Bengaluru: ಎಮರ್ಜೆನ್ಸಿ ಇದ್ದರೂ ಆಂಬುಲೆನ್ಸ್ಗೆ ದಾರಿ ಬಿಡದ ಆಟೋ ಚಾಲಕ: ವಿಡಿಯೋ
ಬೆಂಗಳೂರು, ಜನವರಿ 24: ರಾಜಧಾನಿ ಬೆಂಗಳೂರಿನ ಟ್ರಾಫಿಕ್ ನಲ್ಲಿ ತುರ್ತು ವೈದ್ಯಕೀಯ ಸೇವೆಯ ಆಂಬುಲೆನ್ಸ್ ವಾಹನಗಳ ಸಂಚಾರ ಕಷ್ಟ ಎನ್ನುವ ಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಇಲ್ಲೊಬ್ಬ ಆಟೋ ಚಾಲಕ ತುರ್ತು ಸನ್ನಿವೇಶ ಇದೆ ದಾರಿ ಬಿಡಿ ಎಂದು ಮನವಿ ಮಾಡಿದರೂ ಆಂಬುಲೆನ್ಸ್ಗೆ ದಾರಿ ಬಿಡದ ಅಸಹನೀಯ ಘಟನೆ ನಡೆದಿದೆ. ನಗರದ ಹಲಸೂರು ರಸ್ತೆಯಲ್ಲಿ ನಡೆದಿದೆ ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಟೋ ಚಾಲಕನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ತುರ್ತು ಚಿಕಿತ್ಸೆಗೆ ಅಗತ್ಯವಿರುವ ರೋಗಿಯೊಬ್ಬರು ಇದ್ದ ಆಂಬುಲೆನ್ಸ್ ಹಲಸೂರು ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆ ಆಂಬುಲೆನ್ಸ್ ವಾರ್ನಿಂಗ್ ಸೌಂಡ್ ಕೇಳಿದರೂ ಸಹ ದಾರಿ ಬಿಡದೇ ವಾಹನಕ್ಕೆ ಅಡ್ಡಲಾಗಿ ಆಟೋ ಚಲಾಯಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. KA 03 AD6342 ಸಂಖ್ಯೆಯ ಆಟೋ ಇದಾಗಿದೆ.

ವಾರ್ನಿಂಗ್ ಬೆಲ್ ಜೊತೆಗೆ ಧ್ವನಿ ವರ್ಧಕ ಮೂಲಕ ಆಂಬುಲೆನ್ಸ್ ಚಾಲಕ ತುರ್ತು ಸಂದರ್ಭವಿದೆ. ದಯವಿಟ್ಟು ಆಟೋ ಚಾಲಕ ದಾರಿ ಕೊಡಬೇಕು ಎಂದು ಕೆಲವು ಬಾರಿ ಮನವಿ ಮಾಡಿಕೊಂಡಿದ್ದಾರೆ. ಮೇಲಿಂದ ಮೇಲೆ ಮನವಿ ಮಾಡಿಕೊಂಡರೂ ದಾರಿ ಬಿಡದೇ ನಡು ರಸ್ತೆಯಲ್ಲಿ ಆಟೋ ಚಲಯಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಸೇರಿದಂತೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ವಿಡಿಯೋದಲ್ಲಿ ಒಳಗೆ ರೋಗಿಗಳು ಮತ್ತವರ ಕುಟುಂಬಸ್ಥರಲ್ಲಿ ಆಸ್ಪತ್ರೆಗೆ ಬೇಗ ತಲುಪಬೇಕೆಂಬ ಹಪಾಹಪಿ ಕಾಣಿಸುತ್ತದೆ. ಆಂಬುಲೆನ್ಸ್ ಚಾಲಕ ಧ್ವನಿ ವರ್ಧಕದ ಮೂಲಕ ಆಟೋ ಚಾಲಕನಿಗೆ ಮನವಿ ಮಾಡಿಕೊಳ್ಳುವ ದೃಶ್ಯಗಳು, ಸೆರೆಯಾಗಿವೆ. ಸದ್ಯ ಈ ವಿಡಿಯೋ ಅನ್ನು ಬೆಂಗಳೂರು ಸಂಚಾರಿ ಪೊಲೀಸರಿಗೆ ಟ್ಯಾಗ್ ಮಾಡಲಾಗಿದೆ.
ಎಮರ್ಜೆನ್ಸಿ ಇದ್ದರೂ ಆಂಬುಲೆನ್ಸ್ಗೆ ದಾರಿ ಬಿಡದೇ ದುರುದ್ದೇಶ ಮೆರೆದಿದ್ದಾರೆ. ಆಟೋ ಚಾಲಕ ಸಂಚಾರಿ ನಿಯಮ ಉಲ್ಲಂಘಿಸಿದ್ದಾನೆ. ಕನಿಷ್ಠ ಮಾನವೀಯತೆ ಇಲ್ಲದೇ ವರ್ತಿಸಿದ್ದಾನೆ. ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ವಿಡಿಯೋ ಗುರುವಾರ ಪೋಸ್ಟ್ ಆಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈವರೆಗೆ ಒಟ್ಟು 2.5 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ವೀಕ್ಷಿಸಿದ್ದಾರೆ.
ಮನುಷ್ಯರು ಎಷ್ಟೇ ಧಾವಂತ, ಅವಸರದಲ್ಲಿದ್ದರು ಸಹ ಆಂಬುಲೆನ್ಸ್ ಶಬ್ದ ಕೇಳಿದ ತಕ್ಷಣವೇ ದಾರಿ ಬಿಡುವುದು ಮಾನವೀಯತೆ ಮತ್ತು ನಿಯಮ. ಆದರೆ ಈ ಆಟೋ ಚಾಲಕ ಮಾತ್ರ ಇದಕ್ಕೆ ತದ್ವಿರುದ್ಧ. ಎಷ್ಟು ಕೇಳಿಕೊಂಡರು ದಾರಿ ಬಿಡದೇ ಮೊಂಡು ಹಠ ಪ್ರದರ್ಶಿಸಿದ್ದಾನೆ.
ಹಲಸೂರು ರಸ್ತೆಯಲ್ಲಿ ಒಂದು ಬದಿಗೆ (ಬಲಗಡೆಗೆ) ಎದುರಿನ ವಾಹನಗಳು ಬರುತ್ತಿದ್ದರೆ, ಎಡಗಡೆಗೆ ಆಂಬುಲೆನ್ಸ್ ಮುಂದೆ ಆಟೋ ಜೋರಾಗಿ ಓಡಿಸುತ್ತಿರುವ ದೃಶ್ಯ ಕಂಡು ನೆಟ್ಟಿಗರು ಆಟೋ ಚಾಲಕನ ಮೇಲೆ ಕಿಡಿ ಕಾರಿದ್ದಾರೆ. ಇಂತದ್ದೆ ಘಟನೆಗಳು ನಡೆಯುತ್ತಲೇ ಇವೆ. ಕಠಿಣ ನಿಯಮ ಜಾರಿಗೆ ತರಬೇಕು, ಇಂತವರಿಗೆ ಶಿಕ್ಷೆ ಆಗಲಿದೆ ಎಂದೆಲ್ಲ ಕಾಮೆಂಟ್ ಮಾಡಲಾಗಿದೆ. ಈ ಘಟನೆ ಸಂಬಂಧ ಬೆಂಗಳೂರು ನಗರ ಪೊಲೀಸರು ಯಾವ ಕ್ರಮ ಕೈಗೊಂಡಿದ್ದಾರೆ ಎಂಬ ಮಾಹಿತಿ ಗೊತ್ತಾಗಬೇಕಿದೆ.
-
Viral Video: ತೆಂಗಿನ ಚಿಪ್ಪನ್ನು ಮಗುವಿನ ಶೌಚಾಲಯ ಮಾಡಿಕೊಂಡ ದಂಪತಿ, ವಿಡಿಯೋ ವೈರಲ್ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ












Click it and Unblock the Notifications