ಎದುರಿಸಿರುತ್ತಾರೆ. ಬಳಿಕ ಎಲ್ಲವು ಸರಿ ಮಾಡಲಾಗುತ್ತದೆ ಎಂದಿದ್ದಾರೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications