Namma Metro: ಹಳದಿ ಮಾರ್ಗದ ಚಾಲನೆಗೆ ಕೇಂದ್ರ ಅನುಮೋದನೆ ಶೀಘ್ರ, ಅಪ್ಡೇಟ್ ಕೊಟ್ಟ BMRCL
ಬೆಂಗಳೂರು, ಫೆಬ್ರವರಿ 25: ಬೆಂಗಳೂರು ಮೆಟ್ರೋ ಜಾಲದಲ್ಲಿ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಬರೋಬ್ಬರಿ 18.82 ಕಿಲೋ ಮೀಟರ್ ಉದ್ದದ ಹಳದಿ ಮೆಟ್ರೋ ಮಾರ್ಗದ (Namma Metro Yellow Line updates) ರೈಲು ಸಂಚಾರ, ವಾಣಿಜ್ಯ ಕಾರ್ಯಾಚರಣೆಗೆ ಅನುಮೋದನೆ ಪಡೆಯುವ ಪ್ರಕ್ರಿಯೆ ಆರಂಭವಾಗಿದೆ. ಅದರ ಪ್ರಾಥಮಿಕ ಹಂತವೆಂಬಂತೆ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (CMRS) ಮತ್ತು ತಂಡದಿಂದ ತಪಾಸಣೆ ನಡೆದಿದೆ.
ರೈಲ್ವೆ ಸುರಕ್ಷತಾ ಆಯುಕ್ತರು ಮತ್ತು ತಂಡವು ಹಳದಿ ಮಾರ್ಗದಲ್ಲಿ ಸೋಮವಾರ ಫೆಬ್ರವರಿ 24ರಂದು ಆರ್.ವಿ. ರಸ್ತೆ - ಬೊಮ್ಮಸಂದ್ರ ನಿಲ್ದಾಣಗಳ ನಡುವೆ CRRC ನಿಂದ ಬಂದಿರುವ ಡ್ರೈವರ್ಲೆಸ್ ಮೆಟ್ರೋ ರೈಲುಗಳ ತಪಾಸಣೆ ನಡೆಸಿದರು. ಈ ತಪಾಸಣೆ ಹೊಸ ರೋಲಿಂಗ್ ಸ್ಟಾಕ್ / ರೈಲಿಗೆ ರೈಲ್ವೆ ಸಚಿವಾಲಯದ ಅನುಮೋದನೆ ಪಡೆಯುವ ಮೊದಲು ಹೆಜ್ಜೆಯಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ತಿಳಿಸಿದೆ.

ಅನುಮೋದನೆ ಪಡೆಯುವ ಪ್ರಕ್ರಿಯೆ ಹೇಗಿರುತ್ತೆ?
ರೋಲಿಂಗ್ ಸ್ಟಾಕ್ / ರೈಲು ರೈಲ್ವೆ ಮಂಡಳಿಯ ಅನುಮೋದನೆ ಪಡೆದು ಈ ಮಾರ್ಗದ ಸಂಕೇತ ವ್ಯವಸ್ಥೆಯ ಪರೀಕ್ಷೆಗಳು ಪೂರ್ಣಗೊಳಿಸಬೇಕಿದೆ. ಅದರ ನಂತರ ರೈಲ್ವೆ ಸುರಕ್ಷತಾ ಆಯುಕ್ತರು ಮತ್ತು ತಂಡವನ್ನು ರೀಚ್ -5ರ ಹಳದಿ ಮಾರ್ಗದ ಸಂಪೂರ್ಣ ತಪಾಸಣೆಗೆ ಮತ್ತೆ ಆಹ್ವಾನಿಸಲಾಗುತ್ತದೆ. ಈ ತಪಾಸಣೆ ಯಶಸ್ವಿಯಾಗಿ ಮುಗಿದ ನಂತರ ಅನುಮೋದನೆ ಪಡೆಯಲಾಯಲಾಗುವುದು. ತದನಂತರ, ಈ ಮಾರ್ಗವನ್ನು ಸಾರ್ವಜನಿಕ ಕಾರ್ಯಾಚರಣೆಗೆ ತೆರೆಯಲಾಗುವುದು ಎಂದು ನಮ್ಮ ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸದ್ಯ ಬೆಂಗಳೂರಿಗೆ ಎರಡನೇ ಡ್ರೈವರ್ಲೆಸ್ ರೈಲು ಬಂದಿದೆ. ಇದನ್ನು ವಿವಿಧ ಹಂತಗಳಲ್ಲಿ ಪರೀಕ್ಷೆ ಮಾಡಲಾಗುತ್ತದೆ. ಇದು ಸಂವಹನ ಆಧಾರಿತ ರೈಲು ನಿಯಂತ್ರಣ (CBTC) ವ್ಯವಸ್ಥೆ ಹೊಂದಿದೆ. ಡ್ರೈವರ್ ಲೆಸ್ ಆಗಿದ್ದರಿಂದ ಹೆಚ್ಚಿನ ಪರೀಕ್ಷೆಗಳು ನಡೆಯಲಿವೆ. ಸದ್ಯ ರೈಲು ಸಿಗ್ನಲಿಂಗ್ ವ್ಯವಸ್ಥೆ, ಪ್ರಾಯೋಗಿಕ ಸಂಚಾರ, ಸುರಕ್ಷತೆಯ ತಪಾಸಣೆ ನಡೆಸಲಾಗುತ್ತಿದೆ.

ಮಾರ್ಚ್ ಅಂತ್ಯಕ್ಕೆ ಮೂರನೇ ರೈಲು ಆಗಮನ
ಇದು ಪೂರ್ಣಗೊಳ್ಳಲು ಕನಿಷ್ಠ ಒಂದು ತಿಂಗಳಾದರೂ ಬೇಕು. ಅಷ್ಟರಲ್ಲಿ ಮಾರ್ಚ್ ಅಂತ್ಯಕ್ಕೆ ಮತ್ತೊಂದು ಡ್ರೈವರ್ಲೆಸ್ ರೈಲು ಬರುವ ಸಾಧ್ಯತೆ ಇದೆ. ಮೂರನೇ ರೈಲು ಬರುವ ಹೊತ್ತಿಗೆ ಎರಡನೇ ರೈಲು ಸಂಚಾರ, ಸಾರ್ವಜನಿಕ ಕಾರ್ಯಾಚರಣೆಗೆ ಅನುಮೋದನೆ ಪಡೆಯುವ ಹಂತಕ್ಕೆ ಹೋಗಿರುತ್ತೇವೆ. ಬರುವ ಹೊಸ ರೈಲುಗಳ ಸಹ ಸಿಬಿಟಿಸಿ ವ್ಯವಸ್ಥೆ ಹೊಂದಿವೆ. ಹೀಗಾಗಿ ಅವುಗಳು ಅಗತ್ಯ ಎಲ್ಲ ಪರೀಕ್ಷೆಗಳಿಗೆ ಒಳಗಾಗಲಿವೆ.
ಇದು ಪ್ರಮುಖ ಇ-ನಗರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇಲ್ಲಿ ಅನೇಕ ಉದ್ಯೋಗಿಗಳು, ಸಾರ್ವಜನಿಕರು ಇದ್ದು, ಲಕ್ಷಾಂತರ ಮಂದಿಯು ಈ ಆರ್.ವಿ.ರಸ್ತೆ ಮತ್ತು ಬೊಮ್ಮಸಂದ್ರ ವರೆಗಿನ ಮಾರ್ಗ ತೆರೆಯುವುದನ್ನೇ ಕಾಯುತ್ತಿದ್ದಾರೆ. ಮೆಟ್ರೋ ದರ ಏರಿಕೆ ಮಧ್ಯೆಯು ಈ ಮಾರ್ಗ ತೆರೆದರೆ ಲಕ್ಷಾಂತರ ಜನರಿಗೆ ಅನುಕೂಲವಾಗುವ ನಿರೀಕ್ಷೆ ಇದೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications