ಬಾಕ್ಸರ್ ವಿಜೇಂದರ್ ಗೆ 6-10 ವರ್ಷ ಜೈಲು ಭೀತಿ

ನಾನೇನು ತಪ್ಪು ಮಾಡಿಲ್ಲ ನಾನು ಉದ್ದೀಪನ ಪರೀಕ್ಷೆಗೆ ಒಳಗಾಗುವುದಿಲ್ಲ. ಕೂದಲು ಹಾಗೂ ರಕ್ತ ಸ್ಯಾಂಪಲ್ ನೀಡಲಾರೆ ಎಂದು ಹಠ ಹಿಡಿದಿದ್ದ ವಿಜೇಂದರ್ ಈಗ ತಣ್ಣಗಾಗಿದ್ದಾನೆ. ತನ್ನ ರಕ್ತದ ಮಾದರಿಯನ್ನು ಪರೀಕ್ಷೆಗೆ ನೀಡಿದ್ದಾನೆ ಎಂದು ವರದಿಯಾಗಿದೆ.
ರಾಮ್ ಹೇಳಿಕೆ : ವಿಜೇಂದರ್ ಸಿಂಗ್ ಗೆಳೆಯ ಅಮಾನತುಗೊಂಡಿರುವ ಬಾಕ್ಸರ್ ರಾಮ್ ಸಿಂಗ್ ಹೇಳಿಕೆ ಈ ಪ್ರಕರಣದಲ್ಲಿ ಮಹತ್ವ ಪಡೆಯುವ ಸಾಧ್ಯತೆಯಿದೆ. ನಾನು ವಿಜೇಂದರ್ ಕುತೂಹಲಕ್ಕೆ ಹೆರಾಯಿನ್ ಸೇವಿಸಿದ್ದು ನಿಜ. ರೇವ್ ಪಾರ್ಟಿಗಳಲ್ಲಿ ಹೆರಾಯಿನ್ ಸೇವಿಸುವುದನ್ನು ನೋಡಿದ್ದೆವು. ಹೀಗಾಗಿ ಆಹಾರದ ಜೊತೆ ಸ್ವಲ್ಪ ಪ್ರಮಾಣದಲ್ಲಿ ಸೇವಿಸಿದೆವು ಎಂದು ರಾಮ್ ಸಿಂಗ್ ಹೇಳಿದ್ದರು.
ಹೇಳಿಕೆ ಪ್ರಕಾರ ಹಾಗೂ ಡೋಪ್ ಟೆಸ್ಟ್ ನಲ್ಲಿ ಪಾಸಿಟಿವ್ ಬಂದರೆ ವಿಜೇಂದರ್ ಗೆ ಕನಿಷ್ಠ 6 ವರ್ಷ ಜೈಲುಶಿಕ್ಷೆ ಖಾಯಂ. ಆದರೆ, ವ್ಯಕ್ತಿ ಮಾದಕವ್ಯಸನಿ ಅಲ್ಲದಿದ್ದರೆ ತಪ್ಪು ತಿದ್ದುಗೊಳ್ಳಲು ಅವಕಾಶ ನೀಡುವ ಸಾಧ್ಯತೆಯೂ ಇರುತ್ತದೆ. ವಿಜೇಂದರ್ ಅವರು ಇನ್ನೊಂದು ದಿನ ಮುಂದೂಡಿದ್ದಾರೆ ಪೊಲೀಸರಿಗೆ ತನಿಖೆ ಕಷ್ಟವಾಗುತ್ತಿತ್ತು.
ಡ್ರಗ್ಸ್ ಸೇವಿಸಿದ 48 ಗಂಟೆಯೊಳಗೆ ಆರೋಪಿಯನ್ನು ರಕ್ತಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ತುಂಬಾ ಹಿಂದೆ ಡ್ರಗ್ಸ್ ಸೇವಿಸಿದ್ದರೆ ಕಂಡು ಹಿಡಿಯುವುದು ಕಷ್ಟವಾಗಲಿದೆ.
ಕಾನೂನು ಪ್ರಕಾರ ವಿಜೇಂದರ್ ಸಿಂಗ್ 2 ಗ್ರಾಂ ಮಾತ್ರ ಸೇವಿಸಿದ್ದರೆ ಬಚಾವ್. ಆದರೆ, ಡ್ರಗ್ಸ್ ಕಳ್ಳ ಸಾಗಾಣಿಕೆ, ಉದ್ದೇಶಪೂರ್ವಕವಾಗಿ ತಮ್ಮ ಕಾರು ನೀಡಿದ್ದರು ಎಂಬುದು ಸಾಬೀತಾದರೆ ಗರಿಷ್ಠ 10 ವರ್ಷ ಜೈಲು ಗ್ಯಾರಂಟಿ. ಬೇರೆಯವರಿಗೆ ಮಾದಕ ದ್ರವ್ಯಗಳನ್ನು ಶೇಖರಿಸಿಡಲು ಸ್ಥಳ, ವಾಹನ ನೀಡಿದ್ದರೆ 20 ವರ್ಷ ಜೈಲುಶಿಕ್ಷೆ, 2 ಲಕ್ಷ ರು ವರೆಗೆ ದಂಡ ವಿಧಿಸಲು ಅವಕಾಶವಿದೆ.
ಮಾ.8ರಂದು ಜಿರಾಕ್ ಪುರ್ ದ ಫ್ಲಾಟ್ ವೊಂದರ ಮೇಲೆ ಮೇಲೆ ದಾಳಿ ನಡೆಸಿದ ಪೊಲೀಸರಿಗೆ ಸುಮಾರು 130 ಕೋಟಿ ಮೌಲ್ಯದ ಹೆರಾಯಿನ್ ಸಿಕ್ಕಿತ್ತು. ಅದೇ ಫ್ಲಾಟಿನಲ್ಲಿದ್ದ ಕಾರೊಂದರಲ್ಲಿ 10 ಕೆಜಿ ತೂಗುವ ಹೆರಾಯಿನ್ ಪತ್ತೆಯಾಗಿದ್ದು, ಆ ಕಾರು ಖ್ಯಾತ ಬಾಕ್ಸರ್ ವಿಜೇಂದರ್ ಸಿಂಗ್ ಅವ ಪತ್ನಿಗೆ ಸೇರಿದ್ದು ಎಂದು ತಿಳಿದು ಬಂದಿತ್ತು.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications