ಮೇ15:ಮೈಸೂರು ವಿಮಾನ ನಿಲ್ದಾಣ ಉದ್ಘಾಟನೆ
ಬೆಂಗಳೂರು,
ಮೇ.6:ಮೈಸೂರು ಹಾಗೂ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಿರ್ಮಾಣಗೊಂಡಿರುವ ಹೊಸ ಟರ್ಮಿನಲ್ಗಳನ್ನು ಮೇ.15 ರಂದು ಉದ್ಘಾಟಿಸಲಾಗುವುದು. ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಪ್ರಫುಲ್ ಪಟೇಲ್ ಅವರು ಉದ್ಘಾಟನೆಗೆ ಆಗಮಿಸುವರು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆವರು ಸುದ್ದಿಗಾರರಿಗೆ ತಿಳಿಸಿದರು. id="toptextpromo">ಇದರ
ಜತೆಗೆ ಬೆಳಗಾವಿ ಹಾಗೂ ಬೀದರ್ನಲ್ಲಿಯೂ ವಿಮಾನ ನಿಲ್ದಾಣ ಸ್ಥಾಪಿಸಲು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಒಪ್ಪಿಗೆ ನೀಡಿದೆ ಎಂದರು.ಏಪ್ರಿಲ್ 2009 ರಿಂದ ಮಾರ್ಚ್ 2010 ರವರೆಗೂ ಮೈಸೂರು ವಿಮಾನ ನಿಲ್ದಾಣ, ಸುಮಾರು 150 ಚಾರ್ಟೆಡ್ ವಿಮಾನಗಳ ಹಾರಾಟವನ್ನು ಕಂಡಿದೆ. ಆದರೆ, ಉದ್ಘಾಟನೆಗೆ ಇನ್ನೂ 9ದಿನ ಬಾಕಿ ಇದ್ದರೂ ವಾಣಿಜ್ಯ ವಿಮಾನ ಹಾರಾಟದ ವೇಳಾಪಟ್ಟಿ ಸಿದ್ಧವಾಗಿಲ್ಲ. ಈ ಬಗ್ಗೆ ಭಾರತೀಯ ವಿಮಾನ ನಿಲ್ದಾಣ ನಿಯಂತ್ರಣ ಪ್ರಾಧಿಕಾರ(AAI) ಕ್ಕೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. id='are-slot-1' class='oiad oi-axt oiadv'> id='top-searched-articles'>ಪ್ರವಾಸಿಗರ
ಆಕರ್ಷಣೆಗೆ: ಸುಮಾರು 6.29 ಕೋಟಿ ರು ವೆಚ್ಚದ ನೂತನ ವಿಮಾನ ನಿಲ್ದಾಣದ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದೆ. ಕಳೆದ ದಸರಾ ಹೊತ್ತಿನಲ್ಲೇ ಉದ್ಘಾಟನೆಯಾಗ ಬೇಕಿದ್ದ ವಿಮಾನ ನಿಲ್ದಾಣ ಕಾರಣಾಂತರದಿಂದ ವಿಳಂಬಗೊಂಡಿದೆ. ರಾಜ್ಯದ ಪ್ರಮುಖ ಜಲಾಶಯಗಳ ಬಳಿ ಸುಂದರ ಉದ್ಯಾನ, ಕಾರಂಜಿ ನಿರ್ಮಾಣ ಮಾಡಲಾಗುವುದು, ಆಲಮಟ್ಟಿಯ ಬೃಂದಾವನದ ಮಾದರಿಯಲ್ಲಿ ಜನರನ್ನು ಆಕರ್ಷಿಸುವಂತೆ ನಿರ್ಮಿಸಲಾಗುವುದು ಸಿಎಂ ಯಡಿಯೂರಪ್ಪ ಹೇಳಿದರು.











Click it and Unblock the Notifications