ಸಿಎಂ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ದೂರು

ಇಲ್ಲಿನ ಗೋಕುಲ್ ಗಾರ್ಡನ್ ಹೋಟೆಲ್ ನಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಲ್ಹಾದ್ ಜೋಶಿ ಔತಣಕೂಟವೊಂದನ್ನು ಆಯೋಜಿಸಿದ್ದರು. ಚುನಾವಣಾ ಪ್ರಚಾರ ಮುಗಿಸಿ ಮುಖ್ಯಮಂತ್ರಿ ಯಡಿಯೂರಪ್ಪ ರಾತ್ರಿ 9.45ರ ಸುಮಾರಿಗೆ ಹೋಟೆಲ್ ಗೆ ಆಗಮಿಸಿದರು. ಸಿಎಂ ಭಾಷಣ ಮುಗಿದಾಗ ರಾತ್ರಿ 10.25 ಆಗಿತ್ತು ಎಂದು ಹೆಸರು ಹೇಳಲು ಇಚ್ಚಿಸದ ನೀತಿ ಸಂಹಿತೆ ತಪಾಸಣೆ ತಂಡದ ಸದಸ್ಯರೊಬ್ಬರು ತಿಳಿಸಿದ್ದಾರೆ.
ಪಕ್ಷ ಚುನಾವಣೆ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗೆ ಅನ್ಯ ಪಕ್ಷಗಳ ನಾಯಕರು ಬಿಜೆಪಿ ಸೇರ್ಪಡೆಗೊಳ್ಳುತ್ತಿರುವುದನ್ನು ಯಡಿಯೂರಪ್ಪ ಸಮರ್ಥಿಸಿಕೊಂಡರು. ಇದು ಆಪರೇಷನ್ ಕಮಲ ಅಲ್ಲ, ರಾಜಕೀಯ ಧ್ರುವೀಕರಣ ಎಂದು ಹೇಳಿದರು. ಒಂಬತ್ತು ತಿಂಗಳು ಬಿಜೆಪಿ ನಡೆಸಿದ ಸಮರ್ಥ ಆಡಳಿತದಿಂದ ಅನ್ಯ ಪಕ್ಷದ ಮುಖಂಡರು ಬಿಜೆಪಿ ಸೇರುತ್ತಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಚುನಾವಣಾ ಅಕ್ರಮ ತಡೆಗೆ ತಂತ್ರಜ್ಞಾನ ಬಳಕೆ












Click it and Unblock the Notifications