ಕೆಲಸ ಬಿಟ್ಟು, ಮೀನು ಮಾರಿ ತಿಂಗಳಿಗೆ 1 ಲಕ್ಷ ದುಡಿಯುತ್ತಿದ್ದಾನೆ ಈ ಇಂಜಿನಿಯರ್
ಕರೂರು, ಮಾರ್ಚ್ 19: ಇಂಜಿನಿಯರ್ ಓದಿ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುಬೇಕು, ವಿದೇಶಕ್ಕೆ ಹೋಗಬೇಕು ಎಂಬ ಆಸೆ ಅನೇಕರಿಗೆ ಇರುತ್ತದೆ. ಆದರೆ, ಇಲ್ಲೊಬ್ಬ ಹುಡುಗ ಇಂಜಿನಿಯರ್ ಓದಿ ಮೀನು ಮಾರುತ್ತಿದ್ದಾನೆ. ಈ ಕೆಲಸದಿಂದ ಆತ ತಿಂಗಳಿಗೆ 1 ಲಕ್ಷ ಸಂಪಾದನೆ ಮಾಡುತ್ತಿದ್ದಾನೆ.
ಈ ರೀತಿ ತನ್ನ ಜೀವನದಲ್ಲಿ ವಿಭಿನ್ನ ಗುರಿ ಇಟ್ಟುಕೊಂಡು ಸಾಗುತ್ತಿರುವ ಹುಡುಗ ಮೋಹನ್ ಕುಮಾರ್. ಈತ ತಮಿಳುನಾಡಿನ ಕರೂರು ನಿವಾಸಿ. ತನ್ನ ಸ್ನೇಹಿತರಂತೆ ಇಂಜಿನಿಯರ್ ಮುಗಿಸಿದ ಈ ಹುಡುಗ ಖಾಸಗಿ ಕಾಲೇಜಿನಲ್ಲಿ ಉಪಾದ್ಯಾಯ ಆಗಿ ಕೆಲಸ ಮಾಡುತ್ತಿರುತ್ತಾನೆ. ಆದರೆ, ಇದ್ದಕ್ಕಿದ್ದ ಹಾಗೆ ಒಂದು ದಿನ ಆ ಕೆಲಸವನ್ನು ಬಿಟ್ಟು ಮೀನು ಮಾರಲು ಶುರು ಮಾಡುತ್ತಾನೆ.
ಹೀಗೆ, ತನ್ನ ಜೀವನದ ಹಾದಿ ಬದಲಿಸಿದ ಹುಡುಗ ತನ್ನ ಗುರಿ ಮುಟ್ಟುವ ಓಟದಲ್ಲಿ ಸಾಗುತ್ತಿದ್ದಾನೆ. ಈ ಹಾದಿಯಲ್ಲಿ ಗೆದ್ದು ತೋರಿಸಿದ್ದಾನೆ.

ಕೆಲಸ ಬಿಟ್ಟು ಮೀನು ಮಾರಾಟ
ಮೋಹನ್ ಕುಮಾರ್ 27 ವರ್ಷದ ತಮಿಳುನಾಡಿನ ಹುಡುಗ. ಆತನ ತಂದೆ ಪಳನಿವೇಲ್, ತಾಯಿ ಸೆಲ್ವರಾಣಿ ಗಾಂಧಿಗ್ರಾಮಂ ನಲ್ಲಿ ಸ್ವತಃ ಅಂಗಡಿ ಇಟ್ಟುಕೊಂಡಿರುತ್ತಾರೆ. ಮೋಹನ್ ಮೆಕಾನಿಕಲ್ ಇಂಜಿನಿಯರ್ ಮುಗಿಸಿ, ತನ್ನ ಊರಿನ ಒಂದು ಕಾಲೇಜಿನಲ್ಲಿ ಉಪಾದ್ಯಾಯನಾಗಿ ಕೆಲಸ ಮಾಡುತ್ತಿರುತ್ತಾನೆ. ಆದರೆ, ಒಂದು ದಿನ ತನ್ನ ಕೆಲಸ ಬಿಟ್ಟು ಕುಟುಂಬದ ವ್ಯಾಪಾರವನ್ನು ಮುನ್ನೆಡೆಸಿಕೊಂಡು ಹೋಗುವ ನಿರ್ಧಾರ ಮಾಡುತ್ತಾನೆ.

ತಾಯಿಯ ಅನಾರೋಗ್ಯ
ಕಾಲೇಜು ಮುಗಿಸಿ ಮೋಹನ್ ದಿನ ತಮ್ಮ ಅಂಗಡಿಗೆ ಹೋಗುತ್ತಿರುತ್ತಾನೆ. ಒಮ್ಮೆ ತಾಯಿಯ ಅನಾರೋಗ್ಯದಿಂದ ಅಂಗಡಿಯನ್ನೇ ಮುಚ್ಚಬೇಕಾಗುತ್ತದೆ. ಮೊದಲಿನಿಂದ ಮೀನು ಮಾರಾಟದ ಬಗ್ಗೆ ಆಸಕ್ತಿ ಹೊಂದಿದ್ದ, ಆ ಯುವಕ ಅಂಗಡಿಯನ್ನು ಮುನ್ನೆಡೆಸಿಕೊಂಡು ಹೋಗಲು ತೀರ್ಮಾನ ಮಾಡುತ್ತಾನೆ. ಕಾಲೇಜು ಲೆಕ್ಟುರರ್ ಮೀನು ವ್ಯಾಪಾರ ಶುರು ಮಾಡಿಕೊಳ್ಳುತ್ತಾರೆ.

ಗೇಲಿ ಮಾಡಿದ್ದ ಅಕ್ಕ ಪಕ್ಕದವರು
ಮೋಹನ್ ಸಂಬಳ ಬರುವ ಕೆಲಸ ಬಿಟ್ಟು ಮೀನಿನ ವ್ಯಾಪಾರ ಮಾಡುತ್ತೇನೆ ಎಂದಾಗ ಕುಟುಂಬದವರಿಗೂ ಅದು ಇಷ್ಟ ಆಗುವುದಿಲ್ಲ. ಅಕ್ಕ ಪಕ್ಕದವರು ಗೇಲಿ ಮಾಡುತ್ತಾರೆ. ಸ್ನೇಹಿತರು ಅವನ ಸಹಾಯಕ್ಕೆ ಬರುವುದಿಲ್ಲ. ಆದರೆ, ದಿನೇಶ್ವರ್ ಹಾಗೂ ಕಾರ್ತಿಕ್ ಎಂಬ ಇಬ್ಬರು ಗೆಳೆಯರು ಮೋಹನ್ ಜೊತೆ ನಿಲ್ಲುತ್ತಾರೆ. ಕೊನೆಗೆ ಮೋಹನ್ ಶ್ರಮಕ್ಕೆ ಫಲ ಸಿಗುವ ಕಾಲ ಬರುತ್ತದೆ.

ಮುಂದಿನ ಗುರಿ
ಮೋಹನ್ ಮೀನನ್ನು ಬೇಯಿಸಿ ಮಾರಾಟ ಮಾಡುವುದರ ಜೊತೆಗೆ ಹಸಿ ಮೀನಿನ ಮಾರಾಟ ಮಾಡುತ್ತಾರೆ. ಸದ್ಯಕ್ಕೆ 2 ರಿಂದ 3 ಟನ್ ಮೀನನ್ನು ಮಾರಾಟ ಮಾಡುತ್ತಾನೆ. 10 ಟನ್ ಮೀನನ್ನು ಸಂಗ್ರಹ ಘಟಕ ಮಾಡುವುದು ನನ್ನ ಮುಂದಿನ ಗುರಿ ಎಂದು ಮೋಹನ್ ತಿಳಿಸಿದ್ದಾರೆ. ಮೋಹನ್ ಜೀವನ ಈ ಸಾಧನೆಯನ್ನು ಇಂಗ್ಲೀಷ್ ಪತ್ರಿಕೆಯೊಂದು ವರದಿ ಮಾಡಿದೆ. ಆದರೆ, ಮೋಹನ್ ಫೋಟೋವನ್ನು ಬಹಿರಂಗಪಡಿಸಿಲ್ಲ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications