Tricolor Barfi Recipe: ತ್ರಿವರ್ಣ ಬರ್ಫಿ ತಯಾರಿಸಿ ಮನೆಯವರಿಂದ ಮೆಚ್ಚುಗೆ ಪಡೆಯಿರಿ
ನಾವು ಇಂದು 78 ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದ್ದೇವೆ. ಸಾಮಾನ್ಯವಾಗಿ ಈ ದಿನ ನಾವೆಲ್ಲಾ ಸಿಹಿ ಹಂಚಿ ಸಂಭ್ರಮಿಸುತ್ತೇವೆ. ಸ್ವಾತಂತ್ರ್ಯ ದಿನ ಪ್ರತಿಯೊಬ್ಬ ಭಾರತೀಯನಿಗೂ ಬಹಳ ಮುಖ್ಯವಾದ ದಿನವಾಗಿದೆ. ಈ ದಿನ ನೀವು ನಿಮ್ಮ ಕುಟುಂಬ ಸದಸ್ಯರಿಗೆ ಸಿಹಿತಿಂಡಿಗಳನ್ನು ತಯಾರಿಸಿಕೊಡಲು ಬಯಸಿದ್ದರೆ ತ್ರಿವರ್ಣ ಸಿಹಿಯನ್ನು ತಯಾರಿಸಿ.
ಸಾಮಾನ್ಯವಾಗಿ ಮನೆಯಲ್ಲಿ ವಿಶೇಷ ದಿನಗಳಲ್ಲಿ ಪಾಯಸ, ಕೇಸರಿಬಾತ್ ಮಾಡುವುದು ರೂಢಿ. ಆದರೆ ಅದರ ಬದಲಿಗೆ ಇಂದು ಮನೆಯಲ್ಲಿ ದೇಶಭಕ್ತಿಯನ್ನು ವ್ಯಕ್ತಪಡಿಸಲು ತ್ರಿವರ್ಣ ಬರ್ಫಿ ತಯಾರಿಸಿ. ನೀವು ಇದನ್ನು ಮಾಡಿದಾಗ ಮಕ್ಕಳು ಖುಷಿಯಿಂದ ಅದನ್ನು ಸೇವಿಸುತ್ತಾರೆ. ಜೊತೆಗೆ ಇದರಿಂದ ಮನೆ ಮಂದಿಯೆಲ್ಲರನ್ನು ನೀವು ಖುಷಿ ಪಡಿಸಬಹುದು.

ಹಾಗಾದರೆ ತ್ರಿವರ್ಣ ಬರ್ಪಿಯನ್ನು ಹೇಗೆ ತಯಾರಿಸಬೇಕೆಂದು ತಿಳಿಯೋಣ. ನೀವು ಇದನ್ನು ಮನೆಯಲ್ಲಿ ಒಂದು ಬಾರಿ ಟ್ರೈ ಮಾಡಿ. ಇದರ ಅನುಭವವನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. ಹಾಗಾದರೆ ತಡ ಮಾಡುವುದು ಬೇಡ ತ್ರಿವರ್ಣ ಬರ್ಫಿ ತಯಾರಿಸುವುದು ಹೇಗೆ ಎಂದು ತಿಳಿಯೋಣ.
ಅಗತ್ಯವಿರುವ ಸಾಮಗ್ರಿಗಳು:
* ತುಪ್ಪ - 1/2 ಕಪ್
* ಮೈದಾ - 1 ಕಪ್
* ಸಕ್ಕರೆ - 2 ಕಪ್
* ನೀರು - 1 ಕಪ್
* ಏಲಕ್ಕಿ ಪುಡಿ - 1/4 ಟೀಸ್ಪೂನ್
* ಹಸಿರು ಆಹಾರ ಬಣ್ಣ - 1/4 ಟೀಸ್ಪೂನ್
* ಕೇಸರಿ ಆಹಾರ ಬಣ್ಣ - 1/4 ಟೀಸ್ಪೂನ್
ಪಾಕವಿಧಾನ:
* ಮೊದಲು ಬಾಣಲೆಯನ್ನು ಒಲೆಯ ಮೇಲೆ ಇಟ್ಟು 1/2 ಕಪ್ ತುಪ್ಪ ಹಾಕಿ ಬಿಸಿ ಮಾಡಿ.
* ನಂತರ 1 ಕಪ್ ಮೈದಾ ಹಿಟ್ಟನ್ನು ಹಾಕಿ 2 ನಿಮಿಷ ಉಂಡೆಗಳಿಲ್ಲದೆ ಚೆನ್ನಾಗಿ ಕದಡಿ.
* ನಂತರ ಇನ್ನೊಂದು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಅದಕ್ಕೆ 2 ಕಪ್ ಸಕ್ಕರೆ ಮತ್ತು 1 ಕಪ್ ನೀರು ಹಾಕಿ ಬೆರೆಸಿ.
* ಸಕ್ಕರೆ ಚೆನ್ನಾಗಿ ಕರಗಿ ಗಟ್ಟಿಯಾಗಲು ಬಂದಾಗ ಮೈದಾ ಮಿಶ್ರಣವನ್ನು ಹಾಕಿ ಉಂಡೆಗಳಿಲ್ಲದೆ ಚೆನ್ನಾಗಿ ಕದಡಿ.
* ನಂತರ ಏಲಕ್ಕಿ ಪುಡಿಯನ್ನು ಹಾಕಿ ಬೆರೆಸಿ, ಸ್ಟವ್ ಆಫ್ ಮಾಡಿ.
* ನಂತರ ಈ ಮಿಶ್ರಣವನ್ನು ಮೂರು ಭಾಗಗಳಾಗಿ ವಿಂಗಡಿಸಬೇಕು.
* ನಂತರ ಒಂದು ಭಾಗಕ್ಕೆ ಹಸಿರು ಆಹಾರ ಬಣ್ಣವನ್ನು ಸೇರಿಸಿ ಚೆನ್ನಾಗಿ ಬೆರೆಸಿ.
* ಇನ್ನೊಂದರಲ್ಲಿ ಕೇಸರಿ ಫುಡ್ ಕಲರ್ ಹಾಕಿ ಚೆನ್ನಾಗಿ ಕಲಕಿ.
* ನಂತರ ಬಟರ್ ಪೇಪರ್ ಅನ್ನು ಟ್ರೇ ಮೇಲೆ ಹರಡಿ. ಅದರ ಮೇಲೆ ಮೊದಲು ಹಸಿರು ಮಿಶ್ರಣವನ್ನು ಹರಡಿ.

* ನಂತರ ಬಿಳಿ ವಿಶ್ರಣವನ್ನು ಹಾಕಿ ಹರಡಿ.
* ನಂತರ ಕೇಸರಿ ಬಣ್ಣದ ಮಿಶ್ರಣವನ್ನು ಹಾಕಿ ಸಮವಾಗಿ ಹರಡಿ.
* ಕೊನೆಗೆ ಟ್ರೇಯನ್ನು ತಲೆಕೆಳಗಾಗಿ ತಿರುಗಿಸಿ ಬಟರ್ ಪೇಪರ್ ತೆಗೆದು ಆಯತಾಕಾರದ ತುಂಡುಗಳಾಗಿ ಕತ್ತರಿಸಿದರೆ ರುಚಿಕರವಾದ ತ್ರಿವರ್ಣ ಬರ್ಫಿ ರೆಡಿ.
-
Harish Rana: ಭಾರತದ ಮೊದಲ ದಯಾಮರಣದ ಹಕ್ಕುದಾರ ಹರೀಶ್ ರಾಣಾ ನಿಧನ, ಕುಟುಂಬಸ್ಥರಿಂದ ಅಂಗಾಂಗ ದಾನ -
ಶಾಲಾ ಮಕ್ಕಳ ಮೊಬೈಲ್ ಬಳಕೆ ನಿರ್ಬಂಧ: 'ಡಿಜಿಟಲ್ ಕರಡು ನೀತಿ' ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ -
Vastu Tips for Kitchen: ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಇವು ಇರಬಾರದು.. ಒಮ್ಮೆ ನೋಡಿ! -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ











Click it and Unblock the Notifications