ಮೈಸೂರು ಆನೆ ಮರೆವ ಮುನ್ನ ವಿಟ್ಲದಲ್ಲಿ ಚಿರತೆ ಪತ್ತೆ

ವಿಟ್ಲ ಸಮೀಪದ ಕುಡ್ತಮುಗೇರು ಎಂಬಲ್ಲಿ ಗುರುವಾರ ಕಾಣಿಸಿಕೊಂಡ ಚಿರತೆಯಿಂದ ಜನರು ಭಯಬೀತರಾದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಅರಣ್ಯ ಸಿಬ್ಬಂಧಿಗಳು ಚಿರತೆಯನ್ನು ಹಿಡಿಯುವಲ್ಲಿ ಯಶಸ್ವಿಯಾದರು.
ಕಾಲಿಗೆ ಗಾಯವಾಗಿ ಕುಂಟುತ್ತಿದ್ದ ಚಿರತೆಗೆ ಚಿಕಿತ್ಸೆ ನೀಡಲಾಗಿದ್ದು ಅದು ಪೂರ್ಣಗುಣಮುಖವಾದ ಮೇಲೆ ಮತ್ತೆ ಕಾಡಿಗೆ ಬಿಡಲಾಗುವುದು ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಅಲ್ಲಿವರೆಗೆ ಚಿರತೆಯನ್ನು ಪಿಲಿಕುಳ ನಿಸರ್ಗಧಾಮದಲ್ಲಿ ಬಿಡಲು ಅರಣ್ಯ ಇಲಾಖೆ ನಿರ್ಧರಿಸಿದೆ.












Click it and Unblock the Notifications