Get Updates
Get notified of breaking news, exclusive insights, and must-see stories!

Bengaluru Traffic Alert: ನಗರದ ಪ್ರಮುಖ ಈ ರಸ್ತೆಗಳ ವಾಹನ ಸವಾರರಿಗೆ ಸಂಚಾರ ಎಚ್ಚರಿಕೆ!

ಬೆಂಗಳೂರು, ಮಾರ್ಚ್ 24: ಬೆಂಗಳೂರು ನಗರ ವ್ಯಾಪ್ತಿಯಲ್ಲಿ ನಿತ್ಯ ಒಂದಲ್ಲ ಒಂದು ಕಡೆ ಸಂಚಾರ ಸಮಸ್ಯೆ ಇದ್ದೆ ಇರುತ್ತದೆ. ಬಸ್ ಕೆಟ್ಟು ನಿಂತಿರುತ್ತದೆ, ಸರಕು ಸೇವೆಯ ಬೃಹತ್ ಲಾರಿ ಅಥವಾ ನಮ್ಮ ಮೆಟ್ರೋ ನಿರ್ಮಾಣ ಕಾಮಗಾರಿಗಳಿಂದಾಗಿ ವಾಹನ ಸವಾರರು ತೊಂದರೆ ಅನುಭವಿಸುತ್ತಾರೆ. ಹತ್ತಾರು ನಿಮಿಷಗಳ ಕಾಲ ಸಿಗ್ನಲ್, ಟ್ರಾಫಿಕ್‌ನಲ್ಲಿ ಸಿಲುಕುತ್ತಾರೆ. ಹೀಗಾಗದಂತೆ ತಡೆಯಲು ಬೆಂಗಳೂರು ನಗರ ಸಂಚಾರಿ ಪೊಲೀಸರು ಪ್ರಮುಖ ರಸ್ತೆಗಳಲ್ಲಿ ಉಂಟಾಗಿರುವ ನಿಧಾನಗತಿ ಸಂಚಾರ ಕುರಿತು ಮೊದಲೇ ಮಾಹಿತಿ ನೀಡಿದ್ದಾರೆ. ಈ ಸುದ್ದಿಯಲ್ಲಿನ ಮಾಹಿತಿ ಸಂಚಾರ ಅಚರಣೆ, ಟ್ರಾಫಿಕ್ ತಿಳಿದು ಬೇರೆ ಮಾರ್ಗದಲ್ಲಿ ಸಂಚರಿಸುವಂತೆ ಕೋರಲಾಗಿದೆ.

ಬೆಂಗಳೂರು ಜಲಮಂಡಳಿ ಕಾಮಗಾರಿ, ಬಿಬಿಎಂಪಿ ರಸ್ತೆ ಅಗಲೀಕರಣದಂತಹ ಕಾರ್ಯಗಳಿಂದಾಗಿ ನಗರದ ಅನೇಕ ಪಮುಖ ರಸ್ತೆಗಳಲ್ಲಿಯೇ ಸಂಚಾರ ನಿಧಾನಗತಿಯಲ್ಲಿ ಸಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ. ಸುಗಮ ಸಂಚಾರಕ್ಕಾಗಿ ಈ ಕೆಳಗಿನ ಮಾರ್ಗ ನೋಡಿಕೊಂಡು ವಾಹನ ಸವಾರರು ಓಡಾಡಬೇಕಿದೆ.

Bengaluru Traffic Advisory In These Routes Traffic jam Affected Due Various Reasons Slow moving

ಟ್ರಾಫಿಕ್ ಹೆಚ್ಚಿರುವ ನಿಧಾನಗತಿಯ ರಸ್ತೆಗಳ ಪಟ್ಟಿ

* ನಗರದ ಕಾಡುಬಿಸನಹಳ್ಳಿ ಬಳಿ ವಾಹನ ಕೆಟ್ಟು ನಿಂತಿರುವುದರಿಂದ ಆದೀಶ್ವರ ಶೋ ರೂಂ ಕಾರ್ತಿಕ್ ನಗರದ ಕಡೆಗೆ ನಿಧಾನಗತಿಯ ಸಂಚಾರ ಇರುತ್ತದೆ. ಇದು ಸೋಮವಾರಕ್ಕೆ ಸೀಮಿತವಾಗಿ ಇರುತ್ತದೆ.

* 80 ಅಡಿ ರಸ್ತೆಯ 4ನೇ ಕೋರಮಂಗಲ ಬಳಿ ಬಿಬಿಎಂಪಿ ಪ್ರಮುಖ ಕಾಮಗಾರಿ ಕೈಗೆತ್ತಿಕೊಂಡಿದೆ. ಹೀಗಾಗಿ ಇಲ್ಲಿನ ಸೋನಿ ವರ್ಲ್ಡ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ. ಎರಡು ಮೂರು ದಿನಗಳ ಕಾಲ ಇದೇ ರೀತಿ ಇರಬಹುದು. ಸಾರ್ವಜನಿಕರು, ವಾಹನ ಸವಾರರು ಸಹಕರಿಸುವಂತೆ ಸಂಚಾರಿ ಪೊಲೀಸರು ಕೋರಿದ್ದಾರೆ.

* ಸರ್ಜಾಪುರ ರಸ್ತೆಯಲ್ಲಿರುವ ಅಗರದ ಕೆಲ ಬಳಿ ವಾಹನವೊಂದು ಕೆಟ್ಟು ನಿಂತಿದೆ. ಇದರಿಂದ ಇಬ್ಬಲೂರು ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.

Bengaluru Traffic Advisory In These Routes Traffic jam Affected Due Various Reasons Slow moving

* ಬೆಳ್ಳಂದೂರು ಜಂಕ್ಷನ್ ಬಳಿ ಬೆಂಗಳೂರು ನಮ್ಮ ಮೆಟ್ರೋ ಕಾಮಗಾರಿ ನೆಡೆಯುತ್ತಿದೆ. ಹೀಗಾಗಿ ಕಾಡುಬೀಸನಹಳ್ಳಿ, ಮಾತ್ತಹಳ್ಳಿ ಕಡೆಗೆ ತೆರಳುವವರಿಗೆ ನಿಧಾನಗತಿಯ ಸಂಚಾರವಿರುತ್ತದ. ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ. ಈ ಮಾರ್ಗ ನಿರ್ಮಾಣ ಕೆಲಸ ಪೂರ್ಣಗೊಳ್ಳುವವರೆಗೆ ಟ್ರಾಫಿಕ್ ಸಮಸ್ಯೆ ಮುಂದುವರಿಯಬಹುದು ಎನ್ನಲಾಗುತ್ತಿದೆ.

* ಬೃಂದಾವನ ಬಸ್ ನಿಲ್ದಾಣದ ಬಳಿ ವಾಹನ ಕೆಟ್ಟು ನಿಂತಿದೆ. ರಸ್ತೆಯಲ್ಲಿ ವಾಹನ ಕೆಟ್ಟು ನಿಂತ ಪರಿಣಾಮ ಎನ್‌ಟಿಟಿಎಫ್ ವೃತ್ತದ ಕಡೆಗೆ ನಿಧಾನಗತಿಯ ಸಂಚಾರ ಇದೆ. ಸಾರ್ವಜನಿಕರು ಅಗತ್ಯ ಎಚ್ಚರಿಕೆ ವಹಿಸಿ ಓಡಾಸಬೇಕಿದೆ.

* ಹೆಣ್ಣೂರು ಅಂಡರ್ ಪಾಸ್ ಕಡೆಯಿಂದ, ಕೆ.ಆರ್ ಪುರ ಕಡೆಗೆ ಹೋಗುವ ಮಾರ್ಗದಲ್ಲಿ ವಾಹನ ಕೆಟ್ಟು ನಿಂತಿರುವುದರಿಂದ ನಿಧಾನಗತಿಯ ಸಂಚಾರ ಇದೆ.

Take a Poll

* ಟ್ಯಾನರಿ ರಸ್ತೆಯ ಬಳಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕಾಮಗಾರಿ ನೆಡೆಯುತ್ತಿರುವುದರಿಂದ ನಾಗವಾರ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರ ಕಂಡು ಬಂದಿಎಎ. ಈ ಕಾಮಗಾರಿ ಪೂರ್ಣವಾಗುವವರೆಗೂ ಸಾರ್ವಜನಿಕರು ಈ ರಸ್ತೆಯಲ್ಲಿ ಓಡಾಡುವಾಗಿ ಅಗತ್ಯ ಜಾಗ್ರತೆ ವಹಿಸಬೇಕು.

* ವೈಟಫಿಲ್ಡ್ ಕಡೆಯಿಂದ ಆರ್.ಹೆಚ್.ಬಿ ಕಾಲೋನಿ ಬಿ.ನಾರಾಯಣಪುರ ಮುಖ್ಯರಸ್ತೆ ಕಡೆಗೆ ತೀವ್ರ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಈ ಮಾರ್ಗದಲ್ಲಿ ಓಡಾಡುವವರು ಗಮನಿಸಬೇಕು.

* ಕಲಾಮಂದಿರ ಬಳಿ ನಮ್ಮ ಮೆಟ್ರೋ ಮಾರ್ಗದ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ಈ ಕಾರಣದಿಂದಾಗಿ ಈ ಭಾಗದಿಂದ ಮಾರತಹಳ್ಳಿ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ ಎಂದು ಫೋಟೋ ಸಮೇತ ವಾಹನದಟ್ಟಣೆ, ನಿಧಾನಗತಿಯ ಸಂಚಾರ ಕುರಿತು ಟ್ರಾಪಿಕ್ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.

* ನಗರದ ಗಾಳಿ ಆಂಜನೇಯ ದೇವಸ್ಥಾನದ ಬಳಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಕಾಮಗಾರಿಯಿಂದಾಗಿ ನೆಡೆಯುತ್ತಿರುವುದರಿಂದ ಬಿ,ಹೆಚ್,ಇ,ಎಲ್ ಕಡೆಗೆ ನಿಧಾನಗತಿಯ ಸಂಚಾರ ಕಂಡು ಬಂದಿದೆ.

* ಇನ್ನೂ ಎಚ್‌ಎಸ್‌ಆರ್ ಬಡಾವಣೆಯ 27ನೇ ಮುಖ್ಯರಸ್ತೆಯಿಂದ ದೇವರಬಿಸನಹಳ್ಳಿ ಕಡೆಗೆ ಹೋಗುವ ರಸ್ತೆಯಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿದೆ. ಆದಷ್ಟು ಶೀಘ್ರವೇ ಈ ದಟ್ಟಣೆ ನಿವಾರಿಸಲಾಗುವುದು. ಸೋಮವಾರ ಬೆಳಗ್ಗೆ ಮತ್ತು ಸಂಜೆ ಹೆಚ್ಚಿನ ದಟ್ಟಣೆ ಉಂಟಾಲಿದೆ. ಸವಾರರು, ಪ್ರಯಾಣಿಕರು ಸಹಕರಿಸುವಂತೆ ಕೊರಲಾಗಿದೆ.

* ರೂಬಿ 1 ಕಡೆಯಿಂದ ಬಿಳೇಕಹಳ್ಳಿ ಕಡೆಗೆ ಹೋಗುವ ಮಾರ್ಗದಲ್ಲಿ ವಾಹನ ಕೆಟ್ಟು ನಿಂತಿದೆ. ಇದರಿಂದಾಗಿ ಈ ಭಾಗದಲ್ಲಿ ವಾಹನಗಳ ಸಂಚಾರ ನಿಧಾನಗತಿಯಲ್ಲಿದೆ.

* ನಾಗವಾರ ಜಂಕ್ಷನ್ ನಿಂದ ಹೆಣ್ಣೂರು ಜಂಕ್ಷನ್ ಕಡೆಗೆ ಬೆಂಗಳೂರು ನಮ್ಮ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಸಂಚಾರ ನಿಧಾನಗತಿಯಲ್ಲಿದೆ. ಮೆಟ್ರೋ ನಿರ್ಮಾಣ, ಪಿಲ್ಲರ್ ಅಕ್ಕಪಕ್ಕ ರಸ್ತೆಗಳಲ್ಲಿ ಓಡಾಡುವವರು ಎಚ್ಚರಿಕೆಯಿಂದ ಓಡಾಡುವಂತೆ ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ..

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+