ಉರುಗ್ವೆಗೆ ಮೇಲೆ ಜಯ ಖಂಡಿತ: ಹಾಲೆಂಡ್

ಈಗಾಗಲೇ ಎರಡು ಬಾರಿ ಪ್ರಶಸ್ತಿ ಗೆದ್ದಿದ್ದರೂ, ಸುಮಾರು 40 ವರ್ಷಗಳ ಉರುಗ್ವೆ ಉಪಾಂತ್ಯ ಹಂತ ತಲುಪಿದೆ.ಡಚ್ಚರು 12 ವರ್ಷದ ಬಳಿಕ ಸೆಮೀಸ್ ತಲುಪಿ ಚೊಚ್ಚಲ ಬಾರಿಗೆ ಕಪ್ ಎತ್ತುವ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿದ್ದಾರೆ. ಉರುಗ್ವೆ ಹಾಗೂ ನೆದರ್ಲಾಂಡ್ ಈ ಹಂತ ತಲುಪುವ ನಿರೀಕ್ಷೆ ಯಾರಿಗೂ ಇರಲಿಲ್ಲ. ಆದರೆ, ಉತ್ತಮ ಪ್ರದರ್ಶನದ ಮೂಲಕ ಎರಡೂ ತಂಡಗಳು ಪ್ರೇಕ್ಷಕರ ಮನಗೆದ್ದಿವೆ.
ಉರುಗ್ವೆ ಫಾರ್ವಡ್ ಶಕ್ತಿಯುತ: 1--4-4-2-ರಚನೆಯ ಮಾದರಿಯಲ್ಲಿ ಮೈದಾನಕ್ಕಿಳಿಯುವ ಸಾಧ್ಯತೆಯಿದ್ದು, ಡಿಯಗೋ ಫೋರ್ಲಾನ್ ಮೇಲೆ ಹೆಚ್ಚಿನ ಹೊಣೆ ಬೀಳಲಿದೆ. ಫರ್ನಾಡೆಂಜ್, ಕವನಿ ಸೂಕ್ತ ರೀತಿಯಲ್ಲಿ ಸಾಥ್ ನೀಡಿದರೆ, ಉರುಗ್ವೆಯನ್ನು ತಡೆಗಟ್ಟುವುದು ಅಸಾಧ್ಯ. ಆದರೆ, ಫೋರ್ಲಾನ್ ಮುಂಪಡೆಗೆ ಮಾತ್ರ ಮೀಸಲಾಗಿಸಿ , ಮಿಡ್ ಫೀಲ್ಡರ್ ಗಳಿಗೆ ಹೆಚ್ಚಿನ ಹೊಣೆ ಹೊತ್ತರೆ, ಡಚ್ಚರಿಗೆ ಚಳ್ಳೆಹಣ್ಣು ತಿನ್ನಿಸಬಹುದು.
ಉರುಗ್ವೆ ನ್ಯೂನತೆಗಳು: ಡಿಫೆಂಡರ್ ಫುಸಿಲ್ ಹಾಗೂ ಹ್ಯಾಂಡ್ ಆಫ್ ಗಾಡ್ ಖ್ಯಾತಿಯ ಮುಂಪಡೆ ಆಟಗಾರ ಸವಾರೇಜ್ ಇಬ್ಬರು ಈ ಪಂದ್ಯಕ್ಕೆ ಅಲಭ್ಯರಾಗಿದ್ದು, ಕೆಲ ಆಟಗಾರರು ಗಾಯಾಳುಗಳಾಗಿದ್ದಾರೆ. ಡಚ್ಚರ ಪ್ರಾಬಲ್ಯ ಮುರಿಯಬೇಕಾದರೆ ರಕ್ಷಣಾ ಪಡೆ ಇನ್ನಷ್ಟು ಬಲಗೊಳ್ಳಬೇಕು. ಡಿಯಾಗೋ ಲುಗಾನೊ, ವಿಕ್ಟೋರಿನೊ, ಸ್ಕೊಟಿ ಆದಷ್ಟು ರಕ್ಷಣಾ ವ್ಯೂಹದಲ್ಲೇ ಇದ್ದು ಸಂರಕ್ಷಿಸಿದರೆ ಒಳಿತು.
ದಕ್ಷಿಣ ಆಮೆರಿಕಾ ತಂಡವಾದರೂ ಬ್ರೆಜಿಲ್, ಅರ್ಜೆಂಟೀನಾಗಿಂತ ಭಿನ್ನವಾದ ಗೇಮ್ ಪ್ಲಾನ್ ನೊಂದಿಗೆ ಆಡುವ ಉರುಗ್ವೆ, ಯುರೋಪಿಯನ್ ಶೈಲಿಯ ಆಟವನ್ನು ಬದಿಗೊತ್ತಿ, ಆಕ್ರಮಣಕಾರಿ ಆಟಕ್ಕೆ ಇಳಿದರೆ ಡಚ್ಚರಿಗೆ ದೇವರೇ ಗತಿ!
ಹಾಲೆಂಡ್ ಪ್ರಾಬಲ್ಯ: ರೊಬೆಮ್, ಸ್ನೈಡರ್, ವಾನ್ ಪರ್ಸಿ ಉತ್ತಮ ಲಯದಲ್ಲಿರುವ ಕಾರಣ, 3 ಜನ ಫಾರ್ವಡ್ ಗಳೊಂದಿಗೆ 1-3-4-3 ರಚನೆಯೊಂದಿಗೆ ಕಣಕ್ಕಿಳಿದು ಉರುಗ್ವೆಯನ್ನು ಧ್ವಂಸ ಮಾಡಲು ಹವಣಿಸುತ್ತಿದೆ. ಮಿಡ್ ಫೀಲ್ಡರ್ ಸ್ನೈಡರ್ ಮುಂಪಡೆ ಸೇರಿ ಮುನ್ನಡೆಸಿದರೆ ಅಚ್ಚರಿಯೇನಿಲ್ಲ.
ಡಚ್ಚರ ನ್ಯೂನತೆಗಳು: ಜಾನ್ ಹೈಟಿಂಗ ನೇತೃತ್ವದ ರಕ್ಷಣಾ ಪಡೆ ಇದುವರೆವಿಗೂ ಭಾರಿ ತೊಂದರೆ ಅನುಭವಿಸಿಲ್ಲ. ಉರುಗ್ವೆ ಮುಂಪಡೆಯನ್ನು ಕಟ್ಟಿ ಹಾಕುವುದು ಸುಲಭದ ಮಾತಲ್ಲ. ಪದೇ ಪದೇ ದಾಳಿ ಮಾಡುವಲ್ಲಿ ಹಾಲೆಂಡ್ ವೈಫಲ್ಯವಾಗಿ ಅಟಗಾರರು ತಾಳ್ಮೆ ಕಳೆದುಕೊಳ್ಳುವುದು ಮಾಮೂಲಿ.
ಫಲಿತಾಂಶ: ಸಮಬಲದ ಹೋರಾಟದ ನಿರೀಕ್ಷೆಯಿದ್ದು, ದ್ವಿತೀಯಾರ್ಧದ ಅಂತಿಮ ಅವಧಿಯಲ್ಲಿ ಅಥವಾ ಹೆಚ್ಚುವರಿ ಅವಧಿಯಲ್ಲಿ ತಂಡ ಜಯಗಳಿಸುವ ಸಾಧ್ಯತೆಯಿದ್ದು, ಕಡಿಮೆ ಅಂತರದ ಜಯವನ್ನು ನಿರೀಕ್ಷಿಸಲಾಗಿದೆ. ಬುಕ್ಕಿಗಳಿಗೆ ಈಗ ಅರೆಂಜ್ ಬಣ್ಣ ಮಾತ್ರ ಕಾಣಿಸುತ್ತಿದೆ. 1-0 ಅಂತರದ ಜಯ ಹಾಲೆಂಡ್ ರನ್ನು ಫೈನಲ್ ಗೆ ಕೊಂಡೊಯ್ಯಲಿದೆ ಎನ್ನುತ್ತಾರೆ ಬೆಟ್ಟಿಂಗ್ ದೊರೆಗಳು.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications