60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 'ಉದ್ಯೋಗ ಮೇಳ': ಕೆಲಸಕ್ಕಾಗಿ ನೋಂದಣಿ ಆದವರೆಷ್ಟು?
ಬೆಂಗಳೂರು, ಆಗಸ್ಟ್ 26: ಪಿಂಚಣಿ ಸೇರಿದಂತೆ ಅಗತ್ಯ ಆರ್ಥಿಕ ಭದ್ರತೆ ಇಲ್ಲದ ಹಿರಿಯ ನಾಗರಿಕರಿಗೆ ಉದ್ಯೋಗ ಅವಕಾಶ ಕಲ್ಪಿಸುವ ಉದ್ದೇಶದಿಂದ ರೋಟರಿ ಬೆಂಗಳೂರು ವೆಸ್ಟ್ ಮತ್ತು ಸೇಂಟ್ ಜೋಸೆಫ್ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ ಭಾನುವಾರ 'ವಾರ್ಷಿಕ ಉದ್ಯೋಗ ಮೇಳ' ಆಯೋಜಿಸಲಾಗಿತ್ತು. ಈ ಮೂಲಕ ಹಿರಿಯ ನಾಗರಿಕರಿಗೆ ಸ್ವಾವಲಂಬಿ ಜೀವನ ಕಟ್ಟಿಕೊಡಲು ಟ್ರಸ್ಟ್ ಮುಂದಾಗಿದೆ.
ಬೇರಾವುದೋ ಕೆಲಸ ಮಾಡಿ ನಿವೃತ್ತರಾದವರು ಸೇರಿದಂತೆ ಬಹುಪಾಲು ಹಿರಿಯ ನಾಗರಿಕರು ತಮ್ಮನ್ನು ತಾವು ಸ್ವಾವಲಂಭಿಗಳಾಗಲು ಹಾಗೂ ಮತ್ತೆ ಉದ್ಯೋಗ ಮಾಡಲು ಬಯಸುತ್ತಾರೆ. ಅನೇಕ ಹಿರಿಯ ನಾಗರಿಕರಿಗೆ ಅವರ ಅಗತ್ಯತೆ ಪೂರೈಸಲು ಈ ಮೇಳ ಆಯೋಜಿಸಿದ್ದೇವೆ ಎಂದು ಟ್ರಸ್ಟ್ ಸದಸ್ಯರು ಮಾಹಿತಿ ನೀಡಿದ್ದಾರೆ.

ಉದ್ಯೋಗದ ಅಗತ್ಯತೆ ಸಾಕಷ್ಟಿದೆ!
ಈ ಮೇಳದಲ್ಲಿ ಉದ್ಯೋಗ ಬಯಸಿರುವ ಸುಮಾರು 1,250 ಕ್ಕೂ ಹೆಚ್ಚು ಹಿರಿಯ ನಾಗರಿಕರು ರೆಸ್ಯೂಮ್ ಸಹಿತ ಅರ್ಜಿ ಸಲ್ಲಿಸಿದ್ದಾರೆ. ಇನ್ನೂ ಖಾಸಗಿ ಕಂಪನಿಯಲ್ಲಿ ಪ್ರಮುಖ ಸ್ಥಾನ ನಿರ್ವಹಿಸಿ 25 ವರ್ಷಗಳ ಅನುಭವ ಹೊಂದಿರುವ ಸೈಯದ್ ಅಂಜುಮ್ (56) ಅವರು ತಮ್ಮ ಆರ್ಥಿಕ ಸ್ಥಿತಿ ಸುಧಾರಣೆಗೆ ಕೆಲಸದ ಅಗತ್ಯತೆ ಇದೆ ಎಂದು ತಿಳಿಸಿದರು.
ನಮ್ಮ ದೈನಂದಿನ ಅಗತ್ಯತೆ ಪೂರೈಸಿಕೊಳ್ಳಲು ಹಣಕಾಸಿನ ಅಗತ್ಯವಿರುತ್ತದೆ. ಅದೆಲ್ಲ ಪೂರೈಸಿಕೊಳ್ಳಲು ನಮಗೆ ಹಣಕಾಸಿನ ಅಗತ್ಯವಿದೆ ಎಂದು ಸುಂದರ್ ರಾಮನ್ (60) ಹೇಳಿದರು. ನಮಗೆ ಮಕ್ಕಳು ಇಲ್ಲ. ಪತಿ ಆಪ್ಟಿಕಲ್ ಅಂಗಡಿಯಲ್ಲಿ ದುಡಿಯುತ್ತಿದ್ದರು. ನಾನು ಖಾಸಗಿ ಕಂಪನಿಯಲ್ಲಿ ಅಕೌಂಟ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೆ. ನಿವೃತ್ತಿ ಆಗಿದ್ದು, ಇಂದು ಹಣದುಬ್ಬರ, ಗಗನಕ್ಕೇರಿದ ಬೆಲೆಗಳ ಮಧ್ಯೆ ಜೀವನ ನಡೆಸುವುದು ಕಷ್ಟವಾಗಿದೆ. ಹೀಗಾಗಿ ಉದ್ಯೋಗದ ಅಗತ್ಯತೆ ಇದೆ ಎಂದು ವಸಂತಲಕ್ಷ್ಮಿ ಎಂಬುವವರು ಮಾಹಿತಿ ನೀಡಿದರು
ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ದಂಪತಿಗಳು, ಸಾಮಾಜಿಕ ಕಾಳಜಿ ಸಹಿತ ವ್ಯವಹರಿಸುವ ಉದ್ಯೋಗವನ್ನು ಹುಡುಕುತ್ತಿದ್ದೇವೆ. ಮಹಿಳಾ ಸಬಲೀಕರಣ, ಮಹಿಳೆಯರನ್ನು ಮುನ್ನಡೆಸುವ, ಪ್ರತಿಪಾದಿಸುವ ಸಂಸ್ಥೆ ಜತೆ ತಾವು ಕೆಲಸ ಮಾಡಲು ಆಸಕ್ತರಾಗಿದ್ದೇವೆ ಎಂದರು ಅವರು ಹೇಳಿಕೊಂಡಿದ್ದಾರೆ.

1,077 ಉದ್ಯೋಗ ಅವಕಾಶಗಳು
ಮೇಳದಲ್ಲಿ 72 ಉದ್ಯೋಗದಾತ ಕಂಪನಿಗಳು ಪಾಲ್ಗೊಂಡಿದ್ದವು. ಅವರಿಂದ 1,077 ಉದ್ಯೋಗ ಅವಕಾಶಗಳು ಇದ್ದು, ಮುಖ್ಯವಾಗಿ ಎಂಜಿನಿಯರಿಂಗ್, ಮಾರ್ಕೆಟಿಂಗ್, ಆಡಳಿತ, ಖಾತೆಗಳು, ಮೇಲ್ವಿಚಾರಕ ಹುದ್ದೆಗಳಿರುವುದಾಗಿ ಟ್ರಸ್ಟ್ಗೆ ತಿಳಿಸಿವೆ. ಇನ್ನು 1,450 ಸ್ವಯಂ ಉದ್ಯೋಗ ಅವಕಾಶಗಳು ಇವೆ.
ಈ ವಾರ್ಷಿಕ ಉದ್ಯೋಗ ಮೇಳೆವು 2011ರಿಂದ ನಡೆಯುತ್ತಿದೆ. ಈ ವರೆಗೆ 55 ರಿಂದ 70 ವರ್ಷ ವಯಸ್ಸಿನ 3,500 ಹಿರಿಯ ನಾಗರಿಕರಿಗೆ ನೆರವಾಗಿದೆ. ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ನ ಸಹ-ಸಂಸ್ಥಾಪಕ ಮತ್ತು ವ್ಯವಸ್ಥಾಪಕ ಟ್ರಸ್ಟಿ ಡಾ ರಾಧಾ ಎಸ್ ಮೂರ್ತಿ ಅವರು ಪ್ರತಿಕ್ರಿಯಿಸಿದ್ದಾರೆ. 2021ರವರೆಗೆ ದೇಶದಲ್ಲಿ ಒಟ್ಟು ಹಿರಿಯ ನಾಗರಿಕರ ಪೈಕಿ ಸುಮಾರು ಶೇ.89ರಷ್ಟು ಮಂದಿ ನಿವೃತ್ತಿಯ ನಂತರ ಯಾವುದೇ ಸಾಮಾಜಿಕ ಭದ್ರತೆ ಹೊಂದಿಲ್ಲ. ಅಂತವರ ಪೈಕಿ ಕೆಲವರು ಉದ್ಯೋಗ ಪಡೆಯಲು ಮುಂದಾಗುತ್ತಾರೆ ಎಂದು ತಿಳಿಸಿದರು.
-
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications