ಸಿಟಿ ಗ್ರೂಪಿನಿಂದ ವಿಕ್ರಮ್ ಪಂಡಿತ ಹೊರನಡೆದಿದ್ದು ಏಕೆ?

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಸಿಟಿ ಗ್ರೂಪ್ ಸಂಸ್ಥೆಯನ್ನು ಲಾಭದಾಯಕ ಸ್ಥಾನಕ್ಕೆ ತಂದಿದ್ದ ಪಂಡಿತ್ ನಿರ್ಗಮನದ ಬಗ್ಗೆ ವಾಲ್ ಸ್ಟ್ರೀಟ್ ನಲ್ಲಿ ದಿಗ್ಭ್ರಮೆ ವ್ಯಕ್ತವಾಗಿತ್ತು.
ಸುಮಾರು 4,500 ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿ 2011ರಲ್ಲಿ ಸುಮಾರು 1.4 ಬಿಲಿಯನ್ ಡಾಲರ್ ಉಳಿತಾಯ ಗಳಿಸಲು ಸಿಇಒ ವಿಕ್ರಮ್ ಪಂಡಿತ್ ಕಾರಣರಾಗಿದ್ದರು ಎಂದರೆ ತಪ್ಪಾಗಲಾರದು.
ನಾಗಪುರ ಮೂಲದ ಎನ್ಆರ್ಐ ವಿಕ್ರಮ್ ಪಂಡಿತ್ ಅಮೆರಿಕಾದ ಅತಿದೊಡ್ಡ ಹಣಕಾಸು ಸಂಸ್ಥೆ ಸಿಟಿಗ್ರೂಪ್ ನ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕವಾಗಿದ್ದು 2007ರ ಸುಮಾರಿಗೆ. ಕಳೆದ ಐದು ವರ್ಷಗಳಲ್ಲಿ ಸಿಟಿ ಗ್ರೂಪ್ ಬೆಳೆದು ಬಂದ ರೀತಿ ನೋಡಿದರೆ ಪಂಡಿತ್ ದೂರದರ್ಶಿತ್ವದ ಬಗ್ಗೆ ತಿಳಿಯುತ್ತದೆ.
55 ವರ್ಷದ ಪಂಡಿತ್ ಅಧಿಕಾರ ವಹಿಸಿಕೊಂಡ ಮೇಲೆ ಸಿಟಿ ಗ್ರೂಪ್ ನ ಷೇರು ಮೌಲ್ಯ ಕೂಡಾ ಏರಿಕೆ ಕಂಡಿತ್ತು.
ಸಿಟಿಯ ಇನ್ವೆಸ್ಟ್ಮೆಂಟ್ ಬ್ಯಾಂಕಿಂಗ್ ಮುಖ್ಯಸ್ಥರಾಗಿದ್ದ ಪಂಡಿತ್ ಅವರ ಹೆಜ್ ಫಂಡ್ ಫರ್ಮ್ನ್ನು 800 ಮಿಲಿಯನ್ ಅಮೆರಿಕನ್ ಡಾಲರ್ಗೆ ಸಿಟಿಗ್ರೂಪ್ ಕೊಂಡುಕೊಂಡಿತ್ತು. ಅಮೆರಿಕ ಹಣಕಾಸು ಕ್ಷೇತ್ರದಲ್ಲಿ ಅನೇಕ ಭಾರತೀಯರು ಉನ್ನತ ಸ್ಥಾನದಲ್ಲಿದ್ದರೂ ಈ ಕ್ಷೇತ್ರದ ಇತಿಹಾಸದಲ್ಲಿಯೇ ಭಾರತೀಯರೊಬ್ಬರು ಈ ಮಟ್ಟಕ್ಕೆ ಏರಿದ ಸಾಧನೆ ಮಾಡಿದ್ದರು.
ಉದ್ಯೋಗಿಗಳ ವಜಾ, ನೂತನ ಆರ್ಥಿಕ ನೀತಿ, ಗ್ರಾಹಕ ಸಂವೇದಿ ಕ್ರಮಗಳನ್ನು ಹೊರಡಿಸಿದ ಪಂಡಿತ್ ಅನುಸರಿಸಿದ ನೀತಿ ನಿಯಮದ ಬಗ್ಗೆ ಸಿಟಿ ಗ್ರೂಪ್ ಬೋರ್ಡ್ ನಲ್ಲಿ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಹಲವು ಬಾರಿಗೆ ಬೋರ್ಡ್ ನಲ್ಲಿ ಚರ್ಚೆಯಾಗದೆ ಪಂಡಿತ್ ಅನೇಕ ನಿರ್ಣಯಗಳನ್ನು ಕೈಗೊಂಡು ಜಾರಿಗೊಳಿಸುತ್ತಿದ್ದಾರೆ ಎಂಬ ಆರೋಪವನ್ನು ಹೊರೆಸಲಾಗಿತ್ತು.
ಇದಾ ಜೊತೆಗೆ ಫೆಡರಲ್ ರೆಸರ್ವ್ ಸ್ಟ್ರೀಟ್ ಪರೀಕ್ಷೆಯಲ್ಲಿ ಸಿಟಿ ಗ್ರೂಪ್ ಪಾಸ್ ಆಗದೆ ವೈಫಲ್ಯ ಕಂಡಿದ್ದಕ್ಕೆ ಪಂಡಿತ್ ರನ್ನು ದೂಷಿಸಲಾಗಿತ್ತು. 2008ರ ಆರ್ಥಿಕ ಸಂಕಷ್ಟದ ನಂತರ ಅಮೆರಿಕದ ಮೂರನೇ ಅತಿದೊಡ್ಡ ಯುಎಸ್ ಬ್ಯಾಂಕ್ ಅನ್ನು ಕಟ್ಟಿ ಬೆಳೆಸಿದ ಪಂಡಿತ್ ರನ್ನು ಸಿಟಿ ಗ್ರೂಪ್ ಹೊರ ಹಾಕಿರುವುದು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿರುವುದಂತೂ ನಿಜ.
ಜುಲೈ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಸುಮಾರು ಶೇ 88 ರಂತೆ 468 ಮಿಲಿಯನ್ ಯುಎಸ್ ಡಾಲರ್ ಏರಿಕೆ ಕಂಡಿದ್ದ ಸಿಟಿ ಗ್ರೂಪ್ ಅನ್ನು ಪಂಡಿತ್ ಭಾರದ ಮನಸ್ಸಿನಿಂದ ತೊರೆದಿದ್ದಾರೆ.
ಆರ್ಥಿಕ ಸಂಕಷ್ಟದಿಂದ ಹೇಗೆ ಹೊರಬರಬೇಕು ಎಂಬುದನ್ನು ಸಿಟಿ ಗ್ರೂಪ್ ನ ನನ್ನ ಸಹದ್ಯೋಗಿಗಳು ಜಗತ್ತಿಗೆ ತೋರಿಸಿಕೊಟ್ಟ್ಟಿದ್ದಾರೆ. ಈಗ ಸಿಟಿ ಗ್ರೂಪ್ ಸದೃಢವಾಗಿದ್ದು, ಬೇರೆಯವರು ನನ್ನ ಸ್ಥಾನವನ್ನು ಅಲಂಕರಿಸಲಿ,. ನನಗೆ ಹುದ್ದೆ ತೊರೆಯಲು ಇದು ಸಕಾಲ ಎಂದು ವಿಕ್ರಮ್ ಪಂಡಿತ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications