ಅರ್ಚಕರಿಗೆ ಫ್ರೀ ಬೈಸಿಕಲ್ ಕೊಟ್ಟ ಕೃಷ್ಣಯ್ಯ ಶೆಟ್ಟಿ
ಮುಳಬಾಗಲು,
ಮಾ.29: ಇಲ್ಲಿನ ಜಮ್ಮನಹಳ್ಳಿ ಕ್ರಾಸ್ ಬಳಿ ಹಲವು ದೇವಾಲಯಗಳ ಅರ್ಚಕರನ್ನು ಒಟ್ಟುಗೂಡಿಸಿದ ಮಾಲೂರು ಶಾಸಕ ಎಸ್.ಎನ್. ಕೃಷ್ಣಯ್ಯಶೆಟ್ಟಿ ಅವರು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು. ಮುಖ್ಯವಾಗಿ 421 ಮಂದಿ ಅರ್ಚಕರಿಗೆ ಉಚಿತ ಸೈಕಲ್ ವಿತರಣೆ ಮಾಡಿದರು. id="toptextpromo">ನಂತರ
ಜಮ್ಮನಹಳ್ಳಿ ಕ್ರಾಸ್ ಬಳಿ 4.5 ಎಕರೆ ಜಮೀನಿನ ಪೈಕಿ ಒಂದು ಎಕರೆ ಜಮೀನಿನಲ್ಲಿ ವೇದಪಾಠ ಶಾಲೆ ಮತ್ತು ವಿಶ್ರಾಂತಿ ಧಾಮದ ಗುದ್ದಲಿ ಪೂಜೆ ನೆರವೇರಿಸಿದರು.5 ಕೋಟಿ ವೆಚ್ಚದ ವೇದಪಾಠ ಶಾಲೆ, ವಿಶ್ರಾಂತಿಧಾಮ, ಅಡುಗೆ ಕೋಣೆ, ಸ್ತ್ರೀಯರಿಗೆ ಮತ್ತು ಪುರುಷರಿಗೆ 500 ಶೌಚಾಲಯಗಳನ್ನು ನಿರ್ಮಿಸಲಾಗುವುದು ಎಂದು ಕೃಷ್ಣಯ್ಯ ಶೆಟ್ಟಿ ಹೇಳಿದರು. id='are-slot-1' class='oiad oi-axt oiadv'> id='top-searched-articles'>ತಿರುಪತಿ
ಯಾತ್ರಾರ್ಥಿಗಳ ಗಮನಕ್ಕೆ: ಬೆಂಗಳೂರು, ಮೈಸೂರು, ಉಡುಪಿ, ಮಂಗಳೂರು ಹಾಗೂ ಬೇರೆ ಊರುಗಳಿಗೆ ಮುಳಬಾಗಲು ಮಾರ್ಗವಾಗಿ ತಿರುಪತಿ ತಿರುಮಲ ದೇವಸ್ಥಾನದ ಯಾತ್ರೆಗೆ ಹೋಗಿ ಬರುವ ಯಾತ್ರಾರ್ಥಿಗಳಿಗೆ ಜಮ್ಮನಹಳ್ಳಿ ಕ್ರಾಸ್ ಬಳಿ ವಿಶ್ರಾಂತಿಧಾಮ ಹಾಗೂ 24 ಗಂಟೆಗಳ ದಿನ ನಿತ್ಯ ತಿಂಡಿ ಮತ್ತು ಊಟದ ವ್ಯವಸ್ಥೆ, ಉಚಿತವಾಗಿ ಯಾತ್ರಾರ್ಥಿಗಳಿಗೆ ಒದಗಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಶಾಸಕ ಕೃಷ್ಣಯ್ಯಶೆಟ್ಟಿ ತಿಳಿಸಿದ್ದಾರೆ.











Click it and Unblock the Notifications