ಸತ್ಯಂ ಮೇಲಿನ ನಿರ್ಬಂಧ ಸಡಿಲ ಸಾಧ್ಯ: ವಿಶ್ವಬ್ಯಾಂಕ್
ನವದೆಹಲಿ, ಫೆ. 16:ಬಹುಕೋಟಿ ಹಗರಣದಲ್ಲಿ ಸಿಕ್ಕಿರುವ ಸತ್ಯಂ ಕಂಪ್ಯೂಟರ್ ಮೇಲಿನ ಆರ್ಥಿಕ ನಿರ್ಬಂಧವನ್ನು ಸಡಿಲಗೊಳಿಸುವ ಸಾಧ್ಯತೆಯಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ. ನಿಯಮಗಳ ಅನುಸಾರ ಸ್ಪಂದಿಸಿದರೆ ಸತ್ಯಂ ಮೇಲೆ ಹೇರಿರುವ 8 ವರ್ಷಗಳ ಆರ್ಥಿಕ ನಿರ್ಬಂಧವನ್ನು ಸಡಿಲಿಸಲಾಗುವುದು ಎಂದು ವಿಶ್ವಬ್ಯಾಂಕ್ ಹೇಳಿಕೆ ಕೊಟ್ಟಿದೆ.
ಗ್ರಾಹಕರೊಡನೆ ನಿರ್ವಂಚನೆಯಿಂದ ಸ್ಪಷ್ಟವಾದ ವ್ಯವಹಾರ ನಡೆಸುವ ಭರವಸೆ ಹಾಗೂ ಆಧಾರವನ್ನು ಸತ್ಯಂ ಸಂಸ್ಥೆ ನೀಡಿದ್ದೆ ಆದಲ್ಲಿ, ಅದಕ್ಕೆ ಬೇಕಾದ ಆರ್ಥಿಕ ನೆರವು ನೀಡಲು ಸಿದ್ಧರಿದ್ದೇವೆ. ಈ ಬಗ್ಗೆ ಸತ್ಯಂನ ನೂತನ ಆಡಳಿತ ಮಂಡಳಿಯಿಂದ ಗುಣಾತ್ಮಕ ಉತ್ತರ ಹೊರ ಬಂದ ನಂತರ ನಿರ್ಬಂಧವನ್ನು ಹಿಂತೆಗೆದುಕೊಳ್ಳಲಾಗುವುದು ಎಂದು ವಿಶ್ವಬ್ಯಾಂಕ್ ಹೇಳಿದೆ.
ಕಾರ್ನಿಕ್ ಅವರು ಸತ್ಯಂ ಸಂಸ್ಥೆಯ ಚುಕ್ಕಾಣಿ ಹಿಡಿದ ನಂತರ ಸುಮಾರು 15 ಹೊಸ ಯೋಜನೆಗಳು ಸಂಸ್ಥೆಗೆ ಸಿಕ್ಕಿದೆ. ಇದಲ್ಲದೆ ಆರೋಪಿ ಮಾಜಿ ಸಿಇಒ ರಾಮಲಿಂಗರಾಜು ಹಾಗೂ ಅವರ ಪರಿವಾರದವರ ಮೇಲಿನ ತನಿಖೆಯನ್ನು ತ್ವರಿತ ಗತಿಯಲ್ಲಿ ಮಾಡಲಾಗುತ್ತಿದೆ.ಎಎಸ್ ಮೂರ್ತಿ ಅವರನ್ನು ಸತ್ಯಂ ಕಂಪನಿಯ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.
(ಏಜೆನ್ಸೀಸ್)
ಸತ್ಯಂ ಹಗರಣ, ರಣರಂಗವಾದ ಆಂಧ್ರ ವಿಧಾನಸಭೆ
ಸತ್ಯಂಗೆ ವಿಶ್ವಬ್ಯಾಂಕ್ ಎಂಟು ವರ್ಷ ನಿರ್ಬಂಧ












Click it and Unblock the Notifications