Peepal Tree: ಮನೆಯ ಗೋಡೆಗೆ ಆಲದ ಮರ ಬೆಳೆದಿದಿಯಾ? ಮೊದಲು ಈ ಕೆಲಸ ಮಾಡಿ....
ನಮಗೆ ಗೊತ್ತಿದ್ದೋ ಗೊತ್ತಿಲದೆಯೋ ಮನೆಯ ಗೋಡೆಯಲ್ಲಿ ಪುಟ್ಟದೊಂದು ಆಲದ ಮರ ಬೆಳೆದಿರುತ್ತದೆ. ಇದು ಶುಭವೋ? ಅಶುಭವೋ ಎನ್ನುವ ಬಗ್ಗೆ ಹಲವಾರು ಜನರಿಗೆ ತಿಳಿದಿಲ್ಲ. ಹೀಗೆ ಬೆಳೆಯುವ ಮರಗಳು ಮತ್ತು ಸಸ್ಯಗಳಿಗೆ ಸಂಬಂಧಿಸಿದ ಈ 5 ನಿಯಮಗಳನ್ನು ನೀವು ತಿಳಿದಿದ್ದರೆ ಹಣದ ಕೊರತೆ ಇರುವುದಿಲ್ಲ.
ಮನೆಯಲ್ಲಿ ಮರಗಳು ಮತ್ತು ಗಿಡಗಳನ್ನು ನೆಡುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಮರಗಳು ಮತ್ತು ಗಿಡಗಳನ್ನು ನೆಡುವುದರಿಂದ ಜೀವನದಲ್ಲಿ ಸಕಾರಾತ್ಮಕತೆ ಹೆಚ್ಚಾಗುತ್ತದೆ. ಮನೆಯಲ್ಲಿ ನೆಟ್ಟರೆ ರೋಗಗಳಿಂದ ಮುಕ್ತಿ ನೀಡುವುದಲ್ಲದೆ ಆರ್ಥಿಕ ಸ್ಥಿತಿಯನ್ನು ಸದೃಢಗೊಳಿಸುವ ಕೆಲವು ಗಿಡಗಳಿವೆ.

ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕೆಲವು ಗಿಡಗಳನ್ನು ನೆಡುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಮನೆಯಲ್ಲಿ ನೆಟ್ಟಾಗ ನಕಾರಾತ್ಮಕತೆಯನ್ನು ಉಂಟುಮಾಡುವ ಕೆಲವು ಸಸ್ಯಗಳಿವೆ. ಹಾಗಾದರೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಯಾವ ಯಾವ ಗಿಡಗಳನ್ನು ನೆಡಬೇಕು ಮತ್ತು ಯಾವ ಗಿಡಗಳನ್ನು ನೆಡಬಾರದು ಮತ್ತು ಮನೆಯಲ್ಲಿ ಗಿಡಗಳನ್ನು ನೆಡುವುದಕ್ಕೆ ಸಂಬಂಧಿಸಿದ ಕೆಲ ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳೋಣ.
*ಮನೆಯೊಳಗೆ ಮರಗಳನ್ನು ನೆಡುವುದರ ಅರ್ಥ
ಮನೆಯ ಅಂಗಳ ಅಥವಾ ಮನೆಯ ಜಗುಲಿಯಲ್ಲಿ ಗಿಡ ಮತ್ತಿ ಮರಗಳನ್ನು ಬೆಳೆಸಲಾಗುತ್ತದೆ. ಮಂಗಳಕರವೆಂದು ಪರಿಗಣಿಸುವ ಮರಗಳು ಮನೆಯ ಹೊರಗೆ ಸರಿಯಾದ ದಿಕ್ಕಿನಲ್ಲಿದ್ದರೆ ಅವು ಶುಭ. ಅಕ್ಕಪಕ್ಕದ ಮನೆಯಲ್ಲಿ ಶುಭ ಮರಗಳು ಸರಿಯಾದ ದಿಕ್ಕಿನಲ್ಲಿದ್ದರೂ ಅವು ಶುಭ ಫಲವನ್ನು ನೀಡುತ್ತವೆ. ಆದರೆ ಅವು ಅಶುಭ ದಿಕ್ಕಿನಲ್ಲಿದ್ದರೆ ಶನಿ ಬೆನ್ನೇರುತ್ತದೆ.
ಆಲದ ಮರದ ಮಹತ್ವ
ಹಿಂದೂ ಧರ್ಮದ ಅನುಸಾರ ಅತ್ಯಂತ ಅತ್ಯಂತ ಪೂಜ್ಯನೀಯ ಹಾಗೂ ಶ್ರೇಷ್ಠ ಮರಗಳಲ್ಲಿ ಆಲದ ಮರವೂ ಒಂದು. ಶತಮಾನಗಳ ಕಾಲ ಬದುಕುವ ಶಕ್ತಿ ಹಾಗೂ ಬೆಳೆಯುವ ಸಾಮರ್ಥ್ಯ ಹೊಂದಿರುವ ಮರಗಳು ಇವೆಂದು ಗುರುತಿಸಲಾಗಿದೆ. ಈ ಮರವನ್ನು ದೇವರು ತನ್ನ ಭಖ್ತರ ಆಶ್ರಯಕ್ಕಾಗಿ ಕರುಣಿಸಿದ್ದಾನೆ ಎಂದು ಸಹ ಹೇಳಲಾಗುವುದು.
ಸಕಲ ದೇವರುಗಳ ಸಂಪರ್ಕವನ್ನು ಹೊಂದಿರುವ ಮರಗಳಲ್ಲಿ ಇದೂ ಒಂದು ಎನ್ನುವ ಪ್ರತೀತಿಯೂ ಇದೆ. ಈ ಮರವು ವಿಶಾಲತೆಯಿಂದ ಕೂಡಿದ್ದು, ಮನುಷ್ಯನಿಗೆ ಅಗತ್ಯವಾದ ಶುದ್ಧ ಗಾಳಿ ಹಾಗೂ ಆಮ್ಲಜನಕವನ್ನು ಹೇರಳವಾಗಿ ನೀಡುತ್ತದೆ. ಈ ಮರದ ಕೆಳಗೆ ಹೆಚ್ಚು ಸಮಯ ಕಳೆಯುವುದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳು ಸಹ ನಿವಾರಣೆ ಆಗುತ್ತವೆ ಎನ್ನುವ ಕಥೆ ಪುರಾಣಗಳು ಇವೆ.

*ಮನೆಯಲ್ಲಿ ಬೆಳೆಸುವ ಪ್ರತಿಯೊಂದು ಆಲದ ಮರ ಶುಭವೋ? ಅಶುಭವೋ?
ಆಲದ ಮರ 1000ಕ್ಕಿಂತ ಕಡಿಮೆ ಎಲೆಗಳನ್ನು ಹೊಂದಿದ್ದರೆ ಅದು ಸಸ್ಯದ ವರ್ಗಕ್ಕೆ ಬರುತ್ತದೆ. ಈ ಆಲದ ಸಸ್ಯ ಸರಿಯಾದ ಸ್ಥಳದಲ್ಲಿ ಇಲ್ಲದಿದ್ದರೆ ಅದನ್ನು ತೆಗೆದು ಬೇರೆ ಸ್ಥಳದಲ್ಲಿ ನೆಡಬೇಕು. ಆದರೆ ಈ ಆಲದ ಮರದಲ್ಲಿ 1000 ಕ್ಕಿಂತ ಹೆಚ್ಚು ಎಲೆಗಳು ಇರಬಾರದು. ವಒಂದು ವೇಳೆ 1000 ಕ್ಕಿಂತ ಕಡಿಮೆ ಎಲೆಗಳು ಇದ್ದರೆ ಅದನ್ನು ತೆಗೆಯಬಾರದು. ಇದನ್ನು ನೆನಪಿನಲ್ಲಿಡಿ.
* ಆಲದ ಮರ ಯಾವ ದಿಕ್ಕಿಗೆ ಇರಬಾರದು?
ಪೂರ್ವದಲ್ಲಿ ನೆಟ್ಟಿರುವ ಆದ ಮರವು ನಿವಾಸಿಗಳ ಮನಸ್ಸಿನಲ್ಲಿ ದೆವ್ವ ಮತ್ತು ಆತ್ಮಗಳ ಭಯವನ್ನು ಉಂಟುಮಾಡುತ್ತದೆ. ಆ ಮರ ಬೆಳೆದಂತೆ ನೋಡಿಕೊಳ್ಳುವುದು ಮುಖ್ಯ, ಸಾಧ್ಯವಾದರೆ ಅದನ್ನು ತೆಗೆದು ಬೇಕೆ ದಿಕ್ಕಿನಲ್ಲಿ ನೆಡುವುದು ಉತ್ತಮ. ಹಾಗೆ ಮಾಡದೇ ಇದ್ದಲ್ಲಿ ಅದು ಮನೆಯಲ್ಲಿ ಆರ್ಥಿಕ ನಿರ್ಬಂಧಗಳನ್ನು ಉಂಟುಮಾಡುತ್ತದೆ.

* ಸ್ನೇಕ್ ಪ್ಲ್ಯಾಂಡ್
ಮುಳ್ಳು ಮತ್ತು ಹಾಲಿನ ಮರಗಳನ್ನು ತೆಗೆಯಲಾಗದಿದ್ದರೆ ಅವುಗಳ ಬಳಿ ಶುಭ ಮರಗಳನ್ನು ನೆಡಬೇಕು. ಮನೆಯ ಸುತ್ತ ಮುಳ್ಳಿನ ಮರಗಳಿದ್ದರೆ ಅಕ್ಕಪಕ್ಕದಲ್ಲಿ ವಾಸಿಸುವ ಜನರೊಂದಿಗೆ ಭಿನ್ನಾಭಿಪ್ರಾಯದ ಭೀತಿ ಎದುರಾಗುತ್ತದೆ. ಅವುಗಳನ್ನು ತೆಗೆದುಹಾಕಿದರೆ ಕೆಲವರು ಯಾವುದೇ ಕಾರಣವಿಲ್ಲದೆ ಮಾತನಾಡುವುದನ್ನು ಮತ್ತು ನಡೆಯುವುದನ್ನು ನಿಲ್ಲಿಸುತ್ತಾರೆ.
*ತುಳಸಿ ಗಿಡವನ್ನು ಯಾವ ದಿಕ್ಕಿನಲ್ಲಿ ನೆಡಬೇಕು?
ಮನೆಯೊಳಗೆ ನೆಟ್ಟ ತುಳಸಿ ಮಾನವರಿಗೆ ಪ್ರಯೋಜನಕಾರಿಯಾಗಿದೆ. ಸಂಪತ್ತು ಮತ್ತು ಮಕ್ಕಳಾಗದ ವಿವಾಹಿತರಿಗೆ ಪುತ್ರ ಭಾಗ್ಯವನ್ನು ನೀಡುತ್ತದೆ ಎಂದು ನಂಬಲಾಗುತ್ತದೆ. ಇದನ್ನು ನಿತ್ಯ ಪೂಜಿಸುವುದರಿಂದ ಪುಣ್ಯ ಮತ್ತು ದೇವರ ಆಶೀರ್ವಾದ ಸಿಗಲಿದೆ ಎಂಬ ನಂಬಿಕೆ ಇದೆ.
ಬೆಳಗ್ಗೆ ಎದ್ದ ನಂತರ ತುಳಸಿಯನ್ನು ನೋಡುವುದರಿಂದ ಬಂಗಾರ ದಾನ ಮಾಡಿದ ಫಲ ಸಿಗುತ್ತದೆ. ಜೊತೆಗೆ ಮನೆಯ ದಕ್ಷಿಣಕ್ಕೆ ತುಳಸಿ ಮರವನ್ನು ನೆಡಬಾರದು ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಇಲ್ಲದಿದ್ದರೆ ಇದು ನಿಮ್ಮ ದೈಹಿಕ ಸಮಸ್ಯೆಗಳಾದ ಮೊಣಕಾಲು ನೋವು, ಬೆನ್ನು ನೋವು, ಬೆನ್ನು ನೋವು ಇತ್ಯಾದಿಗಳು ಹೆಚ್ಚಾಗಬಹುದು.
*ಮನೆಯಲ್ಲಿ ಯಾವ ಗಿಡಗಳನ್ನು ಇಡಬಾರದು
ಹಾಲಿನ ಮರಗಳು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡುತ್ತವೆ ಮತ್ತು ಹಣ್ಣಿನ ಮರಗಳು ಮಕ್ಕಳಿಗೆ ಕೆಲವು ಸಮಸ್ಯೆಗಳನ್ನು ಉಂಟುಮಾಡುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ, ಈ ಮರಗಳನ್ನು ಮನೆಯಲ್ಲಿ ಬಳಸಬಾರದು. ಮನೆಯ ಸುತ್ತ ಮುಳ್ಳು, ಒಡೆದ ಹಾಲು ಮತ್ತು ಹಣ್ಣಿನ ಮರಗಳು ಮಹಿಳೆ ಮತ್ತು ಅವರ ಮಕ್ಕಳಿಗೂ ತೊಂದರೆ ಉಂಟುಮಾಡುತ್ತವೆ ಎಂದು ನಂಬಲಾಗುತ್ತದೆ.
-
Vastu Tips for Loan: ಸಂಬಳ ಬಂದ ತಕ್ಷಣ ಸಾಲ ತೀರಿಸಬೇಡಿ: ವಾಸ್ತು ಎಚ್ಚರಿಕೆ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ












Click it and Unblock the Notifications