Karnataka Dam Water Level: ಮುಂದುವರಿದ ಭಾರೀ ಮಳೆ! ಜಲಾಶಯಗಳು ಭರ್ತಿ: ಇಂದಿನ ಮಟ್ಟ, ವಿವರ
Dam Water Level: ಕರ್ನಾಟಕ ರಾಜ್ಯಾದಲ್ಲಿ ಈವರೆಗೆ ಉತ್ತಮ ಮಳೆ ಆಗಿದೆ. ಅದರಲ್ಲೂ ವಿಶೇಷವಾಗಿ ಮಲೆನಾಡು, ಕರಾವಳಿ ಭಾಗದಲ್ಲಿ ಭಾರೀ ಮಳೆ ದಾಖಲಾಗಿದೆ. ಕೊಡಗು, ಮೈಸೂರು, ತಲಕಾವೇರಿ, ಪಶ್ಚಿಮ ಘಟ್ಟಗಳು ಹಾಗೂ ಕೇರಳ ಗಡಿ ಭಾಗಗಳಲ್ಲಿ ಹೆಚ್ಚಿನ ಮಳೆ ಆಗಿದೆ. ಹೀಗಾಗಿ ರಾಜ್ಯದ ಹಲವು ಜಲಾಶಯಗಳು ಅವಧಿಗೂ ಮೊದಲೇ ಭರ್ತಿಯಾಗಿ ತುಂಬಿ ಹರಿಯುತ್ತಿವೆ. ಇಂದು ಗುರುವಾರ ಎಲ್ಲೆಲ್ಲಿ ಹೆಚ್ಚು ಮಳೆ ಆಗಿದೆ. ಯಾವೆಲ್ಲ ಡ್ಯಾಂಗಳ ಒಳಹರಿವು ಏರಿಕೆ ಆಗಿದೆ ಎಂಬ ಮಾಹಿತಿ ಇಲ್ಲಿದೆ.
ಕೊಡಗಿನ ತಲಕಾವೇರಿಯಲ್ಲಿ 31 ಜುಲೈ ರಂದು ಬೆಳಗ್ಗೆವರೆಗೆ 35.6 ಮಿಮೀ ಮಳೆ ಆಗಿದೆ. ಜುಲೈ ಸಂಚಿತ ಮಳೆ 2375.4 ಮಿಮೀ. ಮತ್ತು ವಾರ್ಷಿಕ ಮಳೆ 6309.2 ಮಿಮೀ ನಷ್ಟಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ. ಅಷ್ಟೇ ಅಲ್ಲದೇ, ಭಾಗಮಂಡಲದಲ್ಲಿ ಇಂದು ಬೆಳಗ್ಗೆವರೆಗೆ 24.2 ಮಿಮೀ. ಮಳೆ ದಾಖಲಾಗಿದೆ. ಈ ಭಾಗದ ಜುಲೈ ಸಂಚಿತ ಮಳೆ 1686 ಮಿಮೀ ಆಗಿದ್ದು, ವಾರ್ಷಿಕ ಮಳೆ 4644 ಮಿಮೀನಷ್ಟು ಎಂದು ಹವಾಮಾನ ಕೇಂದ್ರ ತಿಳಿಸಿದೆ.

ಕೆಲವೆಡೆ ಮಳೆ ಕಡಿಮೆ ಆಗಿದ್ದು, ಮಲೆನಾಡಿನಲ್ಲಿ ಇಳಿಕೆ ಆಗಿಲ್ಲ. ಕೊಡಗು ಜಿಲ್ಲೆ ವ್ಯಾಪ್ತಿಯ ಸೂರ್ಲಬ್ಬಿಯಲ್ಲಿ 60 ಮಿ.ಮೀ, ಸಂಪಾಜೆ 60ಮಿ.ಮೀ, ಶಾಂತಳ್ಳಿ 38 ಮಿ.ಮೀ, ತಲಕಾವೇರಿ 35.6 ಮಿ.ಮೀ, ಮಡಿಕೇರಿ 31 ಮಿ.ಮೀ, ಭಾಗಮಂಡಲ 24.2 ಮಿ.ಮೀ, ಅಮ್ಮತ್ತಿ 20.5 ಮಿ.ಮೀ, ಶನಿವಾರಸಂತೆ 16 ಮಿ.ಮೀ, ಸೋಮವಾರಪೇಟೆ 14 ಮಿ.ಮೀ, ಬಾಳೆಲೆ 12.09 ಮಿ.ಮೀ, ನಾಪೋಕ್ಲು 12ಮಿ.ಮೀ, ಕೊಡ್ಲಿಪೇಟೆ 12 ಮಿ.ಮೀ, ಪೊನ್ನಂಪೇಟೆ 12 ಮಿ.ಮೀ, ಸುಂಟಿಕೊಪ್ಪ 8ಮಿ.ಮೀ, ಶ್ರೀಮಂಗಲ 7.2 ಮಿ.ಮೀ, ಹುದಿಕೆರೆ 7.1 ಮಿ.ಮೀ, ವಿರಾಜಪೇಟೆ 6.2 ಮಿ.ಮೀ ಮತ್ತು ಕುಶಾಲನಗರದಲ್ಲಿ 3ಮಿ.ಮೀ ಮಳೆ ಆಗಿದೆ.
ಹೀಗೆ ಮಳೆ ಮುಂದುವರಿ ಪರಿಣಾಮ ಕೃಷ್ಣ ರಾಜ ಸಾಗರ, ಕಬಿನಿ, ಹಾರಂಗಿ ಡ್ಯಾಂ, ಹೇಮಾವತಿ ಅಣೆಕಟ್ಟು, ಭದ್ರಾ, ಆಲಮಟ್ಟಿ ಸೇರಿದಂತೆ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಒಳಹರಿವು ಏರಿಕೆ ಆಗಿದೆ. ನದಿಗಳು ತುಂಬಿ ಹರಿಯುತ್ತಿವೆ. ಅಣೆಕಟ್ಟುಗಳಿಂದ ಅಪಾರ ಪ್ರಮಾಣದಲ್ಲಿ ನೀರನ್ನು ಹೊಡ ಬಿಡಸಲಾಗುತ್ತಿದೆ.
ಹೇಮಾವತಿ ಅಣೆಕಟ್ಟು ವಿವರ
ಡ್ಯಾಂ ಒಟ್ಟು ಎತ್ತರ : 2922 ಅಡಿ
ನೀರು ತುಂಬಿರುವ ಪ್ರಮಾಣ : 2921 ಅಡಿ
ಒಟ್ಟು ನೀರು ಸಂಗ್ರಹ ಸಾಮರ್ಥ್ಯ : 37.10 ಟಿಎಂಸಿ
ಇಂದಿನ ನೀರು ಸಂಗ್ರಹ: 36.137
ಒಟ್ಟು ಒಳಹರಿವು: 9303 ಕ್ಯೂಸೆಕ್
ಇಂದಿನ ಹೊರಹರಿವು: 8125 ಕ್ಯೂಸೆಕ್
KRS ಡ್ಯಾಂ ನೀರು ಸಂಗ್ರಹದ ಮಟ್ಟ
ಡ್ಯಾಂ ಒಟ್ಟು ಎತ್ತರ: 124.80 ಅಡಿ
ಇಂದಿನ ನೀರು ಸಂಗ್ರಹ: 121.65 ಅಡಿ
ಕೆಆರ್ಎಸ್ ಒಟ್ಟು ನೀರು ಸಾಮರ್ಥ್ಯ: 49.452 ಟಿಎಂಸಿ
ಇಂದಿನ ನೀರು ಸಂಗ್ರಹ: 45.172 ಟಿಎಂಸಿ
ಇವತ್ತಿನ ಒಳಹರಿವು : 21,635 ಕ್ಯೂಸೆಕ್
ಒಟ್ಟು ಹೊರ ಹರಿವು: 13,881 ಕ್ಯೂಸೆಕ್
-
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rain: ಬೆಂಗಳೂರಿನಲ್ಲಿ ತಾಪಮಾನ ಕುಸಿತ: ಸುಡುಬಿಸಿಲಿಗೆ ಬ್ರೇಕ್ ಹಾಕಿದ ವರ್ಷದ ಮೊದಲ ಮಳೆ, ತಂಪಾದ ಸಿಲಿಕಾನ್ ಸಿಟಿ -
Bengaluru Rain: ಬೆಂಗಳೂರಿನ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ: ಯುಗಾದಿಗೆ ಮೊದಲ ಮಳೆ; ರಾಜ್ಯಕ್ಕೆ ಶುಭಸೂಚಕ -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು












Click it and Unblock the Notifications