Tirumala Tirupati Temple: ಸ್ವಯಂಚಾಲಿತ 'ತಿರುಪತಿ ಲಡ್ಡು' ತಯಾರಿಕೆಗೆ ಮೊರೆ ಹೋದ TTD- ದಿನಕ್ಕೆ ಎಷ್ಟು ಲಕ್ಷ ಲಡ್ಡು? ಮಾಹಿತಿ
ತಿರುಮಲದಲ್ಲಿರುವ ವಿಶ್ವ ಪ್ರಸಿದ್ಧ ತಿಮ್ಮಪ್ಪನ ಭಕ್ತರಿಗೆ ವಿತರಿಸುವ 'ತಿರುಪತಿ ಲಡ್ಡು' ಪ್ರಸಾದವನ್ನು ಸಂಪೂರ್ಣವಾಗಿ ಸ್ವಯಂಚಾಲಿತಗೊಳಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಟಿಟಿಡಿ ಪ್ರಾರಂಭಿಸಿದೆ. ದಿನಕ್ಕೆ ಎಷ್ಟು ಲಕ್ಷ ಲಡ್ಡು ತಯಾರಿಸಲಿದೆ? ತಿಳಿಯಿರಿ
ತಿರುಪತಿ, ಫೆಬ್ರವರಿ 10: ತಿರುಮಲದಲ್ಲಿರುವ ವಿಶ್ವ ಪ್ರಸಿದ್ಧ ತಿಮ್ಮಪ್ಪನ ಭಕ್ತರಿಗೆ ವಿತರಿಸುವ 'ತಿರುಪತಿ ಲಡ್ಡು' ಪ್ರಸಾದವನ್ನು ಸಂಪೂರ್ಣವಾಗಿ ಸ್ವಯಂಚಾಲಿತಗೊಳಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು TTD ಪ್ರಾರಂಭಿಸಿದೆ. ಟಿಟಿಡಿಯು ವಿಶ್ವದ ಅತ್ಯಂತ ಶ್ರೀಮಂತ ಹಿಂದೂ ದೇವಾಲಯಗಳ ಟ್ರಸ್ಟ್ ಆಗಿದೆ. ದೇವಸ್ಥಾನದಲ್ಲಿ ಲಡ್ಡು ತಯಾರಿಕೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಸ್ವಯಂಚಾಲಿತಗೊಳಿಸಲು ಟಿಟಿಡಿ 50 ಕೋಟಿ ರೂಪಾಯಿ ಮೌಲ್ಯದ ಜರ್ಮನಿ, ಆಸ್ಟ್ರೇಲಿಯಾ ಮತ್ತು ಸ್ವಿಟ್ಜರ್ಲೆಂಡ್ನಿಂದ ಅತ್ಯಾಧುನಿಕ ಯಂತ್ರೋಪಕರಣಗಳು ಮತ್ತು ಉಪಕರಣಗಳನ್ನು ಆಮದು ಮಾಡಿಕೊಳ್ಳಲಿದೆ.

ರಿಲಯನ್ಸ್ ಇಂಡಸ್ಟ್ರೀಸ್ ದೇಣಿಗೆ
ಈ ವಿಚಾರವಾಗಿ ಮಾತನಾಡಿರುವ ಟಿಟಿಡಿ ಇಒ ಎವಿ ಧರ್ಮಾ ರೆಡ್ಡಿ, ರಿಲಯನ್ಸ್ ಇಂಡಸ್ಟ್ರೀಸ್ ಸಂಪೂರ್ಣ ಮೊತ್ತದ 50 ಕೋಟಿ ದೇಣಿಗೆ ನೀಡಲು ಮುಂದೆಬಂದಿದೆ. ತಿರುಪತಿ ಲಡ್ಡು ತಯಾರಿಕೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಸ್ವಯಂಚಾಲಿತಗೊಳಿಸಲು ದೇವಸ್ಥಾನದ ಟ್ರಸ್ಟ್ಗೆ ಬೆಂಬಲ ನೀಡಲು ಇಚ್ಛೆ ವ್ಯಕ್ತಪಡಿಸಿದೆ ಎಂದು ತಿಳಿಸಿದ್ದಾರೆ. ಟಿಟಿಡಿ ಇಒ ಪ್ರಕಾರ, ತಿರುಪತಿ ಲಡ್ಡುಗೆ ಅಂಡಾಕಾರದ ಸುತ್ತಿನ ಆಕಾರವನ್ನು ಒದಗಿಸುವುದನ್ನು ಹೊರತುಪಡಿಸಿ, ಸಂಪೂರ್ಣ ಲಡ್ಡು ಉತ್ಪಾದನಾ ಪ್ರಕ್ರಿಯೆಯು ಸ್ವಯಂಚಾಲಿತವಾಗಿರುತ್ತದೆ ಮತ್ತು ಸಂಪೂರ್ಣ ಪ್ರಕ್ರಿಯೆಯು ಹಸ್ತಚಾಲಿತ ಗುಂಡಿಯನ್ನು ಒತ್ತುವ ಮೂಲಕ ಪ್ರಾರಂಭವಾಗುತ್ತದೆ.

ದಿನವೊಂದಕ್ಕೆ 6 ಲಕ್ಷ ಲಡ್ಡುಗಳ ಉತ್ಪಾದನೆ
ದಿನವೊಂದಕ್ಕೆ 6 ಲಕ್ಷ ಲಡ್ಡುಗಳ ಉತ್ಪಾದನೆಯನ್ನು ಮಾಡಬಹುದು ಎಂದು ಟಿಟಿಡಿ ಇಒ ಸುದ್ದಿಗಾರರಿಗೆ ತಿಳಿಸಿದರು. ಇದು ಪ್ರಸ್ತುತ ಸಿದ್ಧಪಡಿಸುತ್ತಿರುವ ಸಾಮರ್ಥ್ಯಕ್ಕಿಂತ ದ್ವಿಗುಣವಾಗಲಿದೆ ಎಂದೂ ಅವರು ಹೇಳಿದರು. 'ಎಲ್ಲಕ್ಕಿಂತ ಮುಖ್ಯವಾಗಿ, ಸಂಪೂರ್ಣ ಪ್ರಕ್ರಿಯೆಯ ಯಾಂತ್ರೀಕರಣವು ಹೆಚ್ಚು ಆರೋಗ್ಯಕರ ಮತ್ತು ರುಚಿಯಾದ ತಿರುಪತಿ ಲಡ್ಡು ಪ್ರಸಾದಗಳ ಉತ್ಪಾದನೆಗೆ ಕಾರಣವಾಗುತ್ತದೆ' ಎಂದು ಎವಿ ಧರ್ಮಾ ರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು. ಅತ್ಯಂತ ಪವಿತ್ರವಾದ ತಿರುಪತಿ ಲಡ್ಡು ಪ್ರಸಾದಗಳನ್ನು ಹಲವು ದಶಕಗಳಿಂದ ಕೈಯಾರೆ ತಯಾರಿಸಲಾಗುತ್ತಿದ್ದು. ಡಿಸೆಂಬರ್ ಅಂತ್ಯದ ವೇಳೆಗೆ ಲಡ್ಡು ತಯಾರಿಕೆ ಪ್ರಕ್ರಿಯೆಯನ್ನು ಸ್ವಯಂಚಾಲಿತಗೊಳಿಸಲು ದೇವಸ್ಥಾನದ ಟ್ರಸ್ಟ್ ಸಜ್ಜಾಗಿದೆ.

ಪ್ರತಿದಿನ 500 ಜನರಿಂದ ಸೇವೆ
ಪ್ರಸ್ತುತ, ದೇವಾಲಯದ ಆವರಣದಲ್ಲಿರುವ 'ಲಡ್ಡು ಪೋಟು' ಎಂಬ ಪ್ರತ್ಯೇಕ ಅಡುಗೆಮನೆಯಲ್ಲಿ ಲಡ್ಡುಗಳನ್ನು ತಯಾರಿಸಲಾಗುತ್ತದೆ. ಅಲ್ಲಿ 500 ಜನರು ಪ್ರತಿದಿನ 80,000 ರಿಂದ ಒಂದು ಲಕ್ಷ ಭಕ್ತರಿಗೆ ಲಡ್ಡುಗಳನ್ನು ತಯಾರಿಸುತ್ತಾರೆ. ಹುರಿದ ಬೇಳೆ ಹಿಟ್ಟು, ಕುದಿಯುವ ಶುದ್ಧ ತುಪ್ಪ, ಸಕ್ಕರೆ ಪಾಕ, ಗೋಡಂಬಿ, ಏಲಕ್ಕಿ ಮತ್ತು ಒಣದ್ರಾಕ್ಷಿ ಮತ್ತು ಸಕ್ಕರೆ ಮಿಠಾಯಿಗಳ ಮಿಶ್ರಣವಾದ ತಿರುಪತಿ ಲಡ್ಡುವನ್ನು 1984 ರ ಮೊದಲು ಉರುವಲು ಒಲೆಗಳಲ್ಲಿ ತಯಾರಿಸಲಾಗುತ್ತಿತ್ತು. ನಂತರ ಟಿಟಿಡಿ ದ್ರವೀಕೃತ ಪೆಟ್ರೋಲಿಯಂ ಅನಿಲದಿಂದ ಕಾರ್ಯನಿರ್ವಹಿಸುವ ಓವನ್ಗಳನ್ನು ಬಳಸಲು ಪ್ರಾರಂಭಿಸಿತು.

ಗೋಡಂಬಿ, ಏಲಕ್ಕಿ, ಒಣದ್ರಾಕ್ಷಿ ಮಿಶ್ರಣ
ಹೆಚ್ಚಿನ ತಾಪಮಾನದಲ್ಲಿ ಬೇಯಿಸಿದ ತುಪ್ಪದಲ್ಲಿ ಬೂಂದಿ, ಹುರಿದ ಬೇಳೆ ಹಿಟ್ಟು, ಬೂಂದಿ ಪೋಟುಗಳಲ್ಲಿ ತಯಾರಿಸಿದ ಗೋಡಂಬಿ, ಏಲಕ್ಕಿ, ಒಣದ್ರಾಕ್ಷಿ ಮತ್ತು ಸಕ್ಕರೆ ಕ್ಯಾಂಡಿಯೊಂದಿಗೆ ಮಿಶ್ರಣವನ್ನು ಲಡ್ಡು ಪೋಟುಗಳಿಗೆ ಕನ್ವೇಯರ್ ಬೆಲ್ಟ್ಗಳ ಮೂಲಕ ಕಳುಹಿಸಲಾಗುತ್ತದೆ. ಅಲ್ಲಿ ಕೆಲಸಗಾರರು ಬೂಂದಿಯನ್ನು ಸಕ್ಕರೆ ಪಾಕದೊಂದಿಗೆ ಕೈಯಾರೆ ಮಿಶ್ರಣ ಮಾಡುತ್ತಾರೆ. ಆ ಮೂಲಕ ರುಚಿಯಾದ ಲಡ್ಡುಗಳನ್ನು ತಯಾರಿಸುತ್ತಾರೆ. ಅಡುಗೆಮನೆಯಲ್ಲಿ ತುಪ್ಪದ ಅವಶೇಷಗಳಿಂದ ಆಗಾಗ್ಗೆ ಅಪಘಾತಕ್ಕೀಡಾಗುತ್ತಿರುವ ಕಾರಣ, ಟಿಟಿಡಿ 21.75 ರೂಪಾಯಿ ವೆಚ್ಚದಲ್ಲಿ ಥರ್ಮೋ ಫ್ಲೂಯಿಡ್ ಹೀಟರ್ನೊಂದಿಗೆ ಮತ್ತೊಂದು ಬೂಂದಿ ಪೋಟು ನಿರ್ಮಿಸಿದೆ. ಇಲ್ಲಿ ಎಲ್ಪಿಜಿ, ವಿದ್ಯುತ್ ಮತ್ತು ಉರುವಲು ಬಳಸುವುದಿಲ್ಲ.

ವಾರ್ಷಿಕ 365 ಕೋಟಿ ರೂಪಾಯಿ ಆದಾಯ
ಇದು ಹೆಚ್ಚು ಬೇಡಿಕೆಯಿರುವ ಬಾಲಾಜಿಯ ಪ್ರಸಾದದ ಪ್ರಮಾಣ ಮತ್ತು ಗುಣಮಟ್ಟವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. 2022-2023ರ ಆರ್ಥಿಕ ವರ್ಷದಲ್ಲಿ ಪ್ರಸಾದ ಮಾರಾಟದ ಮೂಲಕ ವಾರ್ಷಿಕ 365 ಕೋಟಿ ರೂಪಾಯಿ ಆದಾಯ ಗಳಿಸಿದೆ ಎಂದು ಟಿಟಿಡಿ ಅಂದಾಜಿಸಿದೆ. ಶ್ರೀಮಂತ ಹಿಂದೂ ದೇವಾಲಯ ಟ್ರಸ್ಟ್ ಈ ಹಣಕಾಸು ವರ್ಷದಲ್ಲಿ ರೂ.1000 ಕೋಟಿಗಳಷ್ಟು ಹುಂಡಿ ಸಂಗ್ರಹವನ್ನು ಗಳಿಸುವ ನಿರೀಕ್ಷೆಯಲ್ಲಿದೆ. ಟಿಟಿಡಿಯು ಸ್ಥಿರ ಠೇವಣಿಗಳ ಮೇಲಿನ ಬಡ್ಡಿಯ ರೂಪದಲ್ಲಿ ರೂ. 668 ಕೋಟಿ ಗಳಿಸಲು ಸಜ್ಜಾಗಿದೆ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications