ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಪರಿಹಾರ ನಿಧಿಗೆ ಐದು ಕೋಟಿ ದೇಣಿಗೆ

|
Google Oneindia Kannada News

Union Minister of State for Steel Sai Pratap
ಬೆಂಗಳೂರು, ಅ.24: ಕೇಂದ್ರಉಕ್ಕು ಖಾತೆಯ ರಾಜ್ಯ ಸಚಿವ ಸಾಯಿ ಪ್ರತಾಪ್ ಅವರು ಶನಿವಾರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರು.5 ಕೋಟಿಗಳ ಚೆಕನ್ನು ವಿತರಿಸಿದರು. ಇಂದು ಅವರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಅವರ ಸ್ವಗೃಹದಲ್ಲಿ ಭೇಟಿ ಮಾಡಿ ದೇಣಿಗೆ ನೀಡಿದರು.

ಚೆಕ್ ಸ್ವೀಕರಿಸಿದ ಬಳಿಕ ಯಡಿಯೂರಪ್ಪ ಮಾತನಾಡುತ್ತಾ, ರಾಜ್ಯದ ಸಂತ್ರಸ್ತರ ನೆರೆವಿಗೆ ಸಹಾಯ ಮಾಡಿದ್ದಕ್ಕೆ ಕೃತಜ್ಞತೆಗಳನ್ನು ತಿಳಿಸಿದರು. ನೆರೆ ಸಂತ್ರಸ್ತರಿಗೆ ವಸತಿ ಕಲ್ಪಿಸುವ ನಿಟ್ಟಿನಲ್ಲಿ ತಮ್ಮೊಂದಿಗೆ ಕೈಜೋಡಿಸಿದ್ದಕ್ಕೆ ಕೇಂದ್ರ ಸಚಿವರಿಗೆ ಮುಖ್ಯಮಂತ್ರಿಗಳು ಧನ್ಯವಾದಗಳನ್ನು ತಿಳಿಸಿದರು.

ಕೇಂದ್ರ ಖಾತೆಯ ರಾಜ್ಯ ಸಚಿವ ಸಾಯಿ ಪ್ರತಾಪ್ ಅವರು ಭಾರತ ಉಕ್ಕು ಪ್ರಾಧಿಕಾರ (SAIL)ನ ಉನ್ನತಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಚೆಕ್ ಸಮರ್ಪಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X