ಅಟಲ್ ಬಿಹಾರಿ ವಾಜಪೇಯಿ ಏಕೆ 'ಬ್ರಹ್ಮಚಾರಿ'ಯಾಗಿಯೇ ಉಳಿದರು?
Recommended Video

ಭಾರತದ ಮಾಜಿ ಪ್ರಧಾನಿ, ಉತ್ಕೃಷ್ಟ ವಾಗ್ಮಿ ಅಟಲ್ ಬಿಹಾರಿ ವಾಜಪೇಯಿಯವರು ಮದುವೆಯಾಗಿದ್ದರೆ ಇನ್ನಷ್ಟು ಚೆಂದದ ಬದುಕು ಬದುಕುತ್ತಿದ್ದರಾ ಅಥವಾ ಮದುವೆಯನ್ನೇ ಆಗದಿದ್ದದ್ದಕ್ಕೆ ಅಷ್ಟು ಚೆಂದವಾಗಿ ಬದುಕಿದರಾ?
ಇವೆರಡರ ನಡುವಿನ ಅರ್ಥವ್ಯತ್ಯಾಸ ಅರಿತುಕೊಳ್ಳುವುದು ಬಲುಕಷ್ಟ. ಉತ್ತಮ ಕವಿಯೂ ಆಗಿದ್ದ ಅವರ ಬಾಳಲ್ಲಿ ಸುಂದರಿಯೋರ್ವಳು ಪ್ರೇಮಕವನ ಬರೆದುಹೋಗಿದ್ದು ಬಿಟ್ಟರೆ, ಮತ್ತಾವ ಹೆಂಗಸೂ ಅವರ ಬಾಳಲ್ಲಿ ಪ್ರೇಯಸಿಯಾಗಿ, ಹೆಂಡತಿಯಾಗಿ ಪ್ರವೇಶ ಮಾಡಲೇ ಇಲ್ಲ.
ಮದುವೆಯಾಗದೆಯೇ 93 ವರ್ಷಗಳ ಪಯಣವನ್ನು ಅವರು ಮುಗಿಸಿದರು. ತಾವೇಕೆ ಮದುವೆಯಾಗಲಿಲ್ಲ ಎಂಬ ಪ್ರಶ್ನೆಗೆ ಅವರೇ ಹಲವಾರು ಬಾರಿ ಸ್ವಾರಸ್ಯಕರವಾಗಿ ಉತ್ತರ ನೀಡಿದ್ದಾರೆ. ಮತ್ತು ಆ ರೀತಿ ಅಂಥ ಪ್ರಶ್ನೆಗಳಿಗೆ ಉತ್ತರ ನೀಡುವುದು ಅವರಿಂದ ಮಾತ್ರ ಸಾಧ್ಯ.

ವಾಜಪೇಯಿ ಅವರು ತಮ್ಮಿಡೀ ಜೀವನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕನಾಗಿ ದುಡಿಯಲು ಮೀಸಲಿಟ್ಟಿದ್ದರು. ಆರೆಸ್ಸೆಸ್ ಗಾಗಿಯೇ ಸಮರ್ಪಿಸಿಕೊಂಡ ಅನೇಕರು ಈ ಕಾರಣದಿಂದಾಗಿಯೇ ಬ್ರಹ್ಮಚಾರಿಗಳಾಗಿ ಉಳಿದಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅವರು ಕೂಡ ಇದಕ್ಕೆ ಹೊರತಾಗಿರಲಿಲ್ಲ.
ಯಾವುದೋ ಸಂದರ್ಭದಲ್ಲಿ ಮದುವೆ ಏಕಾಗಲಿಲ್ಲ ಎಂದು ಯಾರೋ ಒಬ್ಬರು ಕೇಳಿದಾಗ, "ಯಾವುದೇ ಮಹಿಳೆ ನನ್ನನ್ನು ಸೂಕ್ತ ವರ ಎಂದು ಪರಿಗಣಿಸಲಿಲ್ಲ" ಎಂದು ತಮ್ಮ ಎಂದಿನ ಅಸ್ಖಲಿತ ನಗುವಿನೊಂದಿಗೆ ತುಂಟ ಉತ್ತರ ನೀಡಿದ್ದರು ಅಟಲ್ ಬಿಹಾರಿ ವಾಜಪೇಯಿ. ಅದು ಕೇವಲ ತಮಾಷೆಗಾಗಿ ಮಾತ್ರ ನೀಡಿದ ಉತ್ತರವಾಗಿತ್ತು.
ವಾಜಪೇಯಿ ಅವರು ಮನಸ್ಸು ಮಾಡಿದ್ದರೆ ಮದುವೆಯಾಗಿ ಸುಖಸಂಸಾರ ಹೂಡಬಹುದಾಗಿತ್ತು. ಅವರ ಬಾಳಲ್ಲಿ ಓರ್ವ ಸುಂದರಿಯ ಪ್ರವೇಶವೂ ಆಗಿತ್ತು. ಆದರೆ, ಕಾರಣಾಂತರಗಳಿಂದ ಆ ಮದುವೆ ನಡೆಯಲೂ ಇಲ್ಲ. ಅವರ ಪ್ರಣಯ ಪ್ರಸಂಗದ ಕಥೆಯೂ ಸ್ವಾರಸ್ಯಕರವಾಗಿಯೇ ಇದೆ. ಮತ್ತೊಂದು ಸಂದರ್ಭದಲ್ಲಿ 'ನಾನು ಮದುವೆಯಾಗಲಿಲ್ಲವೇನೋ ನಿಜ, ಆದರೆ ನಾನು ಬ್ರಹ್ಮಚಾರಿಯಲ್ಲ' ಎಂದು ಮತ್ತೊಂದು ನಗೆಚಟಾಕಿ ಅವರು ಹಾರಿಸಿದ್ದರು.
ನನಗೆ ಮದುವೆಯಾಗಲು ಸಮಯವೇ ಸಿಗಲಿಲ್ಲ ಎಂದು ಅವರು ಮತ್ತೊಂದು ಬಾರಿ ಹಾಸ್ಯದ ಚಟಾಕಿ ಹಾರಿಸಿದ್ದರು. ಅಂತಿಮ ಸತ್ಯವೇನೆಂದರೆ, ಅವರು ಮದುವೆಯಾಗಲಿಲ್ಲ ಅಷ್ಟೇ. ಮದುವೆಯಾಗದಿದ್ದರೇನಂತೆ, ನಮಿತಾ ಭಟ್ಟಾಚಾರ್ಯ ಎಂಬುವವರನ್ನು ದತ್ತಾಗಿ ಸ್ವೀಕರಿಸಿ, ಅವರಿಗೆ ತಂದೆಯ ಸ್ಥಾನ ತುಂಬಿದ್ದರು. ನಮಿತಾ ಭಟ್ಟಾಚಾರ್ಯ ಮತ್ತಾರೂ ಅಲ್ಲ, ತಾವು ಅಪಾರವಾಗಿ ಪ್ರೇಮಿಸಿದ್ದ, ಆದರೆ ಮದುವೆಯಾಗಲು ಸಾಧ್ಯವಾಗದ ರಾಜಕುಮಾರಿ ಕೌರ್ ಅವರ ಮಗಳು.
-
Allu Arjun: ವಿವಾಹ ವಾರ್ಷಿಕೋತ್ಸವ: ಪತ್ನಿಗೆ 1.81 ಕೋಟಿ ಬೆಲೆಯ ಮರ್ಸಿಡಿಸ್ ಕಾರು ಗಿಫ್ಟ್ ಕೊಟ್ಟ ಅಲ್ಲು ಅರ್ಜುನ್ -
Vijay Divorce: ಡಿವೋರ್ಸ್ ವದಂತಿ ನಡುವೆಯೇ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ದಳಪತಿ ವಿಜಯ್; ವಿಡಿಯೋ ವೈರಲ್ -
Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್












Click it and Unblock the Notifications