ಹೂ ಹಣ್ಣು ಅಂಗಡಿಗಾಗಿ ರವಿ ಬೆಳಗೆರೆ ಸತ್ಯಾಗ್ರಹ

ಬೆಂಗಳೂರಿನಲ್ಲಿ ಕನ್ನಡ ಸಂಸ್ಕೃತಿ ಉಳಿಸಿಕೊಂಡಿರುವ ಗಾಂಧಿಬಜಾರು, ಬಸವನಗುಡಿ, ಮಲ್ಲೇಶ್ವರ, ಜಯನಗರ ಭಾಗಗಳಲ್ಲಿ ಈ ರೀತಿ ಅಮಾನುಷ ಕ್ರಮ ಜರುಗಿರುವುದು ನಮ್ಮ ಸಂಸ್ಕೃತಿಗೆ ಧಕ್ಕೆಯಾಗಿದೆ.
ಬಿಬಿಎಂಪಿ ಆತುರ ಕ್ರಮ ಕೈಗೊಳ್ಳುವ ಮೊದಲು ಮಾನವೀಯತೆ ದೃಷ್ಟಿಯಿಂದ ಒಮ್ಮೆ ನೋಡಬಹುದಿತ್ತು. ಇಲ್ಲಿರುವ ನನ್ನ ಅಕ್ಕ ತಂಗಿಯರು ಅಣ್ಣ ತಮ್ಮಂದಿರ ನೋವಿಗೆ ನಾನು ಸ್ಪಂದಿಸಲೇ ಬೇಕಾಗಿದೆ ಅದಕ್ಕಾಗಿ ಸತ್ಯಾಗ್ರಹ ನಡೆಸುತ್ತಿದ್ದೇನೆ ಎಂದು ರವಿ ಬೆಳೆಗೆರೆ ಅವರು ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಹೇಳಿದರು.
ಹಲವಾರು ವರ್ಷಗಳಿಂದ ವ್ಯಾಪಾರ ದೃಷ್ಟಿಯಿಂದ ಹಾಗೂ ಅದಕ್ಕಿಂತಲೂ ಹೆಚ್ಚಾಗಿ ಭಾವನಾತ್ಮಕವಾಗಿ ಗಾಂಧಿಬಜಾರನ್ನು ಅಪ್ಪಿಕೊಂಡಿರುವ ವ್ಯಾಪಾರಿಗಳ ಕೂಗಿಗೆ ಸ್ಪಂದಿಸದೆ ಬಿಬಿಎಂಪಿ ಅವರು ಅಂಗಡಿ ಮುಂಗಟ್ಟುಗಳನ್ನು ರಾತ್ರೋರಾತ್ರಿ ಧ್ವಂಸಗೊಳಿಸಿದ್ದರು.












Click it and Unblock the Notifications