ಹಾವೇರಿ : ಆಸ್ತಿಗಾಗಿ ತಮ್ಮನಿಗೆ ಗೃಹ ಬಂಧನ

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಬೇಲೂರಿನಲ್ಲಿ ದುರ್ಗಮ್ಮ ಎಂಬ ಪಾಪಿ ಅಕ್ಕ, ತಮ್ಮ ಹನುಮಂತಪ್ಪ ಎನ್ನುವವರನ್ನು ಇಪ್ಪತ್ತು ವರ್ಷಗಳಿಂದ ಕೂಡಿ ಹಾಕಿದ್ದಳು. ಆಸ್ತಿಯ ಆಸೆಗಾಗಿ, ದನದ ಕೊಟ್ಟಿಗೆಯಲ್ಲಿ ಸರಪಳಿಯಿಂದ ಕಟ್ಟಿಹಾಕಿ ಅಮಾನವೀಯತೆ ಪ್ರದರ್ಶಿಸಿದ್ದಳು.
ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ರಾಣೆಬೆನ್ನೂರು ಪೊಲೀಸರು ಹನುಮಂತಪ್ಪನನ್ನು ಇಂದು ರಕ್ಷಿಸಿದರು. ಆರೋಗ್ಯ ತಪಾಸಣೆಗಾಗಿ ಹನುಮಂತಪ್ಪ ಅವರನ್ನು ರಾಣೆಬೆನ್ನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಊಟವೂ ಕೊಡುತ್ತಿರಲಿಲ್ಲ : ದುರ್ಗಮ್ಮ ಮತ್ತವರ ಕುಟುಂಬದವರು ಹನಮಂತಪ್ಪನಿಗೆ ಊಟವನ್ನು ನೀಡದೆ, ಮೃಗದಂತೆ ಕೂಡಿಹಾಕಿದ್ದರು. ಹನುಮಂತಪ್ಪ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿರಬಹುದು ಎಂದು ವೈದ್ಯರು ಹೇಳಿದ್ದಾರೆ.
12 ಎಕರೆ ಒಡೆಯ : ಮೂಲತಃ ನಾಟಕ ಕಲಾವಿದನಾಗಿದ್ದ ಹನುಮಂತಪ್ಪನ ತಂದೆಗೆ 12 ಎಕರೆ ಹೊಲವಿತ್ತು. ತಂದೆ ತಾಯಿ ಮರಣಹೊಂದಿದ ನಂತರ ಆಸ್ತಿ ಹನುಮಂತಪ್ಪನ ಕೈ ಸೇರಿದೆ. ಆದರೆ, ಆತನ ಅಕ್ಕ ದುರ್ಗಮ್ಮ, ಆಸ್ತಿಯ ಮೇಲಿನ ಆಸೆಯಿಂದ ತವರಿನಲ್ಲೇ ನೆಲೆಸಿದ್ದಳು.
ದುರ್ಗಮ್ಮ ಮತ್ತು ಆಕೆಯ ಪತಿ ಹನುಮಂತಪ್ಪನಿಗೆ ಮಾನಸಿಕ ಕಿರುಕುಳ ನೀಡುತ್ತಾ, ತನ್ನ ಮನೆಯಲ್ಲಿಯೇ ಆತನನ್ನು ಮೃಗದಂತೆ ನೋಡಿಕೊಳ್ಳುತ್ತಿದ್ದಾರೆ. ಮನೆಯಿಂದ ಹೊರಗೆ ಕಳುಹಿಸಿದೆ, ದನದ ಕೊಟ್ಟಿಗೆಯಲ್ಲಿ ಸರಪಳಿ ಹಾಕಿ ಕೂಡಿ ಹಾಕಿದ್ದಾರೆ.
ಸ್ಥಳೀಯರ ಸಹಕಾರ : ಬೆಂಗಳೂರಿನ ಎರಡು ಗೃಹಬಂಧನ ಪ್ರಕರಣಗಳು ಮಾಧ್ಯಮಗಳಲ್ಲಿ ವರದಿಯಾದ ನಂತರ ಸ್ಥಳೀಯರು ಹನುಮಂತಪ್ಪನ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆಗಮಿಸುವುದು ತಿಳಿದು ದುರ್ಗಮ್ಮ, ಸರಪಳಿ ಬಿಚ್ಚಿ ಹನುಮಂತಪ್ಪನನ್ನು ಮನೆಗೆ ಕರೆತರಲು ಯತ್ನಿಸಿದ್ದಳು.(ಮತ್ತೊಂದು ಗೃಹಬಂಧನ, ಏನಾಗಿದೆ ಇವರಿಗೆ?)
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications