Get Updates
Get notified of breaking news, exclusive insights, and must-see stories!

ಆಜಾದಿ ಗ್ಯಾಂಗನ್ನು ಬೆಂಬಲಿಸುವ ಗೋಸುಂಬೆಗಳೇ ಎಲ್ಲಿದ್ದೀರಿ?

ಯುದ್ಧೋನ್ಮಾದದ ಮಾತುಗಳನ್ನು ಆಡುವವರನ್ನು ನಂಬಬಹುದು. ಅವರ ಮನಸಿನಲ್ಲಿ ಕೃತ್ರಿಮತೆ ಇರುವುದಿಲ್ಲ. ‌ಆದರೆ ಇನ್ನೊಂದು ಗುಂಪು ಇದೆ.

ಇವರು ಸೈನಿಕರಿಗೆ ಅವಮಾನಗಳಾದಾಗ ಸೊಲ್ಲೆತ್ತುವುದಿಲ್ಲ.‌ ಸೈನಿಕರು ಸಂಬಳಕ್ಕಾಗಿ ದುಡಿಯುತ್ತಾರೆ ಎಂದು ಅವಮಾನಿಸಿದಾಗ ಇವರು ನಾಟ್ ರೀಚಬಲ್ ಆಗಿರುತ್ತಾರೆ, ಸೈನಿಕರನ್ನು ರೇಪಿಸ್ಟುಗಳು ಎಂದು ಕರೆದಾಗ ಸ್ವಿಚ್ ಆಫ್ ಆಗಿರುತ್ತಾರೆ, ಸೇನಾ ಮುಖ್ಯಸ್ಥರನ್ನು ಗೂಂಡಾ ಎಂದಾಗ ಮಗುಮ್ಮಾಗಿರುತ್ತಾರೆ, ಸರ್ಜಿಕಲ್ ಸ್ಟ್ರೈಕಿಗೆ ಸಾಕ್ಷಿ ಕೇಳಿದಾಗಲೂ ಸೈನಿಕರ ಪರ ನಿಲ್ಲುವುದಿಲ್ಲ.

ಆದರೆ ಆಜಾದಿ ಗ್ಯಾಂಗಿನ ಕೂದಲು ಕೊಂಕಿದರೂ ಸಾಕು ಸಿಡಿದು ನಿಲ್ಲುತ್ತಾರೆ. ಮಾನವ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯದ ಗುರಾಣಿ ಹಿಡಿದು ಉಗ್ರಾನುಕಂಪಿಗಳ ಬೆಂಬಲಕ್ಕೆ ನಿಲ್ಲುತ್ತಾರೆ. ನಗರ ನಕ್ಸಲರಿಗೆ ಇವರ ಹೃದಯ ಮಿಡಿಯುತ್ತಿರುತ್ತದೆ.

ಶ್! ಯುದ್ಧದ ದುಷ್ಪರಿಣಾಮ ಗೊತ್ತಿದೆಯಾ? ಸೈನಿಕರ ಜೀವಕ್ಕೆ ಬೆಲೆ ಇಲ್ಲವಾ? ರಣೋತ್ಸಾಹದಲ್ಲಿರುವವರು ಸೈನಿಕರ ಮನೆಯವರ ಸ್ಥಾನದಲ್ಲಿ ನಿಂತು ಯೋಚಿಸ್ತಿದೀರಾ? ಎಂದೆಲ್ಲಾ ಶಾಂತಿದೂತರಂತೆ ಸೈನಿಕರ ಬಗ್ಗೆ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ.

Pulwama terror attack : Where are those so called intellectuals?

ಯುದ್ಧ ಸಾರುವ ಹಕ್ಕು ಇರುವುದು ಪ್ರಾಣವನ್ನು ಪಣಕ್ಕಿಡುವ ಸೈನಿಕನಿಗೆ ಮಾತ್ರ. ಆದರೆ ಯಾವತ್ತೂ ಇಸ್ಲಾಮಿಕ್ ಮೂಲಭೂತವಾದವನ್ನು ಗಟ್ಟಿ ದನಿಯಲ್ಲಿ ಖಂಡಿಸದ ಗೋಸುಂಬೆಗಳಿಗೆ ಸೈನಿಕರ ಬಗ್ಗೆ ಮಾತಾನಾಡುವ ನೈತಿಕ ಹಕ್ಕು ಇರುವುದಿಲ್ಲ.

ಕಾಶ್ಮೀರದ ಸಮಸ್ಯೆಗಳು : ಕಾಶ್ಮೀರದ ಸಮಸ್ಯೆಯೇ ಬೇರೆ ಇದೆ. ಅಲ್ಲಿನ ಯುವಕರ ಕೂಗನ್ನು ಕೇಳಿಸಿಕೊಳ್ಳಬೇಕು ಎಂದು ಶಾಂತಿದೂತರಂತೆ ಮಾತನಾಡುವುದು ಸುಲಭ. ಆದರೆ ವಾಸ್ತವ ನಮ್ಮ ಕಲ್ಪನೆಗಿಂತ ಭಿನ್ನವಾಗಿದೆ.

ಕಾಶ್ಮೀರದ ಶಾ ಫೈಸಲ್ ಎಂಬುವವನಿಗೆ ಭಾರತದ ನೆಲ‌ ಅತ್ಯುನ್ನತ ಸೌಕರ್ಯಗಳನ್ನು ಕೊಟ್ಟಿದ್ದರ ಫಲವಾಗಿ ಆತ ಐಎಎಸ್ ಪರೀಕ್ಷೆಯಲ್ಲಿ ‌ಮೊದಲ ರ‍್ಯಾಂಕ್ ಗಳಿಸುತ್ತಾನೆ. ಆದರೆ ಆತ ಐಎಎಸ್ ಹುದ್ದೆಗೆ ರಾಜೀನಾಮೆ ಕೊಡುವ ಮೂಲಕ ದೇಶಕ್ಕೆ ಕೃತಘ್ನನಾಗಿ ನಡೆದುಕೊಳ್ಳುತ್ತಾನೆ. ಕಾರಣ ಆತ ಉನ್ನತದ ವ್ಯಾಸಂಗಕ್ಕೆ ಅಮೇರಿಕಕ್ಕೆ ಹೋಗಿದ್ದಾಗ ಪಾಕಿಸ್ತಾನದ ISI ಆತನನ್ನು ಬ್ರೇನ್ ವಾಷ್ ಮಾಡಿ ಅನ್ನ ನೀರು ಕೊಟ್ಟ ದೇಶದ ವಿರುದ್ಧವೇ ತಿರುಗಿ ಬೀಳುವಂತೆ ಮಾಡುತ್ತದೆ.

Pulwama terror attack : Where are those so called intellectuals?

ಬೇರೆ ರಾಜ್ಯಗಳಲ್ಲಿ ಒಬ್ಬ ವ್ಯಕ್ತಿ ಐಎಎಸ್ ಹುದ್ದೆಯನ್ನು ತೊರೆಯುವುದನ್ನು ಕನಸಿನಲ್ಲಿಯೂ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಜವಾನನೋ ದಿವಾನನೋ ಯಾವುದಾದರೂ ಆಗಲಿ, ಒಂದು ಸರ್ಕಾರಿ ಕೆಲಸ ಸಿಗಲಪ್ಪ ಸಾಕು ಎಂದು ಹಾತೊರೆಯುತ್ತಿರುತ್ತಾರೆ.

ಒಬ್ಬ ಅತ್ಯುನ್ನತ ರ‍್ಯಾಂಕ್ ಪಡೆದ ಐಎಎಸ್ ಅಧಿಕಾರಿಯ ಮನಸ್ಥಿತಿಯೇ ಹೀಗಿರಬೇಕಾದರೆ ಇನ್ನು ಕಲ್ಲು ತೂರುವವರ ಮನಸ್ಥಿತಿ ಹೇಗಿರಬೇಡ ಯೋಚಿಸಿ. ಈ ದೇಶ ಕಾಶ್ಮೀರಿ ಯುವಕರಿಗೆ ಅಲಿಘಢ ವಿವಿ, ಜೆಎನ್ಯು, ಏಮ್ಸ್ , ಐಐಟಿ ಮುಂತಾದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಓದಲು ಅವಕಾಶ ಕೊಡುತ್ತದೆ. ‌ಆದರೆ ಉಗ್ರರಿಂದ ಯೋಧರು ಹತರಾದಾಗಲೆಲ್ಲ ಮೊದಲು ಸಂಭ್ರಮಿಸುವವರೇ ಈ ವಿದ್ಯಾವಂತ ಕೃತಘ್ನರು. ಇವರೆಲ್ಲ ಭಾರತದ ಋಣದಲ್ಲಿ ಇಂಜನಿಯರು, ಡಾಕ್ಟರುಗಳು, ಪ್ರೊಫೆಸರುಗಳಾಗುತ್ತಿದ್ದಾರೆ.

ಒಂದು ವೇಳೆ ಕಾಶ್ಮೀರ ಸ್ವತಂತ್ರವಾದರೆ ಇವರೆಲ್ಲ ಐಸಿಸ್ ಉಗ್ರರ ಚಡ್ಡಿ ಒಗೆಯಲು ಸಿರಿಯಾಕ್ಕೊ ಇರಾಕಿಗೊ ಹೋಗಬೇಕಾಗುತ್ತದೆ. ಅಥವಾ ಈಗಾಗಲೇ ಪಾಕಿಸ್ತಾನವನ್ನು ನುಂಗಿ ನೀರು ಕುಡಿಯುತ್ತಿರುವ ಚೀನಾದ ಜೀತದಾಳುಗಳಾಗಬೇಕಾಗುತ್ತದೆ..

Pulwama terror attack : Where are those so called intellectuals?

ಉಗ್ರವಾದವನ್ನು ಖಂಡಿಸಲು ಹಿಂಜರಿಯುವ ಇಬ್ಬಂದಿ ಜನಗಳು ಪುಲ್ವಾಮ ಕೃತ್ಯಕ್ಕೆ ಇಂಟೆಲಿಜೆನ್ಸ್‌ ಫೇಲೂರ್ ಬಣ್ಣ ಕೊಟ್ಟು ಆಡಳಿತವನ್ನು ಹಣಿಯುವ ಮೂಲಕ ಉಗ್ರರೆಡೆಗೆ ತಮ್ಮ 'ಸಾಫ್ಟ್ ಕಾರ್ನರ್' ಅನ್ನು ಎಂದಿನಂತೆ ಜಾರಿಯಲ್ಲಿಟ್ಟಿದ್ದಾರೆ.

ಆದರೆ ಈ ದೇಶದ ಕಟ್ಟಕಡೆಯ ಯೋಧ ಕಾಶ್ಮೀರದ ಗಡಿಯಲ್ಲಿ ಜೀವಂತವಾಗಿರುವವರೆಗೂ ಕಾಶ್ಮೀರ ವಿಭಜನೆಯಾಗದು. ಉಗ್ರರು ಮತ್ತು ಅವರ ಕರುಣಾಳುಗಳ ಪಾಲಿಗೆ ಇದು ನರಕಸದೃಶ ಸತ್ಯ.

ಕಾಶ್ಮೀರ ಸ್ವತಂತ್ರವಾದರೆ ಏನಾಗಲಿದೆ? : ಕಾಶ್ಮೀರವನ್ನು ಸ್ವತಂತ್ರಗೊಳಿಸುವುದೆಂದರೆ ಶತ್ರುವಿಗೆ ಪಂಜಾಬ್ ದೆಹಲಿಗೆ ಲಗ್ಗೆಯಿಡಲು ಹಾದಿಯನ್ನು ಸುಗಮಗೊಳಿಸುವುದು ಎಂದರ್ಥ. ನಮ್ಮ ಯೋಧರು ಕಾಶ್ಮೀರ ಎಂಬ ಬಫರ್ ಜೋನಿನಲ್ಲಿ ನಿರಂತರ ಕಾದಾಡುತ್ತಿರುವುದರಿಂದಲೇ ಭಾರತದ ಉಳಿದ ರಾಜ್ಯಗಳ ಜನರು ಸುರಕ್ಷಿತವಾಗಿರುವುದು. ಕಾಶ್ಮೀರ ಸ್ವತಂತ್ರವಾದ ಕೂಡಲೇ ಅಲ್ಲಿನ ಬಂದೂಕುಗಳೆಲ್ಲ ನೇಗಿಲುಗಳಾಗುತ್ತವೆ, ಶಾಂತಿಯ ತೋಟ ಸ್ಥಾಪಿತವಾಗುತ್ತದೆ ಎಂದು ಭಾವಿಸುವುದು ಮೂರ್ಖತನ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+