ಸಿಟಿ ಗ್ರೂಪಿನಿಂದ ವಿಕ್ರಮ್ ಪಂಡಿತ ಹೊರನಡೆದಿದ್ದು ಏಕೆ?

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಸಿಟಿ ಗ್ರೂಪ್ ಸಂಸ್ಥೆಯನ್ನು ಲಾಭದಾಯಕ ಸ್ಥಾನಕ್ಕೆ ತಂದಿದ್ದ ಪಂಡಿತ್ ನಿರ್ಗಮನದ ಬಗ್ಗೆ ವಾಲ್ ಸ್ಟ್ರೀಟ್ ನಲ್ಲಿ ದಿಗ್ಭ್ರಮೆ ವ್ಯಕ್ತವಾಗಿತ್ತು.
ಸುಮಾರು 4,500 ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿ 2011ರಲ್ಲಿ ಸುಮಾರು 1.4 ಬಿಲಿಯನ್ ಡಾಲರ್ ಉಳಿತಾಯ ಗಳಿಸಲು ಸಿಇಒ ವಿಕ್ರಮ್ ಪಂಡಿತ್ ಕಾರಣರಾಗಿದ್ದರು ಎಂದರೆ ತಪ್ಪಾಗಲಾರದು.
ನಾಗಪುರ ಮೂಲದ ಎನ್ಆರ್ಐ ವಿಕ್ರಮ್ ಪಂಡಿತ್ ಅಮೆರಿಕಾದ ಅತಿದೊಡ್ಡ ಹಣಕಾಸು ಸಂಸ್ಥೆ ಸಿಟಿಗ್ರೂಪ್ ನ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕವಾಗಿದ್ದು 2007ರ ಸುಮಾರಿಗೆ. ಕಳೆದ ಐದು ವರ್ಷಗಳಲ್ಲಿ ಸಿಟಿ ಗ್ರೂಪ್ ಬೆಳೆದು ಬಂದ ರೀತಿ ನೋಡಿದರೆ ಪಂಡಿತ್ ದೂರದರ್ಶಿತ್ವದ ಬಗ್ಗೆ ತಿಳಿಯುತ್ತದೆ.
55 ವರ್ಷದ ಪಂಡಿತ್ ಅಧಿಕಾರ ವಹಿಸಿಕೊಂಡ ಮೇಲೆ ಸಿಟಿ ಗ್ರೂಪ್ ನ ಷೇರು ಮೌಲ್ಯ ಕೂಡಾ ಏರಿಕೆ ಕಂಡಿತ್ತು.
ಸಿಟಿಯ ಇನ್ವೆಸ್ಟ್ಮೆಂಟ್ ಬ್ಯಾಂಕಿಂಗ್ ಮುಖ್ಯಸ್ಥರಾಗಿದ್ದ ಪಂಡಿತ್ ಅವರ ಹೆಜ್ ಫಂಡ್ ಫರ್ಮ್ನ್ನು 800 ಮಿಲಿಯನ್ ಅಮೆರಿಕನ್ ಡಾಲರ್ಗೆ ಸಿಟಿಗ್ರೂಪ್ ಕೊಂಡುಕೊಂಡಿತ್ತು. ಅಮೆರಿಕ ಹಣಕಾಸು ಕ್ಷೇತ್ರದಲ್ಲಿ ಅನೇಕ ಭಾರತೀಯರು ಉನ್ನತ ಸ್ಥಾನದಲ್ಲಿದ್ದರೂ ಈ ಕ್ಷೇತ್ರದ ಇತಿಹಾಸದಲ್ಲಿಯೇ ಭಾರತೀಯರೊಬ್ಬರು ಈ ಮಟ್ಟಕ್ಕೆ ಏರಿದ ಸಾಧನೆ ಮಾಡಿದ್ದರು.
ಉದ್ಯೋಗಿಗಳ ವಜಾ, ನೂತನ ಆರ್ಥಿಕ ನೀತಿ, ಗ್ರಾಹಕ ಸಂವೇದಿ ಕ್ರಮಗಳನ್ನು ಹೊರಡಿಸಿದ ಪಂಡಿತ್ ಅನುಸರಿಸಿದ ನೀತಿ ನಿಯಮದ ಬಗ್ಗೆ ಸಿಟಿ ಗ್ರೂಪ್ ಬೋರ್ಡ್ ನಲ್ಲಿ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಹಲವು ಬಾರಿಗೆ ಬೋರ್ಡ್ ನಲ್ಲಿ ಚರ್ಚೆಯಾಗದೆ ಪಂಡಿತ್ ಅನೇಕ ನಿರ್ಣಯಗಳನ್ನು ಕೈಗೊಂಡು ಜಾರಿಗೊಳಿಸುತ್ತಿದ್ದಾರೆ ಎಂಬ ಆರೋಪವನ್ನು ಹೊರೆಸಲಾಗಿತ್ತು.
ಇದಾ ಜೊತೆಗೆ ಫೆಡರಲ್ ರೆಸರ್ವ್ ಸ್ಟ್ರೀಟ್ ಪರೀಕ್ಷೆಯಲ್ಲಿ ಸಿಟಿ ಗ್ರೂಪ್ ಪಾಸ್ ಆಗದೆ ವೈಫಲ್ಯ ಕಂಡಿದ್ದಕ್ಕೆ ಪಂಡಿತ್ ರನ್ನು ದೂಷಿಸಲಾಗಿತ್ತು. 2008ರ ಆರ್ಥಿಕ ಸಂಕಷ್ಟದ ನಂತರ ಅಮೆರಿಕದ ಮೂರನೇ ಅತಿದೊಡ್ಡ ಯುಎಸ್ ಬ್ಯಾಂಕ್ ಅನ್ನು ಕಟ್ಟಿ ಬೆಳೆಸಿದ ಪಂಡಿತ್ ರನ್ನು ಸಿಟಿ ಗ್ರೂಪ್ ಹೊರ ಹಾಕಿರುವುದು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿರುವುದಂತೂ ನಿಜ.
ಜುಲೈ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಸುಮಾರು ಶೇ 88 ರಂತೆ 468 ಮಿಲಿಯನ್ ಯುಎಸ್ ಡಾಲರ್ ಏರಿಕೆ ಕಂಡಿದ್ದ ಸಿಟಿ ಗ್ರೂಪ್ ಅನ್ನು ಪಂಡಿತ್ ಭಾರದ ಮನಸ್ಸಿನಿಂದ ತೊರೆದಿದ್ದಾರೆ.
ಆರ್ಥಿಕ ಸಂಕಷ್ಟದಿಂದ ಹೇಗೆ ಹೊರಬರಬೇಕು ಎಂಬುದನ್ನು ಸಿಟಿ ಗ್ರೂಪ್ ನ ನನ್ನ ಸಹದ್ಯೋಗಿಗಳು ಜಗತ್ತಿಗೆ ತೋರಿಸಿಕೊಟ್ಟ್ಟಿದ್ದಾರೆ. ಈಗ ಸಿಟಿ ಗ್ರೂಪ್ ಸದೃಢವಾಗಿದ್ದು, ಬೇರೆಯವರು ನನ್ನ ಸ್ಥಾನವನ್ನು ಅಲಂಕರಿಸಲಿ,. ನನಗೆ ಹುದ್ದೆ ತೊರೆಯಲು ಇದು ಸಕಾಲ ಎಂದು ವಿಕ್ರಮ್ ಪಂಡಿತ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications