ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನಸಭೆ ವಿಸರ್ಜನೆಗೆ ಆರೆಸ್ಸೆಸ್ ಗ್ರೀನ್ ಸಿಗ್ನಲ್

By Mrutyunjaya Kalmat
|
Google Oneindia Kannada News

Yeddyurappa
ಬೆಂಗಳೂರು, ಅ. 6 : ಕೇವಲ ಎರಡೂವರೆ ವರ್ಷದ ಬಿಜೆಪಿ ಸರಕಾರದಲ್ಲಿನ ಹಗರಣಗಳು ಮತ್ತು ಭಿನ್ನಮತದಿಂದ ಬೇಸತ್ತಿರುವ ಅರೆಸ್ಸೆಸ್ ಪಕ್ಷ ಶುದ್ಧೀಕರಣ ಕಾರ್ಯಕ್ಕೆ ಕೈ ಹಾಕಿದೆ. ಅನಿವಾರ್ಯವಾದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗುವಂತೆ ಪಕ್ಷಕ್ಕೆ ಸೂಚಿಸುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ಪ್ರತಿಪಕ್ಷಗಳು ಪ್ರತಿದಿನ ಬಿಚ್ಚಿಡುತ್ತಿರುವ ಹಗರಣಗಳು, ಶಾಸಕರ ಅಶಿಸ್ತಿನ ವರ್ತನೆ, ನಾಯಕತ್ವಕ್ಕೆ ಬ್ಲಾಕ್ ಮೇಲ್ ಮಾಡಿ ಬೇಡಿಕೆ ಈಡೇರಿಸಿಕೊಳ್ಳುವ ಶಾಸಕರ ಅಶಿಸ್ತಿನ ಪ್ರವೃತ್ತಿಯಿಂದ ಆರೆಸ್ಸೆಸ್ ಮುಖ್ಯಸ್ಥರು ರೋಸಿಹೋಗಿದ್ದಾರೆ. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅರಳಿದ ಕಮಲ ಸರಕಾರ ಹಳಿ ತಪ್ಪುತ್ತಿರುವುದು ಸ್ಪಷ್ಟವಾಗಿದೆ. ಇದಕ್ಕಾಗಿಯೇ ಶುದ್ಧೀಕರಣ ಕಾರ್ಯಕ್ಕೆ ಮುಂದಾಗಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಶಾಸಕರ ಆಂತರಿಕ ಮೌಲ್ಯಮಾಪನ, ಪಕ್ಷದ ಸಂಘಟನಾ ಬಲವನ್ನು ಅಂದಾಜು ಮಾಡುವ ಕಾರ್ಯಕ್ಕೆ ಕೈಹಾಕಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X