ಪೀಣ್ಯ: ಅನೈತಿಕ ಸಂಬಂಧದ ಶಂಕೆ, ವಕೀಲನಿಗೆ ಗುಂಡಿಕ್ಕಿ ಹತ್ಯೆ
ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಕೀಲರೊಬ್ಬರನ್ನು ಹತ್ಯೆ ಮಾಡಿದ 78 ವರ್ಷ ವಯಸ್ಸಿನ ವೃದ್ಧರನ್ನು ಬಂಧಿಸಲಾಗಿದೆ. ವಕೀಲ ಹಾಗೂ ವೃದ್ಧರ ಸೊಸೆ ನಡುವೆ ಅನೈತಿಕ ಸಂಬಂಧ ಇತ್ತು ಎನ್ನಲಾಗಿದೆ.
ಬೆಂಗಳೂರು, ಜನವರಿ 11: ವಕೀಲರೊಬ್ಬರನ್ನು ಶುಕ್ರವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮೃತರನ್ನು ವಕೀಲ ಅಮಿತ್ ಕೇಶವ್ ಮೂರ್ತಿ ಎಂದು ಗುರುತಿಸಲಾಗಿದೆ. ವಕೀಲ ಅಮಿತ್ ಹತ್ಯೆಗೈದ 78 ವರ್ಷ ವಯಸ್ಸಿನ ಗೋಪಾಲಕೃಷ್ಣ ಗೌಡ ಎಂಬುವವರನ್ನು ಬಂಧಿಸಲಾಗಿದೆ.
ವಕೀಲ ಅಮಿತ್ ಹಾಗೂ ಶ್ರುತಿ ಗೌಡ (32) ಎಂಬುವರ ನಡುವೆ ಪ್ರೀತಿ, ಪ್ರೇಮಕ್ಕೂ ಮೀರಿದ ಸಂಬಂಧವಿತ್ತು. ಈ ವಿಷಯ ಆಕೆಯ ಗಂಡ ರಾಜೇಶ್ ಗೆ ಗೊತ್ತಾಗಿದೆ. ಮನೆ ಗೌರವ ಮಣ್ಣುಪಾಲಾಗುತ್ತಿದೆ ಎಂದೆನಿಸಿ, ಶ್ರುತಿ ಅವರ ಮಾವ ಗೋಪಾಲಕೃಷ್ಣಗೌಡ ಅವರು ವಕೀಲ ಅಮಿತ್ ಮೇಲೆ ಗುಂಡು ಹಾರಿಸಿದ್ದಾರೆ. ಗಾಯಗೊಂಡು ಸಪ್ತಗಿರಿ ಆಸ್ಪತ್ರೆ ಸೇರಿದ್ದ ಅಮಿತ್ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ.

ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಶ್ರುತಿ ಹಾಗೂ ಅಮಿತ್ ನಡುವಿನ ಸಂಬಂಧದ ಬಗ್ಗೆ ಆರೇಳು ತಿಂಗಳುಗಳ ಹಿಂದೆ ಶ್ರುತಿ ಗಂಡ ರಾಜೇಶ್ ಗೆ ತಿಳಿದು ಬಂದಿದೆ. ಶ್ರುತಿಗೆ ಈ ಬಗ್ಗೆ ಎಚ್ಚರಿಕೆ ನೀಡಿದ್ದರೂ ಆಕೆ ಅಮಿತ್ ನನ್ನು ಭೇಟಿ ಮಾಡುತ್ತಿದ್ದರು. ಅಮಿತ್ ಗೆ ಮದ್ವೆಯಾಗಿ ಒಬ್ಬ ಮಗನಿದ್ದಾನೆ. ಶ್ರುತಿಗೂ ರಾಜೇಶ್ ರಿಂದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಶ್ರುತಿ ಕಾರಿಗೆ ಜಿಪಿಎಸ್ ಸಾಧನ ಅಳವಡಿಸಿ, ಆಕೆ ಮೇಲೆ ರಾಜೇಶ್ ಕಣ್ಣಿಟ್ಟಿದ್ದರು. ಶುಕ್ರವಾರ ಶ್ರುತಿ ಕಾರು ತೆಗೆದುಕೊಂಡು ಹೊರಟಾಗ, ರಾಜೇಶ್ ಹಾಗೂ ಅವರ ಅಪ್ಪ ಗೋಪಾಲಕೃಷ್ಣ ಗೌಡ ಇನ್ನೋವಾ ಕಾರಿನಲ್ಲಿ ಹಿಂಬಾಲಿಸಿದ್ದಾರೆ.
ಅಚಾರ್ಯ ಇನ್ಸ್ಟಿಟ್ಯೂಟ್ ಬಳಿ ಕಾರು ನಿಲ್ಲಿಸಲಾಗಿದೆ. ಅಲ್ಲಿಗೆ ಬಂದ ಅಮಿತ್ ಜತೆ ಶ್ರುತಿ ಮಾತನಾಡುತ್ತಿದ್ದಾಗ, ಅಮಿತ್ ಮೇಲೆ ಗುಂಡು ಹಾರಿಸಲಾಗಿದೆ. ತಕ್ಷಣವೇ ಕಾರು ಓಡಿಸಿಕೊಂಡು ಅಮಿತ್ ನನ್ನು ಸಮೀಪದಲ್ಲಿದ್ದ ಸಪ್ತಗಿರಿ ಆಸ್ಪತ್ರೆಗೆ ಸೇರಿಸಿದ ಶ್ರುತಿಗೆ ಅಮಿತ್ ಇನ್ನು ಉಳಿಯುವುದಿಲ್ಲ ಎಂದು ಮನವರಿಕೆಯಾಗುತ್ತದೆ.

ಅಲ್ಲಿಂದ ಸಮೀಪದ ಲಾಡ್ಜ್ ಗೆ ಬಂದು ರೂಮ್ ನಂಬರ್ 301ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶ್ರುತಿ ಶರಣಾಗುತ್ತಾರೆ. ಆಸ್ಪತ್ರೆಯ ಸಿಸಿಟಿವಿಯಿಂದ ಶ್ರುತಿ ಕಾರಿನ ನಂಬರ್ ಪಡೆದು ಮನೆ ವಿಳಾಸ ಪಡೆದ ಪೊಲೀಸರು, ಟ್ರ್ಯಾಕ್ ಮಾಡಿದಾಗ ಕಾರು ಲಾಡ್ಜ್ ಬಳಿ ನಿಂತಿರುವುದು ಕಾಣುತ್ತದೆ. ಆಕೆ ಇದ್ದ ರೂಮಿನ ಬಾಗಿಲು ಮುರಿದು ಒಳಗೆ ಬಂದು ನೋಡಿದರೆ ಶ್ರುತಿ ಶವವಾಗಿ ಮಲಗಿದ್ದಾರೆ. ನಂತರ ಶ್ರುತಿ ಮಾವ ಗೋಪಾಲಕೃಷ್ಣಗೌಡ ಹಾಗೂ ಶ್ರುತಿ ಪತಿ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ. ಇಬ್ಬರನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.(ಒನ್ ಇಂಡಿಯಾ ಸುದ್ದಿ)
-
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ?












Click it and Unblock the Notifications