ರವಿ ಬೆಳಗೆರೆ ಅಷ್ಟು ದೊಡ್ಡ ಮಟ್ಟದಲ್ಲಿ ದುಡ್ಡು ಮಾಡಿದ್ದು ಹೇಗೆ?
ರವಿ ಬೆಳಗೆರೆ ಅಷ್ಟು ದೊಡ್ಡ ಯಶಸ್ಸು ಕಾಣಲು ಸಾಧ್ಯವಾಗಿದ್ದು ಹೇಗೆ? ಅಷ್ಟು ದುಡ್ಡು ಮಾಡಿದ್ದು ಹೇಗೆ? ಬರೀ ಪುಸ್ತಕದಿಂದಲೇ ಇಷ್ಟು ದುಡ್ಡು ಮಾಡಬಹುದಾ? ಈ ಪ್ರಶ್ನೆಗೆ ಉತ್ತರ ಸಿಗಬೇಕು ಅಂದರೆ ಸಪ್ನಾ ಬುಕ್ ಸ್ಟಾಲ್ ಹಾಗೂ ನವಕರ್ನಾಟಕ ಪ್ರಕಾಶನ ಅವರನ್ನು ಮುಖ್ಯವಾಗಿ ಮಾತನಾಡಿಸಬೇಕು.
ರವಿ ಬೆಳಗೆರೆ ಅದೆಷ್ಟು ಲೆಕ್ಕಾಚಾರದ ಮನುಷ್ಯ ಆಗಿದ್ದರು ಅಂದರೆ, ತಮ್ಮ ಪುಸ್ತಕಗಳನ್ನು ತಿಂಗಳ ಮೊದಲ ವಾರದ - ಭಾನುವಾರಗಳಲ್ಲೇ ಬಿಡುಗಡೆ ಮಾಡಿರುತ್ತಿದ್ದರು. ಅದು ಕೂಡ ಬಿಡುಗಡೆ ಕಾರ್ಯಕ್ರಮ ಮಾಡುವ ಸ್ಥಳಕ್ಕೆ ಬಸ್ ವ್ಯವಸ್ಥೆ ಇದೆಯಾ, ಅಲ್ಲಿಗೆ ತಲುಪಿಕೊಳ್ಳಲು ಕಷ್ಟವಾಗುವುದಿಲ್ಲವಾ, ಮಳೆಗಾಲ ಇಲ್ಲವಾ, ಕ್ರಿಕೆಟ್ ಮ್ಯಾಚ್ ಯಾವುದೂ ಇರಲ್ಲವಾ ಎಲ್ಲವನ್ನೂ ಗಮನಿಸಿಯೇ ಇರುತ್ತಿದ್ದರು.
"ದೀಪಾವಳಿಯಲ್ಲಿ ಗಣೇಶನ ಮೂರ್ತಿ ಮಾರಾಟ ಮಾಡಬಾರದು" ಎಂಬುದು ಅವರ ನಂಬಿಕೆ. ಟ್ರೆಂಡ್ ನಲ್ಲಿರುವ ವಿಷಯವನ್ನು ಕೈಗೆತ್ತಿಕೊಳ್ಳುತ್ತಿದ್ದರು. ಇಲ್ಲದಿದ್ದಲ್ಲಿ ಒಂದು ವಿಷಯದ ಬಗ್ಗೆ ಇಷ್ಟಿಷ್ಟೇ ರುಚಿ ಹತ್ತಿಸಿ, ಆ ನಂತರ ಕುತೂಹಲದ ಉತ್ತುಂಗದಲ್ಲಿ ಪುಸ್ತಕದ ಬಿಡುಗಡೆ ಮಾಡುತ್ತಿದ್ದರು.

ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಪುಟಗಳ ಸಂಖ್ಯೆ ಇರುವ ಪುಸ್ತಕಗಳನ್ನು ಬರೆಯುವುದನ್ನೇ ಬಿಟ್ಟಿದ್ದರು ಆರ್ ಬಿ. ನೂರು- ನೂರೈವತ್ತು ಪುಟ. ಬೆಲೆಯೂ ನೂರರಿಂದ ನೂರೈವತ್ತು ರುಪಾಯಿಯೊಳಗೆ ಇರಬೇಕು. ಓದುಗರ ಜೇಬಿಗೂ ಭಾರ ಆಗಬಾರದು ಹಾಗೂ ಓದು ಸಹ ಭಾರೀ ಆಗಿರಬಾರದು ಎಂಬ ಕಾರಣಕ್ಕೆ ಹೀಗೆ ಮಾಡುತ್ತಿದ್ದರು.
ರವಿ ಬೆಳಗೆರೆ ಅವರ ಸಕ್ಸಸ್ ನಲ್ಲಿ 'ಹೆಡ್ಡಿಂಗ್'ಗಳ ಪಾತ್ರ ದೊಡ್ಡದಿತ್ತು. ಅದರಲ್ಲೂ ಹಾಯ್ ಬೆಂಗಳೂರ್ ಕವರ್ ಪೇಜ್ ಗೆ ನೀಡುತ್ತಿದ್ದ ಹೆಡ್ಡಿಂಗ್ ಭಯಂಕರ ಸೇಲ್ ಆಗುತ್ತಿದ್ದವು. ಅದಕ್ಕೆ ಕಾರಣ ಆಗಿದ್ದು ಏನೆಂದರೆ, ಕರ್ನಾಟಕದಾದ್ಯಂತದ ಅವರ ಸುತ್ತಾಟ, ವ್ಯಾಪಕ ಓದು ಹಾಗೂ ಜನರ ಜತೆಗಿನ ಒಡನಾಟ.
ಹಾಯ್ ಬೆಂಗಳೂರ್ ಪತ್ರಿಕೆ ರವಿ ಬೆಳಗೆರೆ ಪಾಲಿಗೆ ವಿಸಿಟಿಂಗ್ ಕಾರ್ಡ್ ನಂತಾದರೆ, ಈ ಟಿವಿಯಲ್ಲಿ ಬರುತ್ತಿದ್ದ ಕ್ರೈಂ ಡೈರಿ ಶಾಶ್ವತವಾದ ಅನ್ನದ ಪಾತ್ರೆ ಒದಗಿಸಿತ್ತು. ಒಂದು ಎಪಿಸೋಡ್ ಗೆ ಇಷ್ಟು ಎಂದು ನಿರಂತರವಾಗಿ ಕೆಲ ವರ್ಷಗಳ ಕಾಲ ಆ ಕಾರ್ಯಕ್ರಮ ಪ್ರಸಾರವಾಗಿತ್ತು.

ಆ ಸಮಯದಲ್ಲಿ ಹಾಯ್ ಬೆಂಗಳೂರ್ ವಾರಪತ್ರಿಕೆ, ಓ ಮನಸೇ ಪಾಕ್ಷಿಕ, ಪ್ರತಿ ದಿನ ಕ್ರೈಂ ಡೈರಿಗೆ ವಾಯ್ಸ್ ಓವರ್, ಪ್ರಾರ್ಥನಾ ಶಾಲೆ ಕೆಲಸ ಹೀಗೆ ಬಿಡುವಿಲ್ಲದೆ ದುಡಿದಿದ್ದಾರೆ ಬೆಳಗೆರೆ. ಆ ಕೆಲಸದ ಒತ್ತಡದ ಸಮಯದಲ್ಲೇ ತಮ್ಮ ಜೀವಕ್ಕೇ ತೊಂದರೆ ತಂದುಕೊಂಡಿದ್ದರು. ಅದರಿಂದ ಹೇಗೋ ಹೊರಬಂದರು.
"ಒಬ್ಬ ಬ್ರಾಹ್ಮಣನಾಗಿದ್ದರೆ ಇಷ್ಟೆಲ್ಲ ಮಾಡೋದಿಕ್ಕೆ ಸಾಧ್ಯವಿಲ್ಲ. ಅದರಲ್ಲೂ ಪುಳಚಾರು ತಿಂದುಕೊಂಡು ಏನು ಮಾಡೋಕೆ ಸಾಧ್ಯ? ನನ್ನ ಥರ ಮಾಂಸ, ಅದರಲ್ಲೂ ಯಾವುದನ್ನೂ ಬಿಡದೆ ತಿಂದರೆ ಏನಾದರೂ ಸಾಧನೆ ಮಾಡಬಹುದು ನೋಡು. ಹಾಗಿದ್ದರೆ ನಾರಾಯಣ ಮೂರ್ತಿ ನಾನ್ ವೆಜ್ ತಿಂತಾರಾ ಅನ್ಬೇಡ. ಯಾಕಂದರೆ ಅವರು ಸಾಫ್ಟ್ ವೇರ್ ಕಣಯ್ಯಾ. ಅಲ್ಲಿ ದುಡ್ಡಿಗಾಗಿ ನಮ್ಮಷ್ಟು ಶ್ರಮ ಪಡಬೇಕಿಲ್ಲ, ಬಡಿದಾಡಬೇಕಿಲ್ಲ," ಎಂದು ಈ ಲೇಖಕನ ಬಳಿಯೇ ಹೇಳಿದ್ದರು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications