ತೈಲ ಬೆಲೆ ಏರಿಕೆ ವಾಪಸಿಲ್ಲ, ಮನಮೋಹನ್ ಸಿಂಗ್

ಬೆಲೆ ಹೆಚ್ಚಳವು ಕೆಲವು ಜನರನ್ನು ಸಂಕಷ್ಟಕ್ಕೀಡುಮಾಡುತ್ತದೆ. ಆದರೆ ನಾವು ದೀರ್ಘಕಾಲಿಕ ದೃಷ್ಟಿಕೋನ ಹೊಂದಬೇಕಾಗುತ್ತದೆ' ಎಂದು ಸೌದಿ ಅರೇಬಿಯಾ ಪ್ರವಾಸದಿಂದ ವಾಪಸಾಗುವಾಗ ತಮ್ಮ ಜತೆಗಿದ್ದ ಸುದ್ದಿಗಾರರಿಗೆ ಪ್ರಧಾನಿ ಸಿಂಗ್ ತಿಳಿಸಿದರು. ಜನಪ್ರಿಯ ಆರ್ಥಿಕ ಯೋಜಗಳಿಗೆ ದೀರ್ಘ ಕಾಲ ಜೋತುಬಿದ್ದ ಅರ್ಥ ವ್ಯವಸ್ಥೆಗೆ ಹಾನಿಯುಂಟಾಗುತ್ತೆ ಎಂದು ಅವರು ವ್ಯಾಖ್ಯಾನಿಸಿದರು.
ಸಂಸತ್ ಘನತೆಗೆ ಕುಂದು : ಬೆಲೆ ಹೆಚ್ಚಳವನ್ನು ವಿರೋಧಿಸಿ ಬಿಜೆಪಿ ಸೇರಿದಂತೆ ಇತರೆ ಪ್ರತಿಪಕ್ಷಗಳು ಬಜೆಟ್ ಮಂಡನೆ ವೇಳೆ ಸಭಾತ್ಯಾಗ ಮಾಡಿದ್ದು ತಪ್ಪು ಎಂದು ಪ್ರತಿಪಾದಿಸಿದ ಪ್ರಧಾನಿ ಸಿಂಗ್, ಇದರಿಂದ ಜನರ ದೃಷ್ಟಿಯಲ್ಲಿ ಸಂಸತ್ತಿನ ಘನತೆಗೆ ಕುಂದು ತಂದಂತಾಗಿದೆ ಎಂದು ಹೇಳಿದರು. ಸಂಸತ್ತಿನ ಕಾರ್ಯಚಟುವಟಿಕೆಯನ್ನು ಜನ ಗಂಭೀರವಾಗಿ ಪರಿಗಣಿಬೇಕು ಎಂಬುದು ನಿಮ್ಮ ಉದ್ದೇವಾಗಿದೆ ಎಂದಾದರೆ ನೀವು (ಪ್ರತಿಪಕ್ಷ) ಅದಕ್ಕೆ ವಿರುದ್ಧವಾಗಿರುವುದನ್ನೇ ಮಾಡಿದ್ದೀರಿ ಎಂದು ಅವರು ಜರಿದರು.












Click it and Unblock the Notifications