Raksha Bandhan 2024: ಅದೃಷ್ಟದ ರಾಖಿ: ಸಹೋದರರಿಗೆ ಈ ಬಣ್ಣದ ರಾಖಿ ತುಂಬಾ ಅದೃಷ್ಟ
ಅಣ್ಣ ತಂಗಿಯ ನಡುವಿನ ಬಾಂಧವ್ಯವನ್ನು ಬಲಪಡಿಸುವ ಹಬ್ಬ ರಕ್ಷಾ ಬಂಧನ. ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಆಗಸ್ಟ್ 19ರಂದು ರಕ್ಷಾ ಬಂಧನ ಹಬ್ಬವಿದೆ. ಪ್ರತಿ ವರ್ಷ ಈ ಹಬ್ಬದಂದು ಸಹೋದರಿ ತನ್ನ ಸಹೋದರನಿಗೆ ರಾಖಿಯನ್ನು ಕಟ್ಟುತ್ತಾಳೆ.
ರಕ್ಷಾಬಂಧನ ಎಂಬ ಪದದ ಅರ್ಥ ಹೆಸರೇ ಸೂಚಿಸುವಂತೆ ''ರಕ್ಷಣೆಯ ಗಂಟು'' ಎಂಬುದಾಗಿದೆ. ಈ ದಾರವನ್ನು ತಂಗಿ ಅಣ್ಣನಿಗೆ ಉತ್ತಮ ಆರೋಗ್ಯ, ಸುಖ ಸೌಭಾಗ್ಯಗಳಿಗಾಗಿ ಹರಿಸಿ ಕಟ್ಟುತ್ತಾಳೆ. ಸಹೋದರಿ ಈ ರಾಖಿಯನ್ನು ಕಟ್ಟಿದ ಬಳಿಕ ಸಹೋದರ ಆಕೆಯ ರಕ್ಷಣೆಯ ಭರವಸೆಯನ್ನು ನೀಡಿ ಉಡುಗೊರೆಗಳನ್ನು ನೀಡುತ್ತಾನೆ.

ಅಂದಹಾಗೆ ಈ ದಿನ ಸಹೋದರನ ಒಳಿತಿಗಾಗಿ ಸಹೋದರಿಯರು ಪ್ರಾರ್ಥನೆ ಮಾಡುತ್ತಾರೆ. ಈ ದಿನ ಸಹೋದರನ ಕೈಗೆ ಕಟ್ಟುವ ದಾರದ ಬಣ್ಣವೂ ಕೂಡ ಸಹೋದರನ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ರಾಖಿ ಬಣ್ಣದ ಮೇಲೆ ಸಹೋದರಿಯರು ಗಮನ ಹರಿಸಬೇಕು. ಹಾಗಾದರೆ ಯಾವ ಬಣ್ಣದ ರಾಖಿ ಸಹೋದರನಿಗೆ ತುಂಬಾ ಒಳ್ಳೆಯದು ಎಂದು ಜ್ಯೋತಿಷ್ಯ ಶಾಸ್ತ್ರದ ಮೂಲಕ ತಿಳಿಯೋಣ.
ರಕ್ಷಾಬಂಧನದಂದು ಸಹೋದರರಿಗೆ ಕಟ್ಟುವ ರಾಖಿಗೆ ಹೆಚ್ಚಿನ ಮಹತ್ವವಿದೆ. ಹಾಗಾದರೆ ರಕ್ಷಾಬಂಧನದಂದು ಸಹೋದರನಿಗೆ ಯಾವ ಬಣ್ಣದ ರಾಖಿಯನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಎಂದು ತಿಳಿಯೋಣ.
ಸಹೋದರನಿಗೆ ಯಾವ ಬಣ್ಣದ ರಾಖಿ ಅದೃಷ್ಟ?
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮನೆಯ ಲಕ್ಷ್ಮಿಯನ್ನು ಶುಕ್ರ ಎಂದು ಪರಿಗಣಿಸಲಾಗುತ್ತದೆ. ಸಹೋದರರು ಮಂಗಳನ ಸಂಕೇತವಾಗಿದ್ದಾರೆ. ಜೊತೆಗೆ ಸಹೋದರಿಯರು ಬುಧ ಗ್ರಹದ ಅಂಶಗಳಾಗಿದ್ದಾರೆ. ಮಂಗಳ ಗ್ರಹಕ್ಕೆ ಕೆಂಪು ಬಣ್ಣದ ರಕ್ಷಾ ದಾರವನ್ನು ಅತ್ಯುತ್ತಮ ಎಂದು ಪರಿಗಣಿಸಲಾಗುತ್ತದೆ. ಇದನ್ನು ಸಹೋದರನಿಗೆ ಕಟ್ಟುವುದರಿಂದ ಶೌರ್ಯ, ಧೈರ್ಯ ಮತ್ತು ಶಕ್ತಿ ಹೆಚ್ಚುತ್ತದೆ. ಅಲ್ಲದೆ ಹಳದಿ ಬಣ್ಣದ ರಾಖಿ ಗೌರವ, ಆಶೀರ್ವಾದ ಮತ್ತು ಯಶಸ್ಸನ್ನು ನೀಡುತ್ತದೆ.

ರಾಖಿಗೆ ಭದ್ರಾ ಕಾಲದ ಪ್ರಭಾವ
ಈ ದಿನ ಭದ್ರ ಕಾಲವು ಮುಂಜಾನೆ 5:32ಕ್ಕೆ ಪ್ರಾರಂಭವಾಗುತ್ತದೆ. ಮಧ್ಯಾಹ್ನ 1:31 ರವರೆಗೆ ಇರುತ್ತದೆ. ಆದರೆ ಭದ್ರ ಕಾಲವು ರಕ್ಷಾಬಂಧನದ ಮೇಲೆ ಪರಿಣಾಮ ಬೀರುವುದಿಲ್ಲ. ಏಕೆಂದರೆ ಈ ಸಮಯದಲ್ಲಿ ಭದ್ರ ಕಾಲವು ಪಾತಾಳದಲ್ಲಿ ನೆಲೆಸುತ್ತದೆ. ಆದ್ದರಿಂದ ಭೂಮಿಯ ಮೇಲೆ ಭದ್ರಾ ಪ್ರಭಾವ ಇರುವುದಿಲ್ಲ.
ರಕ್ಷಾಬಂಧನ ಶುಭ ಸಮಯ
ಸೋಮವಾರ 19 ಆಗಸ್ಟ್ 2024 ರಂದು ಶ್ರಾವಣ ಪೂಜೆಯ ನಂತರ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ರಕ್ಷಾಬಂಧನಕ್ಕೆ ಉತ್ತಮ ಸಮಯವಾಗಿದೆ. ಈ ಯಾವುದೇ ಶುಭ ಸಮಯದಲ್ಲಿ ನಿಮ್ಮ ಸಹೋದರರೊಂದಿಗೆ ನೀವು ರಾಖಿ ಹಬ್ಬವನ್ನು ಆಚರಿಸಬಹುದು.
ರಕ್ಷಾಬಂಧನದ ಕಥೆ
ಒಮ್ಮೆ ದೇವತೆಗಳು ಮತ್ತು ಅಸುರರ ನಡುವೆ ಹನ್ನೆರಡು ವರ್ಷಗಳ ಕಾಲ ಯುದ್ಧ ನಡೆಯಿತು. ಅದರಲ್ಲಿ ದೇವತೆಗಳು ಸೋಲಿಸಲ್ಪಟ್ಟರು. ಅಸುರರು ಸ್ವರ್ಗವನ್ನು ವಶಪಡಿಸಿಕೊಂಡರು. ಸೋಲಿನಿಂದ ನಿರಾಶೆಗೊಂಡ ಇಂದ್ರನು ತನ್ನ ಗುರು ಬೃಹಸ್ಪತಿಯ ಬಳಿಗೆ ಹೋಗಿ ಯುದ್ಧದಲ್ಲಿ ಹೋರಾಡುವುದು ಅವಶ್ಯಕ ಎಂದು ಹೇಳಿದನು. ಇಂದ್ರನು ರಕ್ಷಾಬಂಧನವನ್ನು ರಕ್ಷಾ-ವಿಧಾನದೊಂದಿಗೆ ಆಚರಿಸಿದನು. ಇದಾದ ನಂತರ, ಇಂದ್ರನು ಬೃಹತ್ ಆನೆಯ ಮೇಲೆ ಸವಾರಿ ಮಾಡುತ್ತಾ ಯುದ್ಧಭೂಮಿಯನ್ನು ತಲುಪಿದಾಗ, ರಾಕ್ಷಸರು ಹೆದರಿ ಓಡಿಹೋದರು. ಹೀಗೆ ರಕ್ಷಾ ವಿಧಾನದ ಪ್ರಭಾವದಿಂದ ಇಂದ್ರನು ವಿಜಯಶಾಲಿಯಾದನು ಅಂದಿನಿಂದ ಈ ಹಬ್ಬವನ್ನು ಆಚರಿಸಲು ಪ್ರಾರಂಭಿಸಲಾಯಿತು.
ಶ್ರಾವಣ ಪೂಜೆ
ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಶ್ರವಣಕುಮಾರ ಎಂಬ ಭಕ್ತ ತನ್ನ ಅಂಧ ಪೋಷಕರಿಗೆ ನೀರು ತರಲು ರಾತ್ರಿ ಹೋದನು. ಈ ಸಂದರ್ಭದಲ್ಲಿ ರಾಜ ದಶರಥ ಬೇಟೆಯನ್ನು ಹುಡುಕುತ್ತಾ ಎಲ್ಲೋ ಅಡಗಿಕೊಂಡಿದ್ದನು. ಶ್ರವಣಕುಮಾರ ನೀರು ತರಲು ಹೋದಾಗ ಆತನನ್ನು ಪ್ರಾಣಿ ಎಂದು ತಪ್ಪಾಗಿ ಗ್ರಹಿಸಿ ಬಾಣವನ್ನು ಬಿಟ್ಟನು. ಇದರಿಂದಾಗಿ ಶ್ರವಣಕುಮಾರ ಸತ್ತನು. ಶ್ರಾವಣ ಸಾವಿನ ಸುದ್ದಿ ಕೇಳಿ ಅಂಧ ಪೋಷಕರು ರೋದಿಸಿದರು. ಆಗ ದಶರಥ ಅಜ್ಞಾನದಿಂದ ಮಾಡಿದ ಅಪರಾಧಕ್ಕೆ ಕ್ಷಮೆಯಾಚಿಸಿ ಶ್ರವಣ ಪೂಜೆಯನ್ನು ಶ್ರಾವಣ ದಿನದಂದು ಉಪದೇಶಿಸಿದನು. ಅಂದಿನಿಂದ ಶ್ರಾವಣ ಪೂಜೆಯನ್ನು ಮಾಡಲಾರಂಭವಾಯಿತು. ಮೊದಲನೆಯದಾಗಿ ಶ್ರಾವಣನಿಗೆ ರಕ್ಷಾ ಸೂತ್ರಗಳನ್ನು ಅರ್ಪಿಸಲಾಗುತ್ತದೆ.
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications