ಬಾಕ್ಸರ್ ವಿಜೇಂದರ್ ಗೆ 6-10 ವರ್ಷ ಜೈಲು ಭೀತಿ

ನಾನೇನು ತಪ್ಪು ಮಾಡಿಲ್ಲ ನಾನು ಉದ್ದೀಪನ ಪರೀಕ್ಷೆಗೆ ಒಳಗಾಗುವುದಿಲ್ಲ. ಕೂದಲು ಹಾಗೂ ರಕ್ತ ಸ್ಯಾಂಪಲ್ ನೀಡಲಾರೆ ಎಂದು ಹಠ ಹಿಡಿದಿದ್ದ ವಿಜೇಂದರ್ ಈಗ ತಣ್ಣಗಾಗಿದ್ದಾನೆ. ತನ್ನ ರಕ್ತದ ಮಾದರಿಯನ್ನು ಪರೀಕ್ಷೆಗೆ ನೀಡಿದ್ದಾನೆ ಎಂದು ವರದಿಯಾಗಿದೆ.
ರಾಮ್ ಹೇಳಿಕೆ : ವಿಜೇಂದರ್ ಸಿಂಗ್ ಗೆಳೆಯ ಅಮಾನತುಗೊಂಡಿರುವ ಬಾಕ್ಸರ್ ರಾಮ್ ಸಿಂಗ್ ಹೇಳಿಕೆ ಈ ಪ್ರಕರಣದಲ್ಲಿ ಮಹತ್ವ ಪಡೆಯುವ ಸಾಧ್ಯತೆಯಿದೆ. ನಾನು ವಿಜೇಂದರ್ ಕುತೂಹಲಕ್ಕೆ ಹೆರಾಯಿನ್ ಸೇವಿಸಿದ್ದು ನಿಜ. ರೇವ್ ಪಾರ್ಟಿಗಳಲ್ಲಿ ಹೆರಾಯಿನ್ ಸೇವಿಸುವುದನ್ನು ನೋಡಿದ್ದೆವು. ಹೀಗಾಗಿ ಆಹಾರದ ಜೊತೆ ಸ್ವಲ್ಪ ಪ್ರಮಾಣದಲ್ಲಿ ಸೇವಿಸಿದೆವು ಎಂದು ರಾಮ್ ಸಿಂಗ್ ಹೇಳಿದ್ದರು.
ಹೇಳಿಕೆ ಪ್ರಕಾರ ಹಾಗೂ ಡೋಪ್ ಟೆಸ್ಟ್ ನಲ್ಲಿ ಪಾಸಿಟಿವ್ ಬಂದರೆ ವಿಜೇಂದರ್ ಗೆ ಕನಿಷ್ಠ 6 ವರ್ಷ ಜೈಲುಶಿಕ್ಷೆ ಖಾಯಂ. ಆದರೆ, ವ್ಯಕ್ತಿ ಮಾದಕವ್ಯಸನಿ ಅಲ್ಲದಿದ್ದರೆ ತಪ್ಪು ತಿದ್ದುಗೊಳ್ಳಲು ಅವಕಾಶ ನೀಡುವ ಸಾಧ್ಯತೆಯೂ ಇರುತ್ತದೆ. ವಿಜೇಂದರ್ ಅವರು ಇನ್ನೊಂದು ದಿನ ಮುಂದೂಡಿದ್ದಾರೆ ಪೊಲೀಸರಿಗೆ ತನಿಖೆ ಕಷ್ಟವಾಗುತ್ತಿತ್ತು.
ಡ್ರಗ್ಸ್ ಸೇವಿಸಿದ 48 ಗಂಟೆಯೊಳಗೆ ಆರೋಪಿಯನ್ನು ರಕ್ತಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ತುಂಬಾ ಹಿಂದೆ ಡ್ರಗ್ಸ್ ಸೇವಿಸಿದ್ದರೆ ಕಂಡು ಹಿಡಿಯುವುದು ಕಷ್ಟವಾಗಲಿದೆ.
ಕಾನೂನು ಪ್ರಕಾರ ವಿಜೇಂದರ್ ಸಿಂಗ್ 2 ಗ್ರಾಂ ಮಾತ್ರ ಸೇವಿಸಿದ್ದರೆ ಬಚಾವ್. ಆದರೆ, ಡ್ರಗ್ಸ್ ಕಳ್ಳ ಸಾಗಾಣಿಕೆ, ಉದ್ದೇಶಪೂರ್ವಕವಾಗಿ ತಮ್ಮ ಕಾರು ನೀಡಿದ್ದರು ಎಂಬುದು ಸಾಬೀತಾದರೆ ಗರಿಷ್ಠ 10 ವರ್ಷ ಜೈಲು ಗ್ಯಾರಂಟಿ. ಬೇರೆಯವರಿಗೆ ಮಾದಕ ದ್ರವ್ಯಗಳನ್ನು ಶೇಖರಿಸಿಡಲು ಸ್ಥಳ, ವಾಹನ ನೀಡಿದ್ದರೆ 20 ವರ್ಷ ಜೈಲುಶಿಕ್ಷೆ, 2 ಲಕ್ಷ ರು ವರೆಗೆ ದಂಡ ವಿಧಿಸಲು ಅವಕಾಶವಿದೆ.
ಮಾ.8ರಂದು ಜಿರಾಕ್ ಪುರ್ ದ ಫ್ಲಾಟ್ ವೊಂದರ ಮೇಲೆ ಮೇಲೆ ದಾಳಿ ನಡೆಸಿದ ಪೊಲೀಸರಿಗೆ ಸುಮಾರು 130 ಕೋಟಿ ಮೌಲ್ಯದ ಹೆರಾಯಿನ್ ಸಿಕ್ಕಿತ್ತು. ಅದೇ ಫ್ಲಾಟಿನಲ್ಲಿದ್ದ ಕಾರೊಂದರಲ್ಲಿ 10 ಕೆಜಿ ತೂಗುವ ಹೆರಾಯಿನ್ ಪತ್ತೆಯಾಗಿದ್ದು, ಆ ಕಾರು ಖ್ಯಾತ ಬಾಕ್ಸರ್ ವಿಜೇಂದರ್ ಸಿಂಗ್ ಅವ ಪತ್ನಿಗೆ ಸೇರಿದ್ದು ಎಂದು ತಿಳಿದು ಬಂದಿತ್ತು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications