ಸರ್ಕಾರ ರಚನೆಗೆ ಸೋನಿಯಾ ಬೆಂಬಲ ಅಗತ್ಯ, ಎಸ್ಪಿ

ಲಖನೌ, ಮಾ. 15 : ಭಾರತದಲ್ಲಿ ಜಾತ್ಯಾತೀತ ಸರ್ಕಾರ ರಚಿಸಬೇಕೆಂದರೆ ಕಾಂಗ್ರೆಸ್ ಬೆಂಬಲವಿದ್ದರೆ ಮಾತ್ರ ಸಾಧ್ಯ. ಸೋನಿಯಾ ಗಾಂಧಿ ಸಹಕಾರವಿಲ್ಲದೆ ಜಾತ್ಯಾತೀತ ಸರ್ಕಾರ ರಚನೆ ಅಸಾಧ್ಯ ಎಂದು ಸಮಾಜವಾದಿ ಪಕ್ಷದ ಮುಖಂಡ ಅಮರ್ ಸಿಂಗ್ ಅಭಿಪ್ರಾಯಪಟ್ಟರು.

ಲಖನೌದಲ್ಲಿ ಯುವಸಮಾಜವಾದಿ ಪಕ್ಷದ ಕಾರ್ಯಕರ್ತರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತೃತೀಯ ರಂಗದಿಂದ ಸರ್ಕಾರ ರಚನೆ ಬರೀ ಕನಸು ಎಂದು ಟೀಕಿಸಿದರು. ದೇಶದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ಸೇತರ ರಚನೆ ಮಾಡುತ್ತೇವೆ ಎಂದು ಹೊರಟಿರುವ ತೃತೀಯ ರಂಗದ ಎಲ್ಲ ಪಕ್ಷಗಳು ಜನರಿಂದ ತಿರಸ್ಕಾರಗೊಂಡ ಪಕ್ಷಗಳಾಗಿವೆ ಎಂದು ವ್ಯಂಗ್ಯವಾಡಿದರು. ತೃತೀಯ ರಂಗದಲ್ಲಿರುವ ಪಕ್ಷಗಳು ಕೋಮುವಾದಿ ಪಕ್ಷಗಳು ಎಂದ ಅವರು, ಒಂದು ಕಾಲದಲ್ಲಿ ಆ ಪಕ್ಷಗಳು ಬಿಜೆಪಿಗೆ ಬೆಂಬಲ ನೀಡಿದ್ದವು ಎನ್ನುವುದನ್ನು ಮರೆಯಬಾರದು ಎಂದು ಅಮರ್ ಸಿಂಗ್ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+