ತಂದೆಯನ್ನು ಸರಪಳಿಯಿಂದ ಕಟ್ಟಿಹಾಕಿದ ಪಾಪಿ ಪುತ್ರರು

ಬನಶಂಕರಿಯ ದೇವಾಲಯದ ಸಮೀಪದ ಶಾಖಾಂಬರಿ ನಗರದಲ್ಲಿ ಮನೆಯ ಮಹಡಿಯ ಮೇಲೆ ಮಕ್ಕಳು ಕೂಡಿಹಾಕಿದ್ದ ಅನಂತಯ್ಯಶೆಟ್ಟಿ (90) ಎಂಬ ವೃದ್ಧನನ್ನು ಇಂದು ಪೊಲೀಸರು ರಕ್ಷಿಸಿ, ಜಯನಗರದ ಸರ್ಕಾರಿ ಆಸ್ಪತ್ರಗೆ ದಾಖಲಿಸಿದ್ದಾರೆ.
ಕಳೆದ ಆರು ತಿಂಗಳಿನಿಂದ ಅನಂತಯ್ಯ ಅವರನ್ನು ಬಿಸಿಲು, ಮಳೆ ಎಂದು ನೋಡದೆ ತೆರೆದ ಮಹಡಿಯ ಮೇಲೆ ಬಂಧಿಸಲಾಗಿತ್ತು. ಅನಂತಯ್ಯನಿಗೆ ನಾಲ್ಕು ಜನ ಗಂಡು ಮಕ್ಕಳಿದ್ದು, ಯಾರೊಬ್ಬರು ಅವರ ಸಹಾಯಕ್ಕೆ ಬರದೆ, ಸರಿಯಾಗಿ ಊಟ ನೀಡದೆ, ಕೂಡಿ ಹಾಕಿದ್ದರು.
ಘಟನೆಯ ಹಿನ್ನೆಲೆ : ಬುಧವಾರ ಬೆಳಗ್ಗೆ ಶಾಖಾಂಬರಿ ನಗರದ 7 ನೇ ಮುಖ್ಯರಸ್ತೆಯ ಮೂರಂತಸ್ತಿನ ಮಹಡಿಯ ಮೇಲೆ ಪೊಲೀಸರು ಮತ್ತು ಮಾಧ್ಯಮದವರು ತೆರಳಿದಾಗ ವೃದ್ಧನನ್ನು ಕೂಡಿ ಹಾಕಿರುವ ಅಮಾನವೀಯ ಘಟನೆ ಬಯಲಾಗಿದೆ.
ಮನೆಯ ಟೆರೇಸ್ನ ನೀರಿನ ಟ್ಯಾಂಕ್ ಕೆಳಗೆ ಕಬ್ಬಿಣದ ಗ್ರಿಲ್ಗಳ ಒಳಗೆ, ಒಂದು ಬಟ್ಟೆ ಹಾಸಿ ಅನಂತಯ್ಯಶೆಟ್ಟಿ ಅವರ ಕಾಲಿಗೆ ಸರಪಳಿ ಬಿಗಿದು ಪ್ರಾಣಿಗಳಂತೆ ಕಟ್ಟಿ ಹಾಕಲಾಗಿತ್ತು. ತಂದೆ ಹೆಚ್ಚಿನ ಊಟ ಕೇಳುತ್ತಾರೆ ಮತ್ತು ಮನೆ ಗಲೀಜು ಮಾಡುತ್ತಾರೆ ಎಂದು ಮಕ್ಕಳು ಈ ರೀತಿ ಕೂಡಿ ಹಾಕಿದ್ದರು.
ಬೇಕಾದಷ್ಟು ಆಸ್ತಿ ಇದೆ : ಒಟ್ಟು ನಾಲ್ಕು ಮಂದಿ ಗಂಡು ಮಕ್ಕಳ ಪೈಕಿ ಸುರೇಶ ಎಂಬ ಪುತ್ರ ಮನೆಯಲ್ಲಿ ಅನಂತಯ್ಯಶೆಟ್ಟಿ ವಾಸವಾಗಿದ್ದರು. ಅದೇ ಮನೆಯ ಕೆಳ ಅಂತಸ್ತಿನಲ್ಲಿ ಸುರೇಶ ದಿನಸಿ ಅಂಗಡಿ ನಡೆಸುತ್ತಿದ್ದಾರೆ. ಎರಡು ಅಂತಸ್ತುಗಳನ್ನು ಬಾಡಿಗೆಗೆ ನೀಡಲಾಗಿದ್ದು, ಒಳ್ಳೆಯ ಸ್ಥಿತಿವಂತರಾಗಿದ್ದಾರೆ.
ಸುಮಾರು ಆರು ತಿಂಗಳಿನಿಂದ ಹೀಗೆ ತಂದೆಯನ್ನು ಕೂಡಿಹಾಕಿ ಸುರೇಶ ಅಮಾನವೀಯ ವರ್ತನೆ ಪ್ರದರ್ಶಿಸಿದ್ದಾನೆ. ಮಾಧ್ಯಮಗಳ ಮುಂದೆ ಮಾತನಾಡಿದ ಸುರೇಶ ಜಾಸ್ತಿ ಊಟ ಕೇಳುತ್ತಾರೆ, ಆದ್ದರಿಂದ ಕಟ್ಟಿ ಹಾಕಲಾಗಿದೆ ಎಂದು ಮಾನವೀಯತೆ ಮರೆತಂತೆ ಮಾತನಾಡುತ್ತಾನೆ.
ಕುಳಿತುಕೊಳ್ಳಲೂ ಸ್ಥಳವಿಲ್ಲದಷ್ಟು ಜಾಗದಲ್ಲಿ ಶೆಟ್ಟಿ ಆರು ತಿಂಗಳು ಕಳೆದಿರುವುದರಿಂದ ಕಾಲುಗಳು ಮರಗಟ್ಟಿ ನಡೆಯುವುದು ಕಷ್ಟಕರವಾಗಿದೆ. ಪೊಲೀಸರು ವೈದ್ಯರ ಸಹಾಯದಿಂದ ಅನಂತಯ್ಯ ಶೆಟ್ಟಿ ಅವರನ್ನು ರಕ್ಷಿಸಿ, ಆಸ್ಪತ್ರಗೆ ದಾಖಲಿಸಿದ್ದಾರೆ.
ದಕ್ಷಿಣ ವಲಯ ಡಿಸಿಪಿ ರೇವಣ್ಣ ಮತ್ತು ಅವರ ಸಿಬ್ಬಂದಿ ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಅನಂತಯ್ಯ ಶೆಟ್ಟಿ ಅವರನ್ನು ಬಂಧಮುಕ್ತಗೊಳಿಸಿದ್ದಾರೆ. ಘಟನೆ ಕುರಿತು ಯಾರು ದೂರು ನೀಡಿಲ್ಲ. ದೂರುಗಳು ಬಂದರೆ ಪುತ್ರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.
ವಿರುದ್ಧ ಪ್ರಕರಣ : ಮಂಗಳವಾರ ಮಲ್ಲೇಶ್ವರಂ ನಲ್ಲಿ ತಂದೆ ಮತ್ತು ತಾಯಿ ಮಗಳು ಪ್ರೀತಿ ಮಾಡಿದಳು ಎಂದು ನಾಲ್ಕು ವರ್ಷಗಳಿಂದ ಗೃಹ ಬಂಧನದಲ್ಲಿ ಕೂಡಿಹಾಕಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ( ಮಗಳಿಗೇ ಗೃಹಬಂಧನ)
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SCR Railway Recruitment 2026: ಲಿಖಿತ ಪರೀಕ್ಷೆ ಇಲ್ಲದೇ ನೇಮಕಾತಿ, 2801 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ












Click it and Unblock the Notifications