Peepal Tree: ಮನೆಯ ಗೋಡೆಗೆ ಆಲದ ಮರ ಬೆಳೆದಿದಿಯಾ? ಮೊದಲು ಈ ಕೆಲಸ ಮಾಡಿ....
ನಮಗೆ ಗೊತ್ತಿದ್ದೋ ಗೊತ್ತಿಲದೆಯೋ ಮನೆಯ ಗೋಡೆಯಲ್ಲಿ ಪುಟ್ಟದೊಂದು ಆಲದ ಮರ ಬೆಳೆದಿರುತ್ತದೆ. ಇದು ಶುಭವೋ? ಅಶುಭವೋ ಎನ್ನುವ ಬಗ್ಗೆ ಹಲವಾರು ಜನರಿಗೆ ತಿಳಿದಿಲ್ಲ. ಹೀಗೆ ಬೆಳೆಯುವ ಮರಗಳು ಮತ್ತು ಸಸ್ಯಗಳಿಗೆ ಸಂಬಂಧಿಸಿದ ಈ 5 ನಿಯಮಗಳನ್ನು ನೀವು ತಿಳಿದಿದ್ದರೆ ಹಣದ ಕೊರತೆ ಇರುವುದಿಲ್ಲ.
ಮನೆಯಲ್ಲಿ ಮರಗಳು ಮತ್ತು ಗಿಡಗಳನ್ನು ನೆಡುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಮರಗಳು ಮತ್ತು ಗಿಡಗಳನ್ನು ನೆಡುವುದರಿಂದ ಜೀವನದಲ್ಲಿ ಸಕಾರಾತ್ಮಕತೆ ಹೆಚ್ಚಾಗುತ್ತದೆ. ಮನೆಯಲ್ಲಿ ನೆಟ್ಟರೆ ರೋಗಗಳಿಂದ ಮುಕ್ತಿ ನೀಡುವುದಲ್ಲದೆ ಆರ್ಥಿಕ ಸ್ಥಿತಿಯನ್ನು ಸದೃಢಗೊಳಿಸುವ ಕೆಲವು ಗಿಡಗಳಿವೆ.

ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕೆಲವು ಗಿಡಗಳನ್ನು ನೆಡುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಮನೆಯಲ್ಲಿ ನೆಟ್ಟಾಗ ನಕಾರಾತ್ಮಕತೆಯನ್ನು ಉಂಟುಮಾಡುವ ಕೆಲವು ಸಸ್ಯಗಳಿವೆ. ಹಾಗಾದರೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಯಾವ ಯಾವ ಗಿಡಗಳನ್ನು ನೆಡಬೇಕು ಮತ್ತು ಯಾವ ಗಿಡಗಳನ್ನು ನೆಡಬಾರದು ಮತ್ತು ಮನೆಯಲ್ಲಿ ಗಿಡಗಳನ್ನು ನೆಡುವುದಕ್ಕೆ ಸಂಬಂಧಿಸಿದ ಕೆಲ ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳೋಣ.
*ಮನೆಯೊಳಗೆ ಮರಗಳನ್ನು ನೆಡುವುದರ ಅರ್ಥ
ಮನೆಯ ಅಂಗಳ ಅಥವಾ ಮನೆಯ ಜಗುಲಿಯಲ್ಲಿ ಗಿಡ ಮತ್ತಿ ಮರಗಳನ್ನು ಬೆಳೆಸಲಾಗುತ್ತದೆ. ಮಂಗಳಕರವೆಂದು ಪರಿಗಣಿಸುವ ಮರಗಳು ಮನೆಯ ಹೊರಗೆ ಸರಿಯಾದ ದಿಕ್ಕಿನಲ್ಲಿದ್ದರೆ ಅವು ಶುಭ. ಅಕ್ಕಪಕ್ಕದ ಮನೆಯಲ್ಲಿ ಶುಭ ಮರಗಳು ಸರಿಯಾದ ದಿಕ್ಕಿನಲ್ಲಿದ್ದರೂ ಅವು ಶುಭ ಫಲವನ್ನು ನೀಡುತ್ತವೆ. ಆದರೆ ಅವು ಅಶುಭ ದಿಕ್ಕಿನಲ್ಲಿದ್ದರೆ ಶನಿ ಬೆನ್ನೇರುತ್ತದೆ.
ಆಲದ ಮರದ ಮಹತ್ವ
ಹಿಂದೂ ಧರ್ಮದ ಅನುಸಾರ ಅತ್ಯಂತ ಅತ್ಯಂತ ಪೂಜ್ಯನೀಯ ಹಾಗೂ ಶ್ರೇಷ್ಠ ಮರಗಳಲ್ಲಿ ಆಲದ ಮರವೂ ಒಂದು. ಶತಮಾನಗಳ ಕಾಲ ಬದುಕುವ ಶಕ್ತಿ ಹಾಗೂ ಬೆಳೆಯುವ ಸಾಮರ್ಥ್ಯ ಹೊಂದಿರುವ ಮರಗಳು ಇವೆಂದು ಗುರುತಿಸಲಾಗಿದೆ. ಈ ಮರವನ್ನು ದೇವರು ತನ್ನ ಭಖ್ತರ ಆಶ್ರಯಕ್ಕಾಗಿ ಕರುಣಿಸಿದ್ದಾನೆ ಎಂದು ಸಹ ಹೇಳಲಾಗುವುದು.
ಸಕಲ ದೇವರುಗಳ ಸಂಪರ್ಕವನ್ನು ಹೊಂದಿರುವ ಮರಗಳಲ್ಲಿ ಇದೂ ಒಂದು ಎನ್ನುವ ಪ್ರತೀತಿಯೂ ಇದೆ. ಈ ಮರವು ವಿಶಾಲತೆಯಿಂದ ಕೂಡಿದ್ದು, ಮನುಷ್ಯನಿಗೆ ಅಗತ್ಯವಾದ ಶುದ್ಧ ಗಾಳಿ ಹಾಗೂ ಆಮ್ಲಜನಕವನ್ನು ಹೇರಳವಾಗಿ ನೀಡುತ್ತದೆ. ಈ ಮರದ ಕೆಳಗೆ ಹೆಚ್ಚು ಸಮಯ ಕಳೆಯುವುದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳು ಸಹ ನಿವಾರಣೆ ಆಗುತ್ತವೆ ಎನ್ನುವ ಕಥೆ ಪುರಾಣಗಳು ಇವೆ.

*ಮನೆಯಲ್ಲಿ ಬೆಳೆಸುವ ಪ್ರತಿಯೊಂದು ಆಲದ ಮರ ಶುಭವೋ? ಅಶುಭವೋ?
ಆಲದ ಮರ 1000ಕ್ಕಿಂತ ಕಡಿಮೆ ಎಲೆಗಳನ್ನು ಹೊಂದಿದ್ದರೆ ಅದು ಸಸ್ಯದ ವರ್ಗಕ್ಕೆ ಬರುತ್ತದೆ. ಈ ಆಲದ ಸಸ್ಯ ಸರಿಯಾದ ಸ್ಥಳದಲ್ಲಿ ಇಲ್ಲದಿದ್ದರೆ ಅದನ್ನು ತೆಗೆದು ಬೇರೆ ಸ್ಥಳದಲ್ಲಿ ನೆಡಬೇಕು. ಆದರೆ ಈ ಆಲದ ಮರದಲ್ಲಿ 1000 ಕ್ಕಿಂತ ಹೆಚ್ಚು ಎಲೆಗಳು ಇರಬಾರದು. ವಒಂದು ವೇಳೆ 1000 ಕ್ಕಿಂತ ಕಡಿಮೆ ಎಲೆಗಳು ಇದ್ದರೆ ಅದನ್ನು ತೆಗೆಯಬಾರದು. ಇದನ್ನು ನೆನಪಿನಲ್ಲಿಡಿ.
* ಆಲದ ಮರ ಯಾವ ದಿಕ್ಕಿಗೆ ಇರಬಾರದು?
ಪೂರ್ವದಲ್ಲಿ ನೆಟ್ಟಿರುವ ಆದ ಮರವು ನಿವಾಸಿಗಳ ಮನಸ್ಸಿನಲ್ಲಿ ದೆವ್ವ ಮತ್ತು ಆತ್ಮಗಳ ಭಯವನ್ನು ಉಂಟುಮಾಡುತ್ತದೆ. ಆ ಮರ ಬೆಳೆದಂತೆ ನೋಡಿಕೊಳ್ಳುವುದು ಮುಖ್ಯ, ಸಾಧ್ಯವಾದರೆ ಅದನ್ನು ತೆಗೆದು ಬೇಕೆ ದಿಕ್ಕಿನಲ್ಲಿ ನೆಡುವುದು ಉತ್ತಮ. ಹಾಗೆ ಮಾಡದೇ ಇದ್ದಲ್ಲಿ ಅದು ಮನೆಯಲ್ಲಿ ಆರ್ಥಿಕ ನಿರ್ಬಂಧಗಳನ್ನು ಉಂಟುಮಾಡುತ್ತದೆ.

* ಸ್ನೇಕ್ ಪ್ಲ್ಯಾಂಡ್
ಮುಳ್ಳು ಮತ್ತು ಹಾಲಿನ ಮರಗಳನ್ನು ತೆಗೆಯಲಾಗದಿದ್ದರೆ ಅವುಗಳ ಬಳಿ ಶುಭ ಮರಗಳನ್ನು ನೆಡಬೇಕು. ಮನೆಯ ಸುತ್ತ ಮುಳ್ಳಿನ ಮರಗಳಿದ್ದರೆ ಅಕ್ಕಪಕ್ಕದಲ್ಲಿ ವಾಸಿಸುವ ಜನರೊಂದಿಗೆ ಭಿನ್ನಾಭಿಪ್ರಾಯದ ಭೀತಿ ಎದುರಾಗುತ್ತದೆ. ಅವುಗಳನ್ನು ತೆಗೆದುಹಾಕಿದರೆ ಕೆಲವರು ಯಾವುದೇ ಕಾರಣವಿಲ್ಲದೆ ಮಾತನಾಡುವುದನ್ನು ಮತ್ತು ನಡೆಯುವುದನ್ನು ನಿಲ್ಲಿಸುತ್ತಾರೆ.
*ತುಳಸಿ ಗಿಡವನ್ನು ಯಾವ ದಿಕ್ಕಿನಲ್ಲಿ ನೆಡಬೇಕು?
ಮನೆಯೊಳಗೆ ನೆಟ್ಟ ತುಳಸಿ ಮಾನವರಿಗೆ ಪ್ರಯೋಜನಕಾರಿಯಾಗಿದೆ. ಸಂಪತ್ತು ಮತ್ತು ಮಕ್ಕಳಾಗದ ವಿವಾಹಿತರಿಗೆ ಪುತ್ರ ಭಾಗ್ಯವನ್ನು ನೀಡುತ್ತದೆ ಎಂದು ನಂಬಲಾಗುತ್ತದೆ. ಇದನ್ನು ನಿತ್ಯ ಪೂಜಿಸುವುದರಿಂದ ಪುಣ್ಯ ಮತ್ತು ದೇವರ ಆಶೀರ್ವಾದ ಸಿಗಲಿದೆ ಎಂಬ ನಂಬಿಕೆ ಇದೆ.
ಬೆಳಗ್ಗೆ ಎದ್ದ ನಂತರ ತುಳಸಿಯನ್ನು ನೋಡುವುದರಿಂದ ಬಂಗಾರ ದಾನ ಮಾಡಿದ ಫಲ ಸಿಗುತ್ತದೆ. ಜೊತೆಗೆ ಮನೆಯ ದಕ್ಷಿಣಕ್ಕೆ ತುಳಸಿ ಮರವನ್ನು ನೆಡಬಾರದು ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಇಲ್ಲದಿದ್ದರೆ ಇದು ನಿಮ್ಮ ದೈಹಿಕ ಸಮಸ್ಯೆಗಳಾದ ಮೊಣಕಾಲು ನೋವು, ಬೆನ್ನು ನೋವು, ಬೆನ್ನು ನೋವು ಇತ್ಯಾದಿಗಳು ಹೆಚ್ಚಾಗಬಹುದು.
*ಮನೆಯಲ್ಲಿ ಯಾವ ಗಿಡಗಳನ್ನು ಇಡಬಾರದು
ಹಾಲಿನ ಮರಗಳು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡುತ್ತವೆ ಮತ್ತು ಹಣ್ಣಿನ ಮರಗಳು ಮಕ್ಕಳಿಗೆ ಕೆಲವು ಸಮಸ್ಯೆಗಳನ್ನು ಉಂಟುಮಾಡುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ, ಈ ಮರಗಳನ್ನು ಮನೆಯಲ್ಲಿ ಬಳಸಬಾರದು. ಮನೆಯ ಸುತ್ತ ಮುಳ್ಳು, ಒಡೆದ ಹಾಲು ಮತ್ತು ಹಣ್ಣಿನ ಮರಗಳು ಮಹಿಳೆ ಮತ್ತು ಅವರ ಮಕ್ಕಳಿಗೂ ತೊಂದರೆ ಉಂಟುಮಾಡುತ್ತವೆ ಎಂದು ನಂಬಲಾಗುತ್ತದೆ.
-
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ












Click it and Unblock the Notifications