ಉಕ್ಕು ಕಾರ್ಖಾನೆಗಳಿಗಾಗಿ ಗಣಿಗಾರಿಕೆ ಅನುಮತಿ

ರಾಜ್ಯದಲ್ಲಿ ಪ್ರತಿ ವರ್ಷ ಸುಮಾರು 67 ಸಾವಿರ ಕೋಟಿ ರುಪಾಯಿ ಮೌಲ್ಯದ 40 ಸಾವಿರ ಮಿಲಿಯನ್ ಟನ್ ಅದಿರು ತೆಗೆದು, ಅದರಲ್ಲಿ ಶೇ.75 ಭಾಗವನ್ನು ಹೊರರಾಜ್ಯ ಹಾಗೂಗಾ ದೇಶಗಳಿಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ರಾಜ್ಯಕ್ಕೆ ಸುಮಾರು 8 ಸಾವಿರ ಕೋಟಿ ರುಪಾಯಿ ನಷ್ಟವುಂಟಾಗುತ್ತಿದೆ. ಇದನ್ನು ತಪ್ಪಿಸಲು ರಾಜ್ಯದಲ್ಲಿ ಉಕ್ಕು ಕಾರ್ಖಾನೆಗಳನ್ನು ಸ್ಥಾಪಿಸುವ ಕಂಪನಿಗಳಿಗೆ ಅದಿರು ಗಣಿಗಾರಿಕೆ ಅವಕಾಶ ನೀಡಲಾಗುತ್ತಿದೆ.
ರಾಜ್ಯದಲ್ಲಿ ದೊರೆಯುವ ಕಬ್ಬಿಣದ ಅದಿರನ್ನು ಇಲ್ಲೇ ಸಂಸ್ಕರಿಸಿ ಉಕ್ಕು ತಯಾರಿಸಿದರೆ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ 3 ಸಾವಿರ ಕೋಟಿ ಹಾಗೂ ಕೇಂದ್ರಕ್ಕೆ 780 ಕೋಟಿ ರುಪಾಯಿ ಆದಾಯ ಬರುತ್ತದೆ ಎಂದು ಸರಕಾರ ಪ್ರಮಾಣ ಪತ್ರದಲ್ಲಿ ತಿಳಿಸಿದೆ.












Click it and Unblock the Notifications