ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ಯಪಾಲರಿಂದ ಹುದ್ದೆಯ ದುರ್ಬಳಕೆ: ಈಶ್ವರಪ್ಪ
ಪಕ್ಷದ ಅಧ್ಯಕ್ಷನಾಗಿ ನಾನು ರಾಜ್ಯಪಾಲರನ್ನು ಸಕ್ರಿಯ ರಾಜಕಾರಣದಲ್ಲಿ ಭಾಗವಹಿಸಲು ಆಹ್ವಾನಿಸುತ್ತಿದ್ದೇನೆ. ಅವರು ವಿರೋಧ ಪಕ್ಷದ ನಾಯಕರ ಹಾಗೆ ವರ್ತಿಸುತ್ತಿರುವುದು ವಿಷಾದನೀಯ. ಮಾಜಿ ಸಚಿವ ಸೋಮಣ್ಣ ಅವರನ್ನು ಮೇಲ್ಮನೆಗೆ ನಾಮಕರಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತರೂ ತಮ್ಮನ್ನು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ರಾಜ್ಯಪಾಲರ ವರ್ತನೆ ಸರಿಯಲ್ಲ ಎಂದು ಈಶ್ವರಪ್ಪ ಕಿಡಿಕಾರಿದ್ದಾರೆ.
ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಿ ಎಂದು ಕೇಂದ್ರವನ್ನು ಒತ್ತಾಯಿಸುವ ಕಾಲ ಇನ್ನೂ ಬಂದಿಲ್ಲ. ನ್ಯಾ. ಸೋಮಶೇಖರ್ ಆಯೋಗದ ವರದಿ ಬಗ್ಗೆ ಪ್ರಸ್ತಾಪಿಸುತ್ತಾ, ಕೆಲವೊಂದು ಸಂಘಟನೆಗಳನ್ನು ಹೆಸರಿಸಿ ಸರಕಾರವನ್ನು ಮುಜಗರಕ್ಕೀಡುಮಾಡುವ ತಂತ್ರ ಇದು ಎಂದು ಜನತೆ ಬಲ್ಲರು. ಸರಕಾರಕ್ಕೆ ಒಪ್ಪಿಸುವ ಮೊದಲೇ ವರದಿ ಬಹಿರಂಗ ಗೊಂಡ ಬಗ್ಗೆ ವಿರೋಧ ಪಕ್ಷಗಳು ಪ್ರತಿಭಟಿಸಬೇಕಿತ್ತು, ಆದರೆ ಕಾಂಗ್ರೆಸ್ ಮತ್ತು ದಳ ಇದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಎಂದು ಈಶ್ವರಪ್ಪ ಬೇಸರ ವ್ಯಕ್ತ ಪಡಿಸಿದ್ದಾರೆ.
Comments
bjp ಬಿಜೆಪಿ ಕಾಂಗ್ರೆಸ್ ರಾಜ್ಯಪಾಲ ks eshwarappa ಕೆಎಸ್ ಈಶ್ವರಪ್ಪ ಚರ್ಚ್ ದಾಳಿ governor hr bharadwaj ಎಚ್ಆರ್ ಭಾರದ್ವಾಜ್
Story first published: Thursday, February 4, 2010, 17:49 [IST]