Get Updates
Get notified of breaking news, exclusive insights, and must-see stories!

ಉಪಚುನಾವಣೆ : ಶೇ. 60 ರಷ್ಟು ಮತದಾನ

55pc turnout in Karntaka bypoll
ಬೆಂಗಳೂರು, ಆ. 18 : ರಾಜ್ಯದ ಐದು ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾನ ಶಾಂತಿಯುತವಾಗಿ ಕೊನೆಗೊಂಡಿದ್ದು, ಶೇ. 60ರಷ್ಟು ಮತದಾನವಾಗಿದೆ. ಚಿತ್ತಾಪುರ ವಿಧಾನಸಭೆ ಕ್ಷೇತ್ರದಲ್ಲಿ ನಕಲಿ ಮತದಾನವಾಗಿರುವ ಬಗ್ಗೆ ಕಾಂಗ್ರೆಸ್ ಪಕ್ಷ ಶಂಕೆ ವ್ಯಕ್ತಪಡಿಸಿದ್ದಾರೆ. ನಕಲಿ ಮತದಾನಕ್ಕೆ ಐದು ಐಷಾರಾಮಿ ಬಸ್ ಗಳಲ್ಲಿ ಬಂದಿದ್ದ ಜನರನ್ನು ಬಂಧಿಸಿರುವ ವಾಡಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮತ್ತೊಮ್ಮೆ ನಗರ ಪ್ರದೇಶದ ಜನರು ಮತದಾನಕ್ಕೆ ಅಸಡ್ಡೆ ತೋರುತ್ತಾರೆ ಎನ್ನುವುದಕ್ಕೆ ಗೋವಿಂದರಾಜ ನಗರ ಸಾಕ್ಷಿಯಾಯಿತು. ಇಲ್ಲಿ ಬರೀ ಶೇ. 45 ರಷ್ಟು ಮತದಾನವಾಗಿದೆ. ಒಟ್ಟಾರೆ ಶೇ 60 ರಷ್ಟು ಮತದಾನವಾಗಿದೆ.

ರಾಮನಗರ ಶೇ. 66, ಚನ್ನಪಟ್ಟಣದಲ್ಲಿ ಶೇ. 70 ರಷ್ಟು, ಕೊಳ್ಳೇಗಾಲದಲ್ಲಿ ಶೇ.62 ರಷ್ಟು, ಚಿತ್ತಾಪುರದಲ್ಲಿ ಶೇ. 60 ರಷ್ಟು ಹಾಗೂ ಗೋವಿಂದರಾಜ ನಗರದಲ್ಲಿ ಶೇ. 45 ರಷ್ಟು ಮತದಾನವಾಗಿದೆ. ಚಿತ್ತಾಪುರ ಹಾಗೂ ಬೆಂಗಳೂರಿನ ಗೋವಿಂದರಾಜ ನಗರದಲ್ಲಿ ಆರಂಭದಲ್ಲಿ ಜನರಿಂದ ನೀರಸ ಪ್ರತಿಕ್ರಿಯೆ ಬಂದಿದ್ದು, ನಂತರ ಬಿರುಸುಗೊಂಡಿತು.

ಚನ್ನಪಟ್ಟಣದಲ್ಲಿ ಕಳ್ಳಿಹೊಸೂರು ಗ್ರಾಮದಲ್ಲಿ ಮತದಾನಕ್ಕೆ ಆಗಮಿಸಿದ್ದ ಮಾಜಿ ಸಚಿವ ಎಂ ವರದೇಗೌಡರ ಸಂಬಂಧಿ ಕೋಮಲಮ್ಮ (80) ಎಂಬುವವರಿಗೆ ತೀವ್ರ ಹೃದಯಘಾತವಾಗಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ವರದಿಯಾಗಿದೆ. ಇದರಿಂದ ಮತದಾನ ಕೆಲ ಕಾಲ ಸ್ಥಗಿತಗೊಂಡಿತ್ತು. ಉಳಿದಂತೆ ಚನ್ನಪಟ್ಟಣದಲ್ಲಿ ಶಾಂತಿಯುತವಾಗಿ ಬಿರುಸಿನಿಂದ ಮತದಾನ ಸಾಗಿತು.

ರಾಮನಗರದಲ್ಲಿ ಆರಂಭದಿಂದಲೇ ಬಿರುಸಿನಿಂದ ಮತದಾನ ಶುರುವಾಯಿತು. ಆದರೆ, ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವ ಸಿದ್ದಯ್ಯದೊಡ್ಡಿ ಗ್ರಾಮದ ಜನರು ಮತದಾನಕ್ಕೆ ಬಹಿಷ್ಕಾರ ಹಾಕಿರುವ ಘಟನೆ ನಡೆದಿದೆ. ಕನಕಪುರ ಕ್ಷೇತ್ರದಿಂದ ರಾಮನಗರ ವಿಧಾನಸಭೆ ಕ್ಷೇತ್ರಕ್ಕೆ ಸೇರಿರುವ ಸಿದ್ದಯ್ಯದೊಡ್ಡಿ ಗ್ರಾಮಕ್ಕೆ ಸರಿಯಾದ ರಸ್ತೆ, ವಿದ್ಯುತ್ ಸಂಪರ್ಕ, ಬಸ್ ವ್ಯವಸ್ಥೆ ಇಲ್ಲ ಎಂಬ ಆರೋಪದ ಮೇರೆಗೆ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದಾರೆ.

ಕೊಳ್ಳೇಗಾಲದ ಮತಗಟ್ಟೆಯೊಂದರಲ್ಲಿ ಮತಯಂತ್ರ ಕೈಕೊಟ್ಟಿದ್ದರಿಂದ ಮತದಾನಕ್ಕೆ ಅಡ್ಡಿ, ತಕ್ಷಣ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ದೋಷ ಸರಿಪಡಿಸಿ ಮತದಾನಕ್ಕೆ ಅನುವು ಮಾಡಿಕೊಟ್ಟರು. ಗೋವಿಂದರಾಜ ನಗರ ಕ್ಷೇತ್ರದಲ್ಲಿ ಮತದಾರರ ಹೆಸರು ಪಟ್ಟಿಯಲ್ಲಿ ಇಲ್ಲದ ಕಾರಣ ಅನೇಕರು ಮತದಾನದಿಂದ ವಂಚಿತರಾಗಬೇಕಾಯಿತು. ಪಟ್ಟೇಗಾರಪಾಳ್ಯದ ಅನೇಕ ಮತದಾರರು ವಾಪಸ್ ತೆರಳಿದರು. ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಕೃಷ್ಣ ಅವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ನಂತರ ಪ್ರತಿಕ್ರಿಯೆ ನೀಡಿದ ಪ್ರಿಯಾಕೃಷ್ಣ, ರಾಜ್ಯ ಆಡಳಿತರೂಢ ಸರಕಾರ ಅಧಿಕಾರಯಂತ್ರವನ್ನು ಸಂಪೂರ್ಣ ದುರುಪಯೋಗಪಡಿಸಿಕೊಂಡಿದೆ. ಪೊಲೀಸರು, ಮತಗಟ್ಟೆ ಅಧಿಕಾರಿಗಳು ಸಹಕರಿಸುತ್ತಿಲ್ಲ. ಪಟ್ಟೆಗಾರಪಾಳ್ಯದಲ್ಲಿ ವಾಸಿಸುವವರು ಅಲ್ಪಸಂಖ್ಯಾತರು, ಆದರೆ, ಅಲ್ಲಿನವರಿಗೆ ಹೆಸರುಗಳು ಮತಪಟ್ಟಿಯಲ್ಲಿ ಇಲ್ಲ. ಪೊಲೀಸರು ಕೂಡಾ ಬಂದಿರುವ ಅನೇಕ ಜನರನ್ನು ವಾಪಸ್ಸು ಕಳುಹಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಮುಂಬೈನಿಂದ ಐಷಾರಾಮಿ ಬಸ್ ಮೂಲಕ ನಕಲಿ ಮತದಾನಕ್ಕೆ ಬಂದಿದ್ದ ನೂರಾರು ಜನರನ್ನು ವಾಡಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇದು ಬಿಜೆಪಿ ಕೃಪಾಪೋಷಿತ ನಕಲಿ ಪಡೆ. ಇಂತಹ ಘಟನೆಗಳು ಕ್ಷೇತ್ರದ ಬೇರೆ ಬೇರೆ ಕಡೆಗಳಲ್ಲಿ ನಡೆದಿರುವ ಸಾಧ್ಯತೆಗಳಿವೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಖರ್ಗೆ ಆರೋಪಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+