Bengaluru Tunnel Road: ಅವೈಜ್ಞಾನಿಕ ಟನಲ್ ರಸ್ತೆ ಯೋಜನೆಯಿಂದ ಸಾರಿಗೆ ವ್ಯವಸ್ಥೆ ನಾಶ: ತೇಜಸ್ವಿ ಸೂರ್ಯ
ಬೆಂಗಳೂರು, ಜೂನ್ 23: ಬ್ರ್ಯಾಂಡ್ ಬೆಂಗಳೂರು ಉಪಕ್ರಮದಡಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ 18 ಕಿ.ಮೀ. ಉದ್ದದ ಟನಲ್ ರಸ್ತೆ ಕಾಮಗಾರಿ ಯೋಜನೆಗೆ ಶೀಘ್ರವೇ ಟೆಂಡರ್ ಕರೆಯಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಇತ್ತ ಯೋಜನೆ ವಿರುದ್ಧ ಆಕ್ಷೇಪಗಳು ಹೆಚ್ಚಾಗುತ್ತಿವೆ. ಸಾರ್ವಜನಿಕ ಸಮಸ್ಯೆ ಮತ್ತು ಸಾರ್ವಜನಿಕ ಸಾರಿಗೆ ನಿರ್ಲಕ್ಷಿಸುವತ್ತಿರುವ ಡಿ.ಕೆ ಶಿವಕುಮಾರ್ ಅವರಿಗೆ ಸಂಸದ ತೇಜಸ್ವಿ ಸೂರ್ಯ ಅವರು ಧನ್ಯವಾದ ತಿಳಿಸಿದ್ದಾರೆ.
ಬೆಂಗಳೂರು ಮೊದಲ ಅತಿ ಉದ್ದದ ಬೃಹತ್ ಟನಲ್ ರಸ್ತೆ ಯೋಜನೆಗೆ (ಹೆಬ್ಬಾಳ ಎಸ್ಟಿಮ್ ಮಾಲ್-ಸಿಲ್ಕ್ ಬೋರ್ಡ್) ಇತ್ತೀಚೆಗೆ ತಜ್ಞರೇ ಎಚ್ಚರಿಸಿದ್ದರು. ಅದರ ಬೆನ್ನಲ್ಲೆ ಸಂಸದ ತೇಜಸ್ವಿ ಸೂರ್ಯ ಅವರು ನಾಗರಿಕ ಸಮಸ್ಯೆಗಳನ್ನು ವಿವರಿಸಿದ್ದಾರೆ. ಯೋಜನೆ ಡಿಪಿಆರ್ ರಚನೆ ವೇಳೆಯಲ್ಲೂ ಅವರು ಯೋಜನೆಯನ್ನು ವಿರೋಧಿಸಿದ್ದರು. ಇದೀಗ ಸುರಂಗ ಮಾರ್ಗದ ಪ್ರಯೋಜನ ತಿಳಿಸಿದ ಡಿಕೆ ಶಿವಕುಮಾರ್ ವಿವರಣೆಯನ್ನು ಸಂಸದರು ಒಪ್ಪಿಲ್ಲ.

ರಸ್ತೆ ಗುಂಡಿಗಳನ್ನು ಮುಚ್ಚದೇ ಸಮಸ್ಯೆ ಮುಂದುವರಿದಿದೆ. ಸಾರ್ವಜನಿಕ ಸಾರಿಗೆಗೆ ಹಣದ ಕೊರತೆ ಇದೆ. ನಮ್ಮ ಮೆಟ್ರೋ ಯೋಜನೆಗಳು ಸಕಾಲದಲ್ಲಿ ಮುಗಿಯದೇ ವಿಳಂಬವಾಗಿವೆ. ದರ ನಿಗದಿ ಸಮಿತಿ ವರದಿಗಳನ್ನು ತಡೆಹಿಡಿಯಲಾಗಿದೆ. ಅವೈಜ್ಞಾನಿಕ ಯೋಜನೆಯನ್ನು ಮುಂದುವರೆಸಲಾಗಿದೆ. ಇದೆಲ್ಲ ಪರಿಹರಿಸಬೇಕಾದ ಸರ್ಕಾರ ನಾಗರಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿದೆ ಎಂದು ತೇಜಸ್ವಿ ಸೂರ್ಯ ಅವರು ಎಕ್ಸ್ ಪೋಸ್ಟ್ ಮೂಲಕ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾಲ್ಕು ಚಕ್ರದ ವಾಹನಗಳಿಗೆ ₹600 ಟೋಲ್ ಸುಂಕ..
ರಾಜ್ಯ ಸರ್ಕಾರವು ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆಯನ್ನು ವ್ಯವಸ್ಥಿತವಾಗಿ ನಾಶಪಡಿಸುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಹೆಬ್ಬಾಳ-ಸಿಲ್ಕ್ಬೋರ್ಡ್ ಸುರಂಗ ಯೋಜನೆ ಸಂಪೂರ್ಣ ಸಮಸ್ಯೆಗಳಿಂದ ಕೂಡಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಸುರಂಗ ರಸ್ತೆ ನಿರ್ಮಾಣವಾದರೆ, ಅದು ಕೇವಲ ನಾಲ್ಕು ಚಕ್ರದ ವಾಹನಗಳಿಗೆ ಮಾತ್ರ ಲಭ್ಯವಾಗುತ್ತದೆ. ಅಲ್ಲಿನ ಟೋಲ್ ಶುಲ್ಕ ಪ್ರತಿ ರಿಟರ್ನ್ ಟ್ರಿಪ್ಗೆ ₹600 ಟೋಲ್ ಸುಂಕ ವಿಧಿಸಲಾಗುತ್ತದೆ.

ಸುರಂಗ ಯೋಜನೆಗೆ ಈ ಹಿಂದೆ ಬೇರೆ ಯೋಜನೆಗಳಡಿ ಸಲಹೆಗಾರರಾಗಿದ್ದು, ಕಪ್ಪುಪಟ್ಟಿಗೆ ಸೇರಿಸಲ್ಪಟ್ಟವರಿಂದ ಸಲಹೆ ಪಡೆದು ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗಿದೆ. 9.5 ಕೋಟಿ ರೂ. ವೆಚ್ಚದ ಈ ಡಿಪಿಆರ್ ನಲ್ಲಿ ಬೇರೆ ಯೋಜನೆಗಳ ಡಿಪಿಆರ್ ಅಂಶಗಳನ್ನು ನಕಲಿ ಮಾಡಲಾಗಿದೆ ಎಂದು ಡಿಪಿಆರ್ ಸಮರ್ಪಕವಾಗಿಲ್ಲ ಎಂದು ದೂರಿದರು.
ಹೆಚ್ಚುವರಿ ₹7,200 ಕೋಟಿ ಹಣ..
ಸುರಂಗ ರಸ್ತೆ ಯೋಜನೆಯು ಬೆಂಗಳೂರಿನ ಸಾರಿಗೆ ಸಮಸ್ಯೆಗಳಿಗೆ ವೈಜ್ಞಾನಿ ಪರಿಹಾರವಲ್ಲ. ಇದು ಅವೈಜ್ಞಾನಿಕ. ತೆರಿಗೆದಾರರ ಹಣದಲ್ಲಿ ₹18,000 ಕೋಟಿ ಹಣ ಬಳಕೆಗೆ ಸರ್ಕಾರ ಮುಂದಾಗಿದೆ. ಶೇಕಡಾ 40% ಕಾರ್ಯಸಾಧ್ಯತಾ ಅಂತರ ನಿಧಿ ಭರಿಸಲು ಮುಂದಾಗಿದೆ. ಅಂದರೆ ಕಾರ್ಯಸಾಧ್ಯವಲ್ಲದ ಯೋಜನೆಯ ಆದಾಯ ಮತ್ತು ವೆಚ್ಚದ ಮಧ್ಯದ ಅಂತರವನ್ನು ಸರಿದೂಗಿಸಲು ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ ₹7,200 ಕೋಟಿಯನ್ನು ಭರಿಸಲಿದೆ ಎಂದು ತಿಳಿಸಿದರು. ಅಷ್ಟಲ್ಲದೇ ಹಾಲಿ ಸಾರ್ವಜನಿಕ ಸಾರಿಗೆ ಸಮಸ್ಯೆಗಳನ್ನು ನಿರ್ಲಕ್ಷಿಸಿ ಅವೈಜ್ಞಾನಿಕ ಯೋಜನೆ ಕೈಗೆತ್ತಿಕೊಂಡಿದ್ದಕ್ಕಾಗಿ ಡಿಕೆ ಶಿವಕುಮಾರ್ ಅವರಿಗೆ ಸಂಸದರು ಧನ್ಯವಾದ ತಿಳಿಸುವ ಮೂಲಕ ಡಿಸಿಎಂ ಅವರ ದೂರದೃಷ್ಟಿಗೆ ವ್ಯಂಗ್ಯವಾಡಿದರು.
ಯೋಜನೆಗೆ ತಜ್ಞರು ಸಹ ಕಳವಳ
ಇತ್ತೀಚೆಗೆ ತಜ್ಞರು ಈ ಸುರಂಗ ರಸ್ತೆ ಯೋಜನೆಗೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಯೋಜನೆಯಿಂದ ಸಾಕಷ್ಟು ಸಾರಿಗೆ ಸಮಸ್ಯೆ ಆಗಲಿವೆ. ಸಾಲು ಸಾಲು ಸಮಸ್ಯೆ ಉಂಟಾಗುತ್ತದೆ. ಅಂತಜರ್ಲಕ್ಕೆ, ಮೆಟ್ರೋ ಕಾರಿಡಾರ್ಗಳಿಗೆ, ಮಾರ್ಗಗಳಿಗೆ ತೊಂದರೆ ಆಗಲಿದೆ. ಒಂದು ವೇಳೆ ಸುರಂಗ ನಿರ್ಮಿಸಿದರೂ ಅದರಿಂದ ಸಂಚಾರ ಸಮಸ್ಯೆ ಉಂಟಾಗಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ವಿಪಕ್ಷಗಳು ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿವೆ. ಜನರ ತೆರಿಗೆ ಹಣ ದುಂದು ವೆಚ್ಚ ಮಾಡದಂತೆ ಆಗ್ರಹಿಸಿವೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications