Makar Sankranti 2025: ಮಕರ ಸಂಕ್ರಾಂತಿ ದಿನಾಂಕ, ಶುಭ ಸಮಯ, ಮಹತ್ವ, ಆಚರಣೆಯ ಸಂಪೂರ್ಣ ಮಾಹಿತಿ ಇಲ್ಲಿದೆ
ಅತ್ಯಂತ ಮಹತ್ವದ ಹಿಂದೂ ಹಬ್ಬಗಳಲ್ಲಿ ಒಂದಾದ ಮಕರ ಸಂಕ್ರಾಂತಿಯನ್ನು ಸೂರ್ಯನು ಮಕರ ರಾಶಿಯಲ್ಲಿ ಸಂಕ್ರಮಣವಾಗುವುದರೊಂದಿಗೆ ಆಚರಿಸಲಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿರುವ ಈ ಹಬ್ಬದಂದು ಸೂರ್ಯ ದೇವರನ್ನು ಗೌರವಿಸಲಾಗುತ್ತದೆ. ಮಕರ ಸಂಕ್ರಾಂತಿ ಸಮೃದ್ಧಿ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಸಂಕೇತಿಸುತ್ತದೆ. ಹಾಗಾದರೆ ಈ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಯನ್ನು ಯಾವ ದಿನಾಂಕದಂದು ಆಚರಿಸಲಾಗುತ್ತದೆ? ಶುಭ ಮುಹೂರ್ತ ಯಾವಾಗ ಇದೆ ಎಲ್ಲವನ್ನೂ ತಿಳಿಯೋಣ.
2025ನೇ ವರ್ಷದಲ್ಲಿ ಮಕರ ಸಂಕ್ರಾಂತಿಯನ್ನು ಮಂಗಳವಾರ ಜನವರಿ 14ರಂದು ಆಚರಿಸಲಾಗುತ್ತದೆ. ಈ ದಿನದ ಶುಭ ಸಮಯ, ಆಚರಣೆ, ಮಹತ್ವ, ಪ್ರಾದೇಶಿಕ ಆಚರಣೆಗಳ ಹೆಚ್ಚಿನ ಮಾಹಿತಿಯನ್ನು ಸಂಪೂರ್ಣ ವಿವರ ಇಲ್ಲಿದೆ.

ಮಕರ ಸಂಕ್ರಾಂತಿ 2025: ದಿನಾಂಕ ಮತ್ತು ಸಮಯ
►ಮಂಗಳವಾರ ಜನವರಿ 14, 2025ರಂದು ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ.
►ಪುಣ್ಯ ಕಾಲ ಮುಹೂರ್ತ: ಬೆಳಗ್ಗೆ 09:03 ರಿಂದ ಸಂಜೆ 06:04ರವರೆಗೆ (ಕಾಲ: 9 ಗಂಟೆಗಳು)
► ಮಹಾ ಪುಣ್ಯ ಕಾಲ ಮುಹೂರ್ತ: ಬೆಳಗ್ಗೆ 09:03 ರಿಂದ ಬೆಳಗ್ಗೆ 10:57 ಗಂಟೆವರೆಗೆ (ಕಾಲ: 1 ಗಂಟೆ, 54 ನಿಮಿಷಗಳು)
► ಪುಣ್ಯ ಕಾಲ ಮತ್ತು ಮಹಾ ಪುಣ್ಯ ಕಾಲಗಳು ಆಧ್ಯಾತ್ಮಿಕ ಆಚರಣೆಗಳು, ದತ್ತಿ ಕಾರ್ಯಗಳು ಮತ್ತು ಧಾರ್ಮಿಕ ವಿಧಿಗಳನ್ನು ನಿರ್ವಹಿಸಲು ಅತ್ಯಂತ ಮಂಗಳಕರ ಅವಧಿಗಳಾಗಿವೆ.
ಮಕರ ಸಂಕ್ರಾಂತಿಯ ಮಹತ್ವ
ಮಕರ ಸಂಕ್ರಾಂತಿಯು ಸುಗ್ಗಿಯ ಕಾಲವನ್ನು ಸೂಚಿಸುತ್ತದೆ. ಈ ದಿನ ಭೂಮಿಯ ಮೇಲಿನ ಜೀವನವನ್ನು ಪೋಷಿಸಿದ್ದಕ್ಕಾಗಿ ಸೂರ್ಯ ದೇವರನ್ನು ಗೌರವಿಸಲಾಗುತ್ತದೆ. ಈ ಹಬ್ಬ ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ಪ್ರತಿನಿಧಿಸುವುದು ಮಾತ್ರವಲ್ಲದೆ ಹೊಸ ಆರಂಭ, ಸಮೃದ್ಧಿ ಮತ್ತು ಕೃತಜ್ಞತೆಯನ್ನು ಸಂಕೇತಿಸುತ್ತದೆ. ಹೊಸ ಉದ್ಯಮಗಳು ಮತ್ತು ಆಧ್ಯಾತ್ಮಿಕ ಅಭ್ಯಾಸಗಳನ್ನು ಕೈಗೊಳ್ಳಲು ಇದು ಸೂಕ್ತ ಸಮಯವಾಗಿದೆ.

ವೈವಿಧ್ಯಮಯ ಪ್ರಾದೇಶಿಕ ಹೆಸರುಗಳು ಮತ್ತು ಆಚರಣೆಗಳು
ಮಕರ ಸಂಕ್ರಾಂತಿಯನ್ನು ಭಾರತದಾದ್ಯಂತ ವಿಶಿಷ್ಟ ಸಂಪ್ರದಾಯಗಳೊಂದಿಗೆ ಆಚರಿಸಲಾಗುತ್ತದೆ: ಯಾವೆಲ್ಲಾ ರಾಜ್ಯಗಳಲ್ಲಿ ಮಕರ ಸಂಕ್ರಾಂತಿಯನ್ನು ಹೇಗೆ ಆಚರಿಸಲಾಗುತ್ತೆ ಹಾಗೂ ಯಾವ ಹೆಸರಿನಿಂದ ಕರೆಯಲಾಗುತ್ತದೆ ಎಂದು ನೋಡೋಣ.
► ತಮಿಳುನಾಡು: ತಮಿಳುನಾಡಿನಲ್ಲಿ ಪೊಂಗಲ್ ಎಂದು ಕರೆಯಲ್ಪಡುವ ಈ ಹಬ್ಬವನ್ನು ಪ್ರಕೃತಿ ಮತ್ತು ಸೂರ್ಯನಿಗೆ ಧನ್ಯವಾದ ಹೇಳಲು ಸಿಹಿ ಖಾದ್ಯವನ್ನು ತಯಾರಿಸುವ ಮೂಲಕ ಆಚರಿಸಲಾಗುತ್ತದೆ.
► ಗುಜರಾತ್ ಮತ್ತು ರಾಜಸ್ಥಾನ: ಗುಜರಾತ್ ಮತ್ತು ರಾಜಸ್ಥಾನದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಉತ್ತರಾಯಣ ಎಂದು ಕರೆಯಲಾಗುತ್ತದೆ. ಅಲ್ಲಿ ಹಬ್ಬದಂದು ಗಾಳಿಪಟ ಹಾರಾಟ ಮಾಡುವುದು ಇಲ್ಲಿನ ವಿಶೇಷತೆಯಾಗಿದೆ. ಈ ದಿನ ರೋಮಾಂಚಕ ಬಣ್ಣಗಳಿಂದ ಆಕಾಶ ಕಂಗೊಳಿಸುತ್ತದೆ.
► ಪಂಜಾಬ್ ಮತ್ತು ಹರಿಯಾಣ: ಪಂಜಾಬ್ ಮತ್ತು ಹರಿಯಾಣದಲ್ಲಿ ಮರ ಸಂಕ್ರಾಂತಿ ಹಬ್ಬವನ್ನು ಮಾಘಿ ಎಂದು ಕರೆಯಲಾಗುತ್ತದೆ. ಈ ದಿನ ಜನರು ನದಿಗಳಲ್ಲಿ ಪವಿತ್ರ ಸ್ನಾನ ಮಾಡುವ ಮೂಲಕ ಆಚರಿಸುತ್ತಾರೆ. ಈ ದಿನ ಬೆಲ್ಲ ಮತ್ತು ಖೀರ್ನಂತಹ ಸಿಹಿತಿಂಡಿಗಳನ್ನು ತಯಾರಿಸಿ ಆನಂದಿಸುತ್ತಾರೆ.
ಮಕರ ಸಂಕ್ರಾಂತಿಯ ಸಮಯದಲ್ಲಿ ಆಚರಿಸಲಾಗುವ ಆಚರಣೆಗಳು
ಹಬ್ಬವು ವಿವಿಧ ಆಧ್ಯಾತ್ಮಿಕ ಮತ್ತು ಸಾಮಾಜಿಕ ಪದ್ಧತಿಗಳಿಂದ ಗುರುತಿಸಲ್ಪಟ್ಟಿದೆ:
► ನದಿಗಳಲ್ಲಿ ಪವಿತ್ರ ಸ್ನಾನ: ಮಕರ ಸಂಕ್ರಾಂತಿಯಂದು ಗಂಗಾ ಮತ್ತು ಯಮುನೆಯಂತಹ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು ಆತ್ಮವನ್ನು ಶುದ್ಧೀಕರಿಸುತ್ತದೆ ಎಂದು ನಂಬಲಾಗಿದೆ.
► ನೈವೇದ್ಯ ಅರ್ಪಿಸುವುದು: ಮಕರ ಸಂಕ್ರಾಂತಿಯ ದಿನ ಭಕ್ತರು ವಿಶೇಷ ಭಕ್ಷ್ಯಗಳನ್ನು ತಯಾರಿಸಿ ಸೂರ್ಯನಿಗೆ ಅರ್ಪಿಸುತ್ತಾರೆ.
► ದತ್ತಿ ಕಾರ್ಯಗಳು: ಈ ಹಬ್ಬದ ಪುಣ್ಯಕಾಲದಲ್ಲಿ ಆಹಾರ, ಬಟ್ಟೆ ಮತ್ತು ಹಣವನ್ನು ದಾನ ಮಾಡುವುದು ಪುಣ್ಯವನ್ನು ತರುತ್ತದೆ ಎಂಬ ನಂಬಿಕೆ ಇದೆ.
► ಪೂರ್ವಜರ ಆಚರಣೆಗಳು: ಈ ದಿನ ಶ್ರಾದ್ಧ ವಿಧಿಗಳನ್ನು ನಡೆಸುವುದು ಪೂರ್ವಜರನ್ನು ಗೌರವಿಸುತ್ತದೆ.
► ಉಪವಾಸಗಳು (ಪಾರಣ): ಅನೇಕರು ಉಪವಾಸ ಮಾಡುತ್ತಾರೆ. ಶುಭ ಮುಹೂರ್ತದ ಸಮಯದಲ್ಲಿ ಅವುಗಳನ್ನು ಕೊನೆಗೊಳಿಸುತ್ತಾರೆ.
ಹಬ್ಬಗಳಲ್ಲಿ ಪ್ರಾದೇಶಿಕ ಬದಲಾವಣೆಗಳು
ಪ್ರತಿಯೊಂದು ರಾಜ್ಯ ಹಬ್ಬ ಆಚರಣೆಯಲ್ಲಿ ತನ್ನ ಸಾಂಸ್ಕೃತಿಕಯನ್ನು ಹೊಂದಿದೆ.
► ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಜನರು ಎಳ್ಳು ಮತ್ತು ಬೆಲ್ಲವನ್ನು ಈ ದಿನ ಹಂಚಿಕೊಳ್ಳುತ್ತಾರೆ. ಜೊತೆಗೆ ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಇದು ಏಕತೆ ಮತ್ತು ಸಾಮರಸ್ಯವನ್ನು ಸಂಕೇತಿಸುತ್ತದೆ.
► ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದಲ್ಲಿ ಪ್ರಸಿದ್ಧ ಗಂಗಾ ಸಾಗರ ಮೇಳ ಆಯೋಜಿಸಲಾಗುತ್ತದೆ. ಈ ವೇಳೆ ಗಂಗಾ ಮತ್ತು ಬಂಗಾಳ ಕೊಲ್ಲಿಯ ಸಂಗಮಕ್ಕೆ ಯಾತ್ರಿಕರು ಆಗಮಿಸಿ ಹಬ್ಬ ಆಚರಿಸುತ್ತಾರೆ.
► ದಕ್ಷಿಣ ಭಾರತ: ದಕ್ಷಿಣ ಭಾರತದಲ್ಲಿ ಈ ದಿನ ಕುಟುಂಬಗಳಲ್ಲಿ ಪೊಂಗಲ್ ಅನ್ನು ತಯಾರಿಸು ಪದ್ಧತಿ ಇದೆ.
► ಗುಜರಾತ್: ಗುಜರಾತ್ ನಲ್ಲಿ ಉತ್ತರಾಯಣದ ಸಮಯದಲ್ಲಿ ಗಾಳಿಪಟ ಹಾರಿಸುವುದು ಸಮುದಾಯಗಳನ್ನು ಸಂತೋಷದಿಂದ ಒಟ್ಟುಗೂಡಿಸುತ್ತದೆ.
ಹೀಗೆ ಮಕರ ಸಂಕ್ರಾಂತಿ ನಂಬಿಕೆ, ಕೃತಜ್ಞತೆ ಮತ್ತು ಏಕತೆಯ ಆಚರಣೆಯಾಗಿದೆ. ನಾನಾ ರಾಜ್ಯಗಳಲ್ಲಿನ ಸಂಪ್ರದಾಯಗಳು ಪ್ರಕೃತಿಗೆ ಗೌರವವನ್ನು ಸೂಚಿಸುತ್ತವೆ. ಈ ಹಬ್ಬವನ್ನು ಪೊಂಗಲ್, ಉತ್ತರಾಯಣ ಅಥವಾ ಮಾಘಿ ಎಂದು ಯಾವುದೇ ಹೆಸರಿನಿಂದ ಆಚರಿಸಿದರೂ ಕೂಡ ಈ ಹಬ್ಬ ಸೂರ್ಯನ ಜೀವ ನೀಡುವ ಶಕ್ತಿಯನ್ನು ಗೌರವಿಸುತ್ತದೆ. ಈ ಮಕರ ಸಂಕ್ರಾಂತಿ ನಿಮ್ಮ ಜೀವನದಲ್ಲಿ ಸಮೃದ್ಧಿ ಮತ್ತು ಸಂತೋಷದಿಂದ ತುಂಬಲಿ ಎಂದು ನಾವೂ ಕೂಡ ಶುಭ ಹಾರೈಸುತ್ತೇವೆ.
-
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications