ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುರೇಂದ್ರ ಮೋಹನ್ ನಾಯಕತ್ವದ ಜೆಡಿಎಸ್ ಸಭೆ ಜೂನ್ 28, 29ರಂದು

By Staff
|
Google Oneindia Kannada News

ಬೆಂಗಳೂರು : ಎಚ್.ಡಿ.ದೇವೇಗೌಡರ ಗುಂಪಿನಿಂದ ಸಿಡಿದ ಜೆಡಿಎಸ್‌ನ ಇನ್ನೊಂದು ಬಣ ಸುರೇಂದ್ರ ಮೋಹನ್ ನಾಯಕತ್ವದಲ್ಲಿ ಜೂನ್ 28,29ರಂದು ರಾಷ್ಟ್ರೀಯ ಕಾರ್ಯಕಾರಿ ಸಭೆ ನಡೆಸಲಿದೆ.

ಸಭೆಯಲ್ಲಿ ಪಕ್ಷದ ಅಧ್ಯಕ್ಷೀಯ ಚುನಾವಣೆ, ಯುಪಿಎ ಸರ್ಕಾರದ ಎಸ್‌ಇಜೆಡ್ ಪಾಲಿಸಿ ಕುರಿತಂತೆ ಚರ್ಚಿಸಿ ಅಂತಿಮ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಮಾಜಿ ಸಚಿವ ಮತ್ತು ಪಕ್ಷದ ನಾಯಕ ಪಿ.ಜಿ.ಆರ್.ಸಿಂಧ್ಯಾ ಇಂದು ಸುದ್ದಿಗಾರರಿಗೆ ತಿಳಿಸಿದರು.

ಮನಸ್ಸಿಗೆ ತೋಚಿದಂತೆ ಬೆಳೆ ಬೆಳೆದರೆ ಇನ್ಮುಂದೆ ಕಠಿಣ ಶಿಕ್ಷೆ ?
ಮೈಸೂರು : ಇನ್ನು ಮುಂದೆ ರೈತರು ಮನಸ್ಸಿಗೆ ತೋಚಿದ ಬೆಳೆಯನ್ನು ಬೆಳೆಯುವಂತಿಲ್ಲ. ಸರ್ಕಾರ ಹೇಳಿದ ಬೆಳೆಯನ್ನೇ ಬೆಳೆಯಬೇಕು!

ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಬೆಳೆ ನೀತಿಗೆ ಸಂಬಂಧಿಸಿದ ಕಾನೂನನ್ನು ಸದ್ಯದಲ್ಲಿಯೇ ಜಾರಿಗೆ ತರುವುದಾಗಿ ಹೇಳಿದರು.

ರೈತರ ಆತ್ಮಹತ್ಯೆಗಳಿಗೆ ಅಸಮರ್ಪಕ ಬೆಳೆ ಪದ್ಧತಿಯೂ ಕಾರಣ ಎಂಬುದನ್ನು ಸರ್ಕಾರ ಅರಿತಿದ್ದು,ಹವಾಮಾನಕ್ಕೆ ಅನುಗುಣವಾದ ಬೆಳೆ ನೀತಿಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಅವರು ವಿವರಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X