ಬೆಂಗಳೂರಿನಲ್ಲಿ ಅಣ್ಣಾ ಕಾರ್ಯಕ್ರಮಕ್ಕೆ ನೀರಸ ಪ್ರತಿಕ್ರಿಯೆ

ಮೈದಾನದಲ್ಲಿ ಸಭಿಕರಿಗಿಂತಲೂ ಹೆಚ್ಚಾಗಿ ಕಾರ್ಯಕರ್ತರು ಓಡಾಡುತ್ತಿರುವುದು ಹೆಚ್ಚಾಗಿತ್ತು. ಅಲ್ಲಲ್ಲಿ ದಣಿವಾರಿಸಿಕೊಳ್ಳಲು ಮಜ್ಜಿಗೆ, ಪಾನಕಗಳನ್ನು ನೀಡಲಾಗುತ್ತಿತ್ತು. ಭ್ರಷ್ಟಾಚಾರದ ವಿರುದ್ಧ ಸ್ಲೋಗನ್ಗಳನ್ನು ಹೊತ್ತ ಟೀ ಶರ್ಟ್ಗಳ ಮಾರಾಟವೂ ಜೋರಾಗಿತ್ತು.
ಭ್ರಷ್ಟಾಚಾರದ ವಿರುದ್ಧ ಸ್ಲೋಗನ್ಗಳು ಕನ್ನಡಕ್ಕಿಂತ ಹೆಚ್ಚಾಗಿ ಹಿಂದಿಯಲ್ಲಿದ್ದದ್ದು ವಿಶೇಷ. ಒಟ್ಟಿನಲ್ಲಿ ಭಾಷೆ ಯಾವುದಾದರೇನು ಭಾವ ಮುಖ್ಯವಲ್ಲವೆ!? ಭ್ರಷ್ಟಾಚಾರದಲ್ಲಿ ನಂಬರ್ ಒನ್ ಎನ್ನಿಸಿಕೊಂಡಿರುವ ಕರ್ನಾಟಕದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿರುವುದು ನಿಜಕ್ಕೂ ವಿಷಾದನೀಯ. (ದಟ್ಸ್ಕನ್ನಡ ಪ್ರತಿನಿಧಿಯಿಂದ)












Click it and Unblock the Notifications