ಶ್ರೀಲಂಕಾದಲ್ಲಿ ಪ್ರಭಾಕರನ್ ಮಗನ ಶವ ಪತ್ತೆ
ಕೊಲಂಬೊ, ಮೇ. 18 : ಎಲ್ಟಿಟಿಇ ವರಿಷ್ಠ ವೇಲುಪಿಳ್ಳೈ ಪ್ರಭಾಕರನ್ ಅವರ ಮಗ ಚಾರ್ಲ್ಸ್ ಆಂಥೋನಿ ಶವವನ್ನು ಸೇನಾಪಡೆಗಳು ಪತ್ತೆ ಹಚ್ಚಿರುವುದಾಗಿ ಶ್ರೀಲಂಕಾ ಸರಕಾರದ ಮಿಲಿಟರಿ ವಕ್ತಾರ ಉದಯ್ ನಾನಯಕ್ಕರ ತಿಳಿಸಿದ್ದಾರೆ.
ಮಾಹಿತಿ ಖಚಿತಪಡಿಸಿ ಶ್ರೀಲಂಕಾ ಸೇನೆಯ ವೆಬ್ ಸೈಟ್ ನಲ್ಲೂ ಈ ಬಗ್ಗೆ ಲೇಖನ ಪ್ರಕಟವಾಗಿದೆ. ಪ್ರಭಾಕರನ್ ಗೆ ಮೂರು ಮಕ್ಕಳಿದ್ದು, ಎಲ್ಟಿಟಿಇ ಪರ ಹೋರಾಟ ನಡೆಸುತ್ತಿರುವ ಏಕಮಾತ್ರ ಮಗ ಚಾರ್ಲ್ಸ್ ಆಂಥೋನಿಯೆಂದು ಹೇಳಲಾಗಿದೆ.
ಭಾನುವಾರ ರಾತ್ರಿ ನಡೆದ ದಾಳಿಯಲ್ಲಿ ತಮಿಳು ವ್ಯಾಘ್ರ ಪಡೆಯ ರಾಜಕೀಯ ವಿಭಾಗದ ಮುಖ್ಯಸ್ಥ ಬಾಲಸಿಂಗಂ ನಾದೇಶನ್, ಶಾಂತಿ ಕಾರ್ಯಾಲಯದ ಮುಖ್ಯಸ್ಥ ಪುಲೀದೇವನ್ ಮತ್ತು ಮಿಲಿಟರಿ ನಾಯಕ ರಮೇಶ್ ಕೂಡ ಸೇನೆ ಜೊತೆಗಿನ ಕಾದಾಟದಲ್ಲಿ ಮೃತಪಟ್ಟಿದ್ದಾರೆಂದು ಶ್ರೀಲಂಕಾ ಮಿಲಿಟರಿ ತಿಳಿಸಿದೆ. ಆದರೆ, ಪ್ರಭಾಕರನ್ ಸುಳಿವಿನ ಬಗ್ಗೆ ಯಾವುದೇ ಮಾಹಿತಿಯನ್ನು ಸೇನೆ ಬಹಿರಂಗ ಪಡಿಸಲಿಲ್ಲ. ಇದುವರೆಗೆ ಎಲ್ಟಿಟಿಇ ಈ ಬಗ್ಗೆ ಏನೂ ಪ್ರತಿಕ್ರಿಯೆ ವ್ಯಕ್ತಪಡಿಸಲಿಲ್ಲ. ಪತ್ರಕರ್ತರಿಗೆ ಮತ್ತು ವೀಕ್ಷಕರಿಗೆ ಯುದ್ಧವಲಯದಿ೦ದ ಮಿಲಿಟರಿ ಪ್ರವೇಶ ನಿಷೇಧಿಸಿದೆ.
(ಏಜನ್ಸೀಸ್)
ಸೈನಿಕ ದಾಳಿಯಲ್ಲಿ ಎಲ್ಟಿಟಿಇ ಪ್ರಭಾಕರನ್ ಹತ?