ಮಾಜಿ ರಾಷ್ಟ್ರಪತಿ ಆರ್ ವೆಂಕಟ್ ರಾಮನ್ ಇನ್ನಿಲ್ಲ

ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಜನವರಿ 12 ರಂದು ನಗರದ ಆರ್ಮಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಮೂರು ದಿನಗಳಿಂದ ಕೋಮಾವಸ್ಥೆಯಲ್ಲಿದ್ದ ವೆಂಕಟರಾಮನ್ ಅವರ ದೇಹಸ್ಥಿತಿ ಸಂಪೂರ್ಣ ಚಿಂತಾಜನಕವಾಗಿತ್ತು. ತಮಿಳುನಾಡು ಮೂಲದ ವೆಂಕಟರಾಮನ್ ಅವರು ಭಾರತ ಎಂಟನೇ ರಾಷ್ಟ್ರಪತಿಯಾಗಿ ಜುಲೈ 1987 ರಿಂದ 1992ರ ವರೆಗೆ ಅಧಿಕಾರ ನಡೆಸಿದ್ದರು.
ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಅವರ ಕೇಂದ್ರ ಸಚಿವರಾಗಿ ಹಾಗೂ 7ನೇ ಉಪರಾಷ್ಟ್ರಪತಿಯಾಗಿ ಸೇವೆಸಲ್ಲಿಸಿದ್ದರು. ಸಂವಿಧಾನ ರಚನೆ ಮಾಡಿದ ಸದಸ್ಯ ಮಂಡಳಿಯಲ್ಲಿ ವೆಂಕಟರಾಮನ್ ಕೂಡ ಒಬ್ಬರು ಎನ್ನುವುದು ಅವರ ಹೆಗ್ಗಳಿಕೆ ಎನ್ನಬಹುದು. ವೆಂಕಟರಾಮನ್ ತಮಿಳುನಾಡಿನ ತಂಜಾವೂರು ಸಮೀಪದ ಪಟ್ಟುಕೋಟೈ ಎಂಬಲ್ಲಿ ಡಿಸೆಂಬರ್ 1910 ರಲ್ಲಿ ಜನಿಸಿದರು. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಮದ್ರಾಸ್ ವಿಶ್ವವಿದ್ಯಾಲಯದಿಂದ ಪಡೆದುಕೊಂಡಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications