ಹಾವೇರಿ : ಆಸ್ತಿಗಾಗಿ ತಮ್ಮನಿಗೆ ಗೃಹ ಬಂಧನ

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಬೇಲೂರಿನಲ್ಲಿ ದುರ್ಗಮ್ಮ ಎಂಬ ಪಾಪಿ ಅಕ್ಕ, ತಮ್ಮ ಹನುಮಂತಪ್ಪ ಎನ್ನುವವರನ್ನು ಇಪ್ಪತ್ತು ವರ್ಷಗಳಿಂದ ಕೂಡಿ ಹಾಕಿದ್ದಳು. ಆಸ್ತಿಯ ಆಸೆಗಾಗಿ, ದನದ ಕೊಟ್ಟಿಗೆಯಲ್ಲಿ ಸರಪಳಿಯಿಂದ ಕಟ್ಟಿಹಾಕಿ ಅಮಾನವೀಯತೆ ಪ್ರದರ್ಶಿಸಿದ್ದಳು.
ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ರಾಣೆಬೆನ್ನೂರು ಪೊಲೀಸರು ಹನುಮಂತಪ್ಪನನ್ನು ಇಂದು ರಕ್ಷಿಸಿದರು. ಆರೋಗ್ಯ ತಪಾಸಣೆಗಾಗಿ ಹನುಮಂತಪ್ಪ ಅವರನ್ನು ರಾಣೆಬೆನ್ನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಊಟವೂ ಕೊಡುತ್ತಿರಲಿಲ್ಲ : ದುರ್ಗಮ್ಮ ಮತ್ತವರ ಕುಟುಂಬದವರು ಹನಮಂತಪ್ಪನಿಗೆ ಊಟವನ್ನು ನೀಡದೆ, ಮೃಗದಂತೆ ಕೂಡಿಹಾಕಿದ್ದರು. ಹನುಮಂತಪ್ಪ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿರಬಹುದು ಎಂದು ವೈದ್ಯರು ಹೇಳಿದ್ದಾರೆ.
12 ಎಕರೆ ಒಡೆಯ : ಮೂಲತಃ ನಾಟಕ ಕಲಾವಿದನಾಗಿದ್ದ ಹನುಮಂತಪ್ಪನ ತಂದೆಗೆ 12 ಎಕರೆ ಹೊಲವಿತ್ತು. ತಂದೆ ತಾಯಿ ಮರಣಹೊಂದಿದ ನಂತರ ಆಸ್ತಿ ಹನುಮಂತಪ್ಪನ ಕೈ ಸೇರಿದೆ. ಆದರೆ, ಆತನ ಅಕ್ಕ ದುರ್ಗಮ್ಮ, ಆಸ್ತಿಯ ಮೇಲಿನ ಆಸೆಯಿಂದ ತವರಿನಲ್ಲೇ ನೆಲೆಸಿದ್ದಳು.
ದುರ್ಗಮ್ಮ ಮತ್ತು ಆಕೆಯ ಪತಿ ಹನುಮಂತಪ್ಪನಿಗೆ ಮಾನಸಿಕ ಕಿರುಕುಳ ನೀಡುತ್ತಾ, ತನ್ನ ಮನೆಯಲ್ಲಿಯೇ ಆತನನ್ನು ಮೃಗದಂತೆ ನೋಡಿಕೊಳ್ಳುತ್ತಿದ್ದಾರೆ. ಮನೆಯಿಂದ ಹೊರಗೆ ಕಳುಹಿಸಿದೆ, ದನದ ಕೊಟ್ಟಿಗೆಯಲ್ಲಿ ಸರಪಳಿ ಹಾಕಿ ಕೂಡಿ ಹಾಕಿದ್ದಾರೆ.
ಸ್ಥಳೀಯರ ಸಹಕಾರ : ಬೆಂಗಳೂರಿನ ಎರಡು ಗೃಹಬಂಧನ ಪ್ರಕರಣಗಳು ಮಾಧ್ಯಮಗಳಲ್ಲಿ ವರದಿಯಾದ ನಂತರ ಸ್ಥಳೀಯರು ಹನುಮಂತಪ್ಪನ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆಗಮಿಸುವುದು ತಿಳಿದು ದುರ್ಗಮ್ಮ, ಸರಪಳಿ ಬಿಚ್ಚಿ ಹನುಮಂತಪ್ಪನನ್ನು ಮನೆಗೆ ಕರೆತರಲು ಯತ್ನಿಸಿದ್ದಳು.(ಮತ್ತೊಂದು ಗೃಹಬಂಧನ, ಏನಾಗಿದೆ ಇವರಿಗೆ?)
-
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾ ಕುಮಾರಿ ನೇಮಕ -
April 5 Horoscope: ನಿಮ್ಮ ಅದೃಷ್ಟ ಹೇಗಿದೆ? ಸಂಪೂರ್ಣ ಮಾಹಿತಿ ಇಲ್ಲಿ -
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post












Click it and Unblock the Notifications