ಕ್ಯಾಲಿಫ್ ನಲ್ಲಿ ಬೆಂಗ್ಳೂರು ಕುಟುಂಬ ಗುಂಡಿಗೆ ಬಲಿ
ಬೆಂಗಳೂರು, ಏ. 1 : ಬೆಂಗಳೂರು ಮೂಲದ ಎಚ್ ಪಿ ಕಂಪನಿಯ ಸಾಫ್ಟ್ ವೇರ್ ಇಂಜಿನಿಯರೊಬ್ಬ ಪತ್ನಿ, ಮಗಳು ಹಾಗೂ ತನ್ನದೇ ಕುಟುಂಬದ ಐದು ಮಂದಿ ಸದಸ್ಯರನ್ನು ದಾರುಣ ಕೊಲೆ ಮಾಡಿ ಕೊನೆಗೆ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅಮೆರಿಕದ ಕ್ಯಾಲಿಪೋರ್ನಿಯಾದಲ್ಲಿ ಮಾರ್ಚ್ 28 ರಂದು ನಡೆದಿದೆ.
ಅಶೋಕನ್ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಪ್ರೋಜೆಕ್ಟ್ ಸಲುವಾಗಿ ಅಮೆರಿಕಕ್ಕಾಕ್ಕೆ ತೆರಳಿದ್ದ ಅಶೋಕನ್ ಪತ್ನಿ ಸುಚಿತ್ರಾ, 11 ವರ್ಷದ ಮಗಳು ಅಹನಾ ಹಾಗೂ ಆತನ ಇಬ್ಬರು ಕುಟುಂಬ ಸಂಬಂಧಿಗಳನ್ನು ಹತ್ಯೆಗೈದು ಕೊನೆಗೆ ತಾನೂ ಸಾವಿಗೆ ಶರಣಾಗಿದ್ದಾನೆ. ಅಳಿಯನ ಕೃತ್ಯಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿರುವ ಅಶೋಕನ್ ಅವರ ಮಾವ ಶಿವರಾಮನ್ (65), ಇದು ನನಗೆ ಹಾಗೂ ನನ್ನ ಪತ್ನಿಗೆ ಭರಿಸಲಾರದ ದುಃಖ ಎಂದು ಕಣ್ಣೀರಿಡುತ್ತಿದ್ದಾರೆ.
ಮಗಳು ಸುಚಿತ್ರಾ ಅಪಾರ ಬುದ್ಧಿವಂತೆ, ಕಳೆದ ಕೆಲ ವರ್ಷಗಳಿಂದ ಪಟ್ನಿ ಕಂಪ್ಯೂಟರ್ಸ್ ನಲ್ಲಿ ಸಾಪ್ಟವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಅಳಿಯ ಅಶೋಕನ್ ಎಚ್ ಪಿ ಕಂಪನಿಯಲ್ಲಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಆದರೆ, ಇತ್ತೀಚೆಗೆ ಕಂಪನಿಯ ಪ್ರೋಜೆಕ್ಚ್ ಸಲುವಾಗಿ ಅಮೆರಿಕದ ಕ್ಯಾಲಿಪೋರ್ನಿಯಾಕ್ಕೆ ತೆರಳಿದ್ದ, ಮೊದಲು ತಾನೊಬ್ಬನೇ ತೆರಳಿದ್ದ ಅಶೋಕನ್, ಪ್ರೋಜೆಕ್ಟ್ ಕೆಲಸ ಇನ್ನೂ ಕೆಲ ವರ್ಯ. ಆಗಲಿದೆ ಎನ್ನುವ ಕಾರಣಕ್ಕೆ ಪತ್ನಿ ಹಾಗೂ ಮಗಳು ಮತ್ತು ತನ್ನ ಕುಟುಂಬದ ಇಬ್ಬರನ್ನು ಕರೆದುಕೊಂಡು ಹೋಗಿದ್ದ. ಆದರೆ, ಅಳಿಯ ಮತ್ತು ಮಗಳು ಅನ್ಯೋನ್ಯವಾಗಿಯೇ ಇದ್ದರು. ಇಷ್ಟಾಗಿಯೂ ಅಳಿಯ ಅಶೋಕನ್ ಈ ಕೃತ್ಯ ಎಸಗಿದ್ದಾನೆ ಎಂದರೆ ನಂಬಲು ಅಸಾಧ್ಯವಾಗಿದೆ ಎಂದು ಶಿವರಾಮನ್ ಸಂಟಕಪಡುತ್ತಿದ್ದಾರೆ.
ಅಮೆರಕದಲ್ಲಿ ಅನೇಕ ವರ್ಷಗಳ ಕಾಲ ಜೀವನ ಸಾಗಿಸಿರುವ ಶಿವರಾಮನ್, ಅಲ್ಲಿನ ಜನರಲ್ ಮೋಟಾರ್ಸ್ ಕಂಪನಿಯಲ್ಲಿ ಕೆಲವ ನಿರ್ವಹಿಸಿದ್ದಾರೆ. ಸದ್ಯ ಬೆಂಗಳೂರಿನ ಬಿಟಿಎಂ ಲೇಔಟ್ ನ ನಿವಾಸಿಯಾಗಿರುವ ಶಿವರಾಮನ್, ಮೂಲತಃ ಕೇರಳದವರು ಎನ್ನಲಾಗಿದೆ. ಇವರ ಪುತ್ರ ಲಂಡನ್ ನಲ್ಲಿ ವೈದ್ಯಕೀಯ ವೃತ್ತಿಯಲ್ಲಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications