ಜೈಲು ಕೈದಿಗಳಿಗೂ ಸಂಭೋಗ ಅವಕಾಶ ಒದಗಿಸಬೇಕು
'ಜೈಲು ಬಂಧಿಗಳಿಗೆ ದೈಹಿಕ ಸಂಪರ್ಕಕ್ಕೆ ಅವಕಾಶ ಕಲ್ಪಿಸಬೇಕು. 'ಅದಕ್ಕಾಗಿ' ಜೀವನ ಸಂಗಾತಿಗಳನ್ನು ಸಂಧಿಸಲು ಅವರಿಗೆ ಅವಕಾಶ ನೀಡಬೇಕು. ಸೆಕ್ಸ್ ಎಂಬುದು ಮನುಷ್ಯ ನೈಸರ್ಗಿಕ ಅಗತ್ಯ. ಹಾಗಾಗಿ, ಜೈಲುಗಳಲ್ಲಿ ಸಂಭೋಗಕ್ಕೆ ಅವಕಾಶ ನೀಡುವುದು ಮಹಾಪರಾಧವೇನೂ ಅಲ್ಲ' ಎಂದು DGP ಶಶಿಕಾಂತ್ ಸಾಹೇಬರು ಅಪ್ಪಣೆ ಕೊಟ್ಟಿದ್ದಾರೆ.
ಅಧಿಕಾರ ಸಹಜವಾಗಿ ಇಲ್ಲಿನ ಕೇಂದ್ರೀಯ ಜೈಲು ವೀಕ್ಷಣೆಗೆ ತೆರಳಿದ್ದಾಗ ಸಾಹೇಬರು ಈ ಸಲಹೆ ನೀಡಿದ್ದಾರೆ. ಜೈಲುಹಕ್ಕಿಗಳ ಸಂಗಾತಿಗಳಿಗೆ ಕಾಲನುಕಾಲಕ್ಕೆ ಸೌಕರ್ಯ ಒದಗಿಸಬೇಕು ಎಂದು ಹೇಳಿರುವ DGP ಶಶಿಕಾಂತ್ ಸಾಹೇಬರು, ಆ ಮಹತ್ಕಾರ್ಯಕ್ಕೆ ತಮ್ಮ ಕಾಣಿಕೆಯನ್ನೂ ಸಲ್ಲಿಸಿದ್ದಾರೆ. ಏನಪಾ ಅಂದರೆ ಕಪೂರ್ತಲಾ ಜೈಲು ಕೇಂದ್ರದಲ್ಲಿ ವಸತಿ ಗೃಹಗಳನ್ನೂ ನಿರ್ಮಿಸಿಕೊಟ್ಟಿದ್ದಾರೆ. ಅಂದಹಾಗೆ DGP ಶಶಿಕಾಂತ್ ಸಾಹೇಬರು ಇದೇ ಜೂನ್ 30ರಂದು ಸೇವೆಯಿಂದ ನಿವೃತ್ತಿಯಾಗಲಿದ್ದಾರೆ.
ಮಾದಕ ವ್ಯಸನ ಮುಕ್ತ ಕೇಂದ್ರಗಳು, ಕೈದಿಗಳು ಮತ್ತು ಅವರ ಮಕ್ಕಳಿಗೆ ಶೈಕ್ಷಣಿಕ ಕೇಂದ್ರಗಳನ್ನು ರಾಜ್ಯಾದ್ಯಂತ ಇರುವ 30 ಜೈಲುಗಳಲ್ಲಿ ತೆರೆಯಲು ಅವಕಾಶ ಕಲ್ಪಿಸಬೇಕು ಎಂದು ಸೂಚಿಸಿ, DGP ಶಶಿಕಾಂತ್ ಸಾಹೇಬರು ಮುಖ್ಯಮಂತ್ರಿಗೆ ಪತ್ರವನ್ನೂ ಬರೆದಿದ್ದಾರೆ.
'ಉಳ್ಳವರು ಶಿವಾಲಯವ ಕಟ್ಟಿಸುವರಯ್ಯಾ ನಾನೇನು ಮಾಡಲಿ' ಎಂಬಂತೆ ಹಣ ಬಲ, ತೋಲ್ಬಲವಿರುವ ಕೈದಿಗಳು ದೇಶದ ಅನೇಕ ಜೈಲುಗಳಲ್ಲಿ ವಯಾಗ್ರಾ, ಕಾಂಡೋಮ್ ಗಳನ್ನು ಯಥೇಚ್ಚವಾಗಿ ಬಳಸುತ್ತಾರೆ ಎಂಬುದು ಗುಪ್ತ ಸಂಗತಿಯೇನೂ ಅಲ್ಲ.