ಟೆಕ್ ಮಹೀಂದ್ರಾಗೆ ಶುಭ ಕಾಲ, Q2ನಲ್ಲಿ ಬಂಪರ್

ಸೆಪ್ಟೆಂಬರ್ 30,2012ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ಟೆಕ್ ಮಹೀಂದ್ರ ಸಂಸ್ಥೆ ಶೇ 28 ರಷ್ಟು ನಿವ್ವಳ ಲಾಭ ದೊಂದಿಗೆ 178 ಕೋಟಿ ರು ಗಳಿಸಿದೆ.
ಸಂಸ್ಥೆಯ ಆದಾಯ Y-o-Yನಲ್ಲಿ ಶೇ 22 ರಷ್ಟು ಏರಿಕೆಯಾಗಿದ್ದು 1,631 ಕೋಟಿ ಬಂದಿದೆ.
ಮಂಗಳವಾರ ಬಿಎಸ್ ಇನಲ್ಲಿ ಟೆಕ್ ಮಹೀಂದ್ರಾ ಷೇರುಗಳು ಮೇಲ್ಮುಖವಾಗಿ ಚಲಿಸುತ್ತಿದೆ. ಮಧಾಹ್ನ12.35 ರ ವೇಳೆಗೆ 965.80 ರು ನಂತೆ ಶೇ 1.13 ರಷ್ಟು ಏರಿಕೆ ಕಂಡಿದೆ.
ಇದೇ ವೇಳೆ ಎನ್ ಎಸ್ ಇನಲ್ಲಿ 966.20 ರು ನಂತೆ ಶೇ 1.13 ರಷ್ಟು ಏರಿದೆ.
ಸೆಪ್ಟೆಂಬರ್ 30,2012ಕ್ಕೆ ಅನ್ವಯವಾಗುವಂತೆ ಟೆಕ್ ಮಹೀಂದ್ರಾ EPS ಮೌಲ್ಯ 23.2 ರು ನಷ್ಟಿತ್ತು. ಪ್ರಸಕ್ತ ತ್ರೈಮಾಸಿಕದಲ್ಲಿ ಹಚಿಸನ್ ಗ್ಲೋಬಲ ಸರ್ವೀಸರ್(HGS) ಸಂಸ್ಥೆಯನ್ನು 87.1 ಮಿಲಿಯನ್ ಡಾಲರ್ ಮೊತ್ತಕ್ಕೆ ಟೆಕ್ ಮಹೀಂದ್ರಾ ಖರೀದಿಸಿದ್ದನ್ನು ಘೋಷಿಸಿತು.
ಇದೇ ತ್ರೈಮಾಸಿಕ ಅವಧಿಯಲ್ಲಿ ಭಾರ್ತಿ ಗ್ರೂಪ್ ಕಂಪನಿಗೆ ಸೇರಿದ ಕಮ್ ವೀವಾ ಟೆಕ್ನಾಲಜೀಸ್ ಲಿಮಿಟೆಡ್ ನ ಶೇ 51 ರಷ್ಟು ಷೇರನ್ನು ಟೆಕ್ ಮಹೀಂದ್ರಾ ತನ್ನದಾಗಿಸಿಕೊಂಡಿದೆ.
'ಯುಕೆ, ಐರ್ಲೆಂಡ್ ಹಾಗೂ ಆಸ್ಟ್ರೇಲಿಯಾದಲ್ಲಿನ ಗ್ರಾಹಕರ ಮೇಲೆ ಹಿಡಿತ ಸಾಧಿಸಿದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಸೇವೆ ಒದಗಿಸುವುದು ನಮ್ಮ ಮೊದಲ ಆದ್ಯತೆ, ಇದರಿಂದ ಮಾರುಕಟ್ಟೆ ವಿಸ್ತರಣೆಯೂ ಸಾಧ್ಯ' ಎಂದು ಕಾರ್ಯಕಾರಿ ಉಪಾಧ್ಯಕ್ಷ ವಿನೀತ್ ನಾಯರ್ ಹೇಳಿದ್ದಾರೆ.
'ನಮ್ಮಲ್ಲಿರುವ ಮಾನವ ಸಂಪನ್ಮೂಲ ಸಮರ್ಥವಾಗಿ ಬಳಕೆ ಮಾಡಲು ಯೋಜನೆ ಸಿದ್ಧವಾಗಿದೆ. ಜೊತೆಗೆ 5 ರಿಂದ 10 ಸಾವಿರ ಉದ್ಯೋಗಿಗಳ ನೇಮಕಾತಿ ಸಾಧ್ಯತೆ ಇದೆ' ಎಂದು ನಾಯರ್ ಹೇಳಿದ್ದಾರೆ. ಸದ್ಯಕ್ಕೆ ಎರಡು ಕಂಪನಿಗಳನ್ನು ಸೇರಿಸಿ 75,000 ಉದ್ಯೋಗಿಗಳಿದ್ದಾರೆ.
ಮಹೀಂದ್ರಾ ಅಂಡ್ ಮಹೀಂದ್ರಾ ಸಂಸ್ಥೆಯ ಭಾಗವಾಗಿರುವ ಟೆಕ್ ಮಹೀಂದ್ರಾ ಸಂಸ್ಥೆ ಸರ್ಕಾರಿ ಹರಾಜಿನಲ್ಲಿ ಸತ್ಯಂ ಸಂಸ್ಥೆಯನ್ನು 2009ರಲ್ಲಿ ಖರೀದಿಸಿತ್ತು. ಸತ್ಯಂನ ಸ್ಥಾಪಕ ಸಿಇಒ ರಾಮಲಿಂಗರಾಜು ಐಟಿ ಲೋಕ ಬೆರಗಾಗುವಂಥ ಹಗರಣಕ್ಕೆ ಸಂಸ್ಥೆಯನ್ನು ದೂಡಿದ್ದರು.
-
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ 3 ಜಾಗ ನಿಗದಿ: ಡಿಸಿಎಂ ಡಿ.ಕೆ ಶಿವಕುಮಾರ್ ಅಪ್ಡೇಟ್ಸ್ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್












Click it and Unblock the Notifications