ಚೆಲ್ವನ ಕಾಮನಬಿಲ್ಲಿಗೆ ಜೋತುಬಿದ್ದ 16 ಯುವತಿಯರು

ಚಕ್ರವರ್ತಿ ಎಂ ತಮಿಳ್ಸೆಲ್ವನ್ ಎಂಬ 27ರ ವಯಸ್ಸಿನ ತಮಿಳುನಾಡಿನ ಚೆಲುವನೇ ಕನಸಿನ ಮದುವೆಯ ಮಂಟಪ ಕಟ್ಟಿದ್ದು. ಆ ಮಂಟಪದಲ್ಲಿ ಮದುವೆಯಾಗಲು ಸಿಂಗರಿಸಿಕೊಂಡು ಬಂದು ಬಂಗಾರದಂತಹ ಬದುಕನ್ನು ಹಾಳು ಮಾಡಿಕೊಂಡ ಯುವತಿಯರೆಲ್ಲ ವಿದ್ಯಾವಂತರು. ಕೆಲವರು ಮಾಹಿತಿ ತಂತ್ರಜ್ಞಾನದಲ್ಲಿದ್ದರೆ, ಕೆಲವರು ಶಿಕ್ಷಣ, ವೈದ್ಯಕೀಯ ಕ್ಷೇತ್ರದಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.
ತಮಿಳ್ಸೆಲ್ವನ್ ಮದುವೆ ಸಂಬಂಧ ಬೆಸೆಯುವ ಅಂತರ್ಜಾಲ ತಾಣದಲ್ಲಿ, ತಾನೊಬ್ಬ ಅತೀ ಶ್ರೀಮಂತನಾಗಿದ್ದು, ತನ್ನ ಪಾಲಕರು ವೈದ್ಯರಾಗಿದ್ದು, ಅನೇಕ ಆಸ್ಪತ್ರೆಗಳನ್ನು ತೆರೆದಿದ್ದಾರೆ. ತಾನು ಕೂಡ ಉತ್ತಮ ಕಂಪನಿಯಲ್ಲಿ ಅತ್ಯುತ್ತಮ ಹುದ್ದೆಯಲ್ಲಿದ್ದುದಾಗಿ ತನ್ನ ಪ್ರೊಫೈಲಿನಲ್ಲಿ ಬರೆದುಕೊಂಡಿದ್ದ. ಕರ್ನಾಟಕ, ತಮಿಳುನಾಡು, ಕೇರಳ, ದುಬೈ ಮುಂತಾದೆಡೆಗಳಲ್ಲಿ ವಾಸವಿರುವ ಯುವತಿಯರು ಈತನ ಪ್ರೊಫೈಲಿಗೆ ಮರುಳಾಗಿದ್ದಾರೆ.
ಆತನನ್ನು ಮದುವೆಯಗಲು ಇಚ್ಛಿಸಿದ ಯುವತಿಯರೊಂದಿಗೆ ಗೆಳೆತನ ಬೆಳೆಸಿದ ಸೆಲ್ವನ್ ಕೆಲವರ ಅಶ್ಲೀಲ ಚಿತ್ರಗಳನ್ನು ತೆಗೆದುಕೊಂಡು ಬ್ಲಾಕ್ ಮೇಲ್ ಮಾಡಲು ಶುರು ಮಾಡಿದ್ದಾನೆ. ಕೆಲವರಿಗೆ ತನ್ನ ಬ್ಯಾಂಕ್ ಖಾತೆಯಲ್ಲಿ ಹಣ ಹಾಕಲು ಪುಸಲಾಯಿಸಿದ್ದರೆ, ಕೆಲ ಯುವತಿಯರಿಂದ ಆಭರಣಗಳನ್ನು ಕಿತ್ತುಕೊಂಡಿದ್ದಾನೆ. ಆತನ ವಂಚನೆ ಬಯಲಾಗುವ ಹೊತ್ತಿಗೆ ಕಾಲ ಮಿಂಚಿಹೋಗಿತ್ತು.
ಆತ ಬೀಸಿರುವ ಜಾಲದ ಅಗಾಧತೆ ಯಾವ ಮಟ್ಟದ್ದಿತ್ತೆಂದರೆ ಒಬ್ಬಿಬ್ಬರಲ್ಲ ಹದಿನಾರು ಯುವತಿಯರು ಆತನಿಗೆ ಮರುಳಾಗಿ ತಮ್ಮ ಬದುಕನ್ನು ಹಾಳುಮಾಡಿಕೊಂಡಿದ್ದಾರೆ. ತಮಿಳ್ಸೆಲ್ವನ್ ಜೊತೆ ಪೆರುಮಾಳ್ ಎಂಬಾತ ಕೂಡ ಸೇರಿಕೊಂಡಿದ್ದು, ಅವರಿಬ್ಬರನ್ನು ಬಂಧಿಸಲು ತಮಿಳುನಾಡು ಪೊಲೀಸರು ಬಲೆ ಬೀಸಿದ್ದಾರೆ.
ಅಂತರ್ಜಾಲದ ವಂಚನೆಯ ಸುಳಿಯಲ್ಲಿ ಯುವತಿಯರು ಸಿಲುಕುವುದು ಹೊಸದೇನಲ್ಲ. ಇಲ್ಲಿ ಅನೇಕ ಮದುವೆಗಳೂ ಆಗಿದ್ದರೆ, ಅನೇಕ ಲಗ್ನಗಳು ಮುರಿದುಬಿದ್ದಿವೆ. ಈ ವಂಚನೆಯ ಬಗ್ಗೆ ಅರಿವಿದ್ದರೂ ವಿದ್ಯಾವಂತೆಯಾಗಿರುವ ಯುವತಿಯರು ವಂಚಿತರಾಗಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications