Life Tips: ನಮ್ಮ ಸಮಸ್ಯೆಗೆ ಪರಿಹಾರ ಚಿಂತೆಯಲ್ಲ..ಚಿಂತನೆ!
ಸೋಲು, ನಿರಾಸೆ, ಕಷ್ಟಗಳಿಲ್ಲದೆ ಜೀವನವೇ ಇಲ್ಲ. ಆದರೂ ಅದನ್ನೆಲ್ಲ ಮೀರಿ ಬದುಕುವುದೇ ನಿಜವಾದ ಜೀವನ... ನಗುವವರೆಲ್ಲ ಸುಖಿಗಳಲ್ಲ... ಕಾರಿನಲ್ಲಿ ಓಡಾಡುವವರು, ಬಂಗಲೆಯಲ್ಲಿ ವಾಸ ಮಾಡುವವರೆಲ್ಲ ಶ್ರೀಮಂತರಲ್ಲ.. ನಿಜವಾದ ಸುಖಿ ಮತ್ತು ಶ್ರೀಮಂತ ಯಾರೆಂದರೆ ಕಷ್ಟದಲ್ಲೂ ನಗುವವನು, ಬಡತನದಲ್ಲೂ ಶ್ರೀಮಂತನಂತೆ ಬದುಕುವವನು.
ನಮಗೆ ಎಲ್ಲವನ್ನೂ ದೇವರು ಕೊಟ್ಟಿರುತ್ತಾನೆ. ಆದರೆ ಅದನ್ನು ಉಪಯೋಗಿಸಿಕೊಂಡು ಬದುಕುವುದನ್ನು ಕಲಿಯದ ಕಾರಣದಿಂದಾಗಿ ನಾವು ಬಡವರಾಗಿದ್ದೇವೆ, ಕಷ್ಟದಲ್ಲಿದ್ದೇವೆ. ಬಹಳಷ್ಟು ಸಾರಿ ನಮ್ಮ ವಿವೇಚನಾರಹಿತ ನಡವಳಿಕೆ ಕಷ್ಟಕ್ಕೆ ದೂಡುತ್ತದೆ. ಇನ್ನು ಬೇಕೆಂಬ ದುರಾಸೆ ಅಡ್ಡದಾರಿ ಹಿಡಿಯುವಂತೆ ಮಾಡುತ್ತದೆ. ಬೇರೆಯವರ ಮೇಲಿನ ಹೊಟ್ಟೆಕಿಚ್ಚು ನಮ್ಮನ್ನು ಸುಡುತ್ತದೆ.

ಕಷ್ಟಗಳು ಬಂದಾಗ ಬದುಕೇ ಮುಗಿದು ಹೋಯಿತೆಂಬ ಹತಾಶೆ ನಮ್ಮನ್ನು ಕಾಡತೊಡಗುತ್ತದೆ. ಈ ವೇಳೆ ಮುಂದೆ ಬದುಕೇ ಸಾಧ್ಯವಿಲ್ಲವೇನೋ ಎಂಬ ಭಾವವೂ ಕಾಡಿಬಿಡುತ್ತದೆ. ಅಂತಹ ಸಂದರ್ಭಗಳಲ್ಲಿ ಎದೆಗುಂದದೆ ಏನೇ ಆಗಲಿ ಎದುರಿಸುತ್ತೇನೆ ಎಂಬ ಧೈರ್ಯವನ್ನು ಬಲವಂತವಾಗಿ ಹಿಡಿದಿಟ್ಟುಕೊಳ್ಳಬೇಕು. ಬದುಕಿನಲ್ಲಿ ಕೆಲವೊಂದು ಕಷ್ಟಗಳು ಸಮಸ್ಯೆಗಳು ಎದುರಾಗುತ್ತವೆ. ಅವು ಸಾಮಾನ್ಯವೇ.. ಮತ್ತು ಅದಕ್ಕೆ ಪರಿಹಾರವೂ ಇರುತ್ತದೆ. ಆದ್ದರಿಂದ ತಲೆಕೆಡಿಸಿಕೊಂಡು ಓಡಾಡುವ ಅಗತ್ಯವೇ ಇರುವುದಿಲ್ಲ.
ಚಿಂತೆಯನ್ನು ಬದಿಗೊತ್ತಿ ಬದುಕಬೇಕು
ಹೆಚ್ಚಿನವರು ಕಷ್ಟಗಳು ಬಂದಾಗ, ಸಮಸ್ಯೆಗೆ ಸಿಲುಕಿದಾಗ ಚಿಂತೆ ಮಾಡಲು ಆರಂಭಿಸುತ್ತಾರೆ. ಇಲ್ಲಸಲ್ಲದ ಕಲ್ಪನೆಗಳನ್ನು ಮಾಡಿಕೊಂಡು ಕೊರಗುತ್ತಾ ಕುಳಿತು ಬಿಡುತ್ತಾರೆ. ಇದು ನಿಜವಾಗಿಯೂ ಮಾರಕ. ತಿಳಿದವರು ಹೇಳುವಂತೆ ಚಿಂತೆ ಎನ್ನುವುದು ಮನುಷ್ಯನನ್ನು ಚಿತೆಗೇರಿಸುವ ತನಕವೂ ಬಿಡುವುದಿಲ್ಲವಂತೆ. ಹೀಗಾಗಿ ಚಿಂತೆಯನ್ನು ಬದಿಗೊತ್ತಿ ಬದುಕುವುದನ್ನು ಕಲಿಯಬೇಕು. ನಮಗೆ ನಿಮಗೆ ಎಲ್ಲರಿಗೂ ಗೊತ್ತಿರುವಂತೆ ತಲೆಮೇಲೆ ಕೈಹೊತ್ತು ಚಿಂತೆ ಮಾಡುತ್ತಾ ಕುಳಿತರೆ ಅದರಿಂದ ಯಾವ ಪರಿಹಾರ ಸಿಗಲಾರದು ಬದಲಿಗೆ ಚಿಂತನೆ ಮಾಡಬೇಕು ಅದರಿಂದ ಏನಾದರೊಂದು ಪರಿಹಾರ ಖಂಡಿತಾ ದೊರೆಯುತ್ತದೆ.

ಕಷ್ಟದಲ್ಲಿದ್ದಾಗ ಎದೆಗುಂದದೆ ಧೈರ್ಯವಾಗಿ ಎದುರಿಸುವುದನ್ನು ಕಲಿಯಬೇಕು, ನಿರಾಸಭಾವ ಸುಳಿಯದಂತೆ ನೋಡಿಕೊಳ್ಳಬೇಕು, ಅದಕ್ಕಿಂತ ಹೆಚ್ಚಾಗಿ ಛಲವಿರಬೇಕು. ಒಂದು ಪರೀಕ್ಷೆಯಲ್ಲಿ ಫೇಲಾದರೇನಂತೆ ಮತ್ತೊಂದು ಬರೆಯುತ್ತೇನೆಂಬ ಹಠ, ಕೆಲಸ ಕಳೆದು ಹೋದರೇನಂತೆ ಮತ್ತೊಂದು ಹುಡುಕುತ್ತೇನೆ ಎಂಬ ವಿಶ್ವಾಸ ಇದಿಷ್ಟನ್ನು ಬೆಳೆಸಿಕೊಂಡರೆ ಬದುಕು ಕಷ್ಟವಾಗಲಾರದು. ಇವತ್ತು ಕಷ್ಟವಿರಬಹುದು ನಾಳೆ ಸುಖ ಬಂದೇ ಬರುತ್ತೆ ಎಂಬ ನಂಬಿಕೆ ಮತ್ತು ಎಂಥ ಕಷ್ಟ ಬಂದರೂ ಅದನ್ನು ಎದುರಿಸುತ್ತೇನೆ ಎಂಬ ಆತ್ಮವಿಶ್ವಾಸ ನಮ್ಮಲ್ಲಿ ಮೊಳೆಯ ಬೇಕು. ಅನೇಕ ಬಾರಿ ಆಗೋದೆಲ್ಲ ಒಳ್ಳೆಯದಕ್ಕೆ ಎಂಬ ಮಾತು ಮುಂದೆ ಸಾಗಲು ಅನುಕೂಲ ಮಾಡಿಕೊಡುತ್ತದೆ.
ಸ್ವಾಮಿ ವೀರಾಜನಂದರು ಹೇಳುವುದೇನು?
ಇಷ್ಟಕ್ಕೂ ಮನುಷ್ಯನಾಗಿ ಹುಟ್ಟಿದ ಮೇಲೆ ನಾವೆಲ್ಲರೂ ಎಲ್ಲವನ್ನು ಪಡೆದುಕೊಳ್ಳೋಕೆ ಸಾಧ್ಯವಿಲ್ಲ. ಒಂದು ಪಡೆಯಬೇಕಾದರೆ ಮತ್ತೊಂದನ್ನು ಕಳೆದುಕೊಳ್ಳಬೇಕು. ಒಂದು ಕ್ಷಣ ಯೋಚಿಸಿ ನೋಡಿದರೆ ನಮ್ಮ ಬದುಕಿನಲ್ಲಿ ನಾವು ಪಡೆದುದಕ್ಕಿಂತ ಕಳೆದುಕೊಂಡಿದ್ದೇ ಜಾಸ್ತಿಯಾಗಿರುತ್ತದೆ. ಒಂದಲ್ಲ ಒಂದು ದಿನ ನಾವೇ ಕಳೆದು ಹೋಗುವುದರಿಂದ ಕಳೆದು ಹೋಗಿದ್ದಕ್ಕೆ ಚಿಂತಿಸದೆ ಪಡೆಯುವುದರ ಬಗ್ಗೆ ಚಿಂತನೆ ಮಾಡುವುದು ನಮ್ಮ ನೋವಿಗೆ ನಾವೇ ಹಚ್ಚಿಕೊಳ್ಳುವ ಮುಲಾಮು ಆಗಿರುತ್ತದೆ.

ಸ್ವಾಮಿ ವೀರಾಜನಂದ ಅವರು ಹೇಳುತ್ತಾರೆ ಸೋತ ತಕ್ಷಣ ನಾವು ಅತ್ಯಂತ ಕುಗ್ಗಿದ ಸ್ಥಿತಿಯಲ್ಲಿರುತ್ತೇವೆ. ಆಗ ನಮ್ಮ ಭಾವನೆ, ಶಕ್ತಿ, ಸಾಮರ್ಥ್ಯ ಎಲ್ಲವೂ ಸಕರಾತ್ಮಕವಾಗಿರದೆ ನಕರಾತ್ಮಕವಾಗಿರುತ್ತದೆ. ಇದನ್ನು ಹೋಗಲಾಡಿಸಿ ಮುನ್ನಡೆಯ ಬೇಕಾದರೆ ನಮ್ಮ ಸಮಸ್ತ ಶಕ್ತಿಯನ್ನು ಬಳಸಿ ನಿರಾಶೆಯನ್ನು ಹೊಡೆದೋಡಿಸಬೇಕು. ನಾನು ದಿವ್ಯ ಸ್ವರೂಪನಾದವನು. ನಾನು ಬ್ರಹ್ಮನು ಒಂದೇ. ಯಾವ ದುಃಖವೂ ನನ್ನನ್ನು ತಟ್ಟಲಾರದು.
ಸೋಲಿಗೆ ಕುಗ್ಗುವುದು ಮಾನವ ಲಕ್ಷಣವಲ್ಲ
ನಾನು ನಿತ್ಯ ಮುಕ್ತ ಅನಂತ ಅಮೃತ ಹೀಗೆಂದು ಕೊಳ್ಳುತ್ತಾ ದೃಢನಿಷ್ಠೆಯಿಂದ ಕಾರ್ಯ ಆರಂಭಿಸಬೇಕು. ಆಗ ನಮ್ಮನ್ನು ಆವರಿಸಿದ ನಿರಾಶೆ ಸದ್ದಿಲ್ಲದೆ ದೂರ ಸರಿಯುತ್ತದೆ. ನಮ್ಮ ಮನಸ್ಸಿನಿಂದ ಯಾವಾಗ ನಿರಾಶೆ ನಮ್ಮಿಂದ ದೂರವಾಗಿ ಆಸಕ್ತಿ ಹುಟ್ಟುತ್ತದೆಯೋ ಆಗ ನಾವು ಮಾಡಬೇಕಿರುವ ಕೆಲಸಗಳಿಗೆ ವೇಗ ಸಿಗುತ್ತದೆ.
ಯಾವ ಸೋಲು ನಮ್ಮನ್ನು ಕಾಡಿತ್ತೋ ಅದೇ ಸೋಲು ನಮ್ಮಿಂದ ಕಳಚಿಕೊಂಡು ಗೆಲುವಿಗೆ ಹತ್ತಿರವಾಗುತ್ತಾ ಹೋಗುತ್ತೇವೆ. ಒಬ್ಬ ವ್ಯಕ್ತಿ ಒಂದೆರಡು ಬಾರಿ ಸೋಲಬಹುದು ಆದರೆ ಪ್ರತಿ ಬಾರಿಯೂ ಸೋಲುವುದಿಲ್ಲ. ಸೋತ ತಕ್ಷಣ ನಿರಾಶರಾಗುವುದರಿಂದಲೇ ನಮಗೆ ಗೆಲುವು ಮರೀಚಿಕೆಯಾಗುತ್ತದೆ. ಮೊದಲ ಸೋಲಿಗೆ ನಾವು ಬೆಚ್ಚಿ ಬಿದ್ದಿರುತ್ತೇವೆ.
ನಮ್ಮ ಮನಸ್ಸನ್ನು ಹೊಕ್ಕಿದ ನಿರಾಶೆ ಮತ್ತೆ ಅದೇ ಮಾರ್ಗದಲ್ಲಿ ಮುಂದುವರೆಯಲು ಬಿಡುವುದಿಲ್ಲ. ಹೀಗಾಗಿ ನಾವು ಮತ್ತೆ ಅದರಲ್ಲಿ ಮುಂದುವರೆಯುವ ಯಾವ ಪ್ರಯತ್ನವನ್ನೂ ಮಾಡುವುದಿಲ್ಲ. ಪ್ರಯತ್ನವೇ ಮಾಡದಿದ್ದ ಮೇಲೆ ಸೋಲನ್ನು ಗೆಲ್ಲುವುದಾದರೂ ಹೇಗೆ? ಸೋಲಿಗೆ ಕುಗ್ಗುವುದು ಮಾನವ ಲಕ್ಷಣವಲ್ಲ. ಏಕೆಂದರೆ ಕುಗ್ಗುವುದು, ಹಿಗ್ಗುವುದು ಬದುಕಿನಲ್ಲಿ ಇದ್ದೇ ಇದೆ.
ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದ್ದೇ ಇದೆ
ನಮಗೆ ಹಿಗ್ಗಿ ಅಭ್ಯಾಸ ಇರುವುದರಿಂದ ಕುಗ್ಗುವುದು ಕಷ್ಟವಾಗುತ್ತದೆ. ಆದರೆ ಅಂಥ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಧೈರ್ಯವಾಗಿ ಬದುಕುವುದು ಅಗತ್ಯ. ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದ್ದೇ ಇದೆ. ಅದು ಕೆಲವೊಮ್ಮೆ ಕಷ್ಟವಾಗಿ ಕಾಣಬಹುದು. ಆದರೆ ಅದಕ್ಕೆ ಹೆದರಿ ನಮ್ಮ ಅಮೂಲ್ಯ ಬದುಕಿಗೆ ಸಂಚಕಾರ ತಂದುಕೊಳ್ಳುವುದು ಮಾತ್ರ ಒಳ್ಳೆಯ ತೀರ್ಮಾನವಲ್ಲ. ಸ್ವಾಮಿ ವೀರಾಜನಂದರು ಹೇಳುವಂತೆ ನಿರಾಶೆ ಮನಸ್ಸಿನಲ್ಲಿ ಬೇರೂರದಂತೆ ನೋಡಿಕೊಳ್ಳಿ ಅದನ್ನು ಕಿತ್ತು ಬಿಸಾಡುವ ಸಾಮರ್ಥ್ಯ ಬೆಳೆಸಿಕೊಳ್ಳಿ.
ನಮ್ಮನ್ನು ನೋಯಿಸುವ, ಅಪಮಾನಿಸುವ ಸೋಲನ್ನು ಅನುಭವಿಸುವ ಸಂದರ್ಭ ಬಂದಾಗ ನಾವು ಎದುರಿಸಲಾರೆವು ಎಂಬ ಮನಸ್ಸಿನ ತುಮುಲಗಳು ನಮ್ಮನ್ನು ಆವರಿಸಿದಾಗ ನಾವು ನಮ್ಮ ಮನಸ್ಸಿನಿಂದಾಚೆ ಒಬ್ಬ ಪ್ರೇಕ್ಷಕನಂತೆ ನಿಂತು ನೋಡುವುದನ್ನು ರೂಢಿಸಿಕೊಳ್ಳಬೇಕು. ಆಗ ಇಲ್ಲಿ ನಾನು ಏನೂ ಅಲ್ಲ ಎಂಬುವುದು ಗೊತ್ತಾಗುತ್ತದೆ. ಬದುಕಿನ ಹಾದಿಯೂ ಸುಗಮವಾಗುತ್ತದೆ.
-
Karna Serial: "ಕರ್ಣ" ಧಾರಾವಾಹಿಯಿಂದ ಹೊರಬಂದ ಟಿ.ಎಸ್.ನಾಗಾಭರಣ, ಹಿರಿಯ ನಟ ಅಭಿಜಿತ್ ಎಂಟ್ರಿ -
'ವಂತಾರ'ಕ್ಕೆ ಒಂದು ವರ್ಷ: ಆರೋಗ್ಯ ಸುಧಾರಿಸಿದ ಅನೇಕ ಪ್ರಾಣಿಗಳು ಮರಳಿ ಕಾಡಿಗೆ -
Bengaluru: ಗೊರಗುಂಟೆಪಾಳ್ಯದ ಟ್ರಾಫಿಕ್ಗೆ ಸಿಗಲಿದ್ಯಾ ಮುಕ್ತಿ? ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು 'ಸುರಂಗ ರಸ್ತೆ' ಪ್ರಸ್ತಾಪ -
Horoscope March 4: ಈ ರಾಶಿಯವರಿಗೆ ವೃತ್ತಿಯಲ್ಲಿ ಸುಧಾರಣೆ, ಆರೋಗ್ಯ ಕಾಳಜಿ ಮುಖ್ಯ, ದಿನ ಭವಿಷ್ಯ ಇಲ್ಲಿದೆ -
Bengaluru: ‘92 ಲಕ್ಷದ ಪ್ಯಾಕೇಜ್ ಇದ್ದರೂ ಉಳಿಯಲಿಲ್ಲ ಕೆಲಸ’; ಒಂದೇ ದಿನ ಶೇ. 40ರಷ್ಟು ಸಿಬ್ಬಂದಿ ವಜಾ ಮಾಡಿದ ಐಟಿ ಕಂಪನಿ -
ಅನಧಿಕೃತವಾಗಿ ಪ್ರವೇಶಿಸಿದರೆ ಗುಂಡು ಹಾರಿಸಲಾಗುವುದು: ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಹುಟ್ಟುಹಾಕಿದ ವಾಯುಪಡೆಯ ಸೂಚನಾ ಫಲಕ -
Horoscope March 5: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ, ಯಾರಿಗೆ ಶುಭ-ಯಾರಿಗೆ ಅಶುಭ -
Toxic release postponed: ಯಶ್ ಅಭಿಮಾನಿಗಳಿಗೆ ಆಘಾತ: "ಟಾಕ್ಸಿಕ್" ಸಿನಿಮಾ ಬಿಡುಗಡೆ ದಿಢೀರ್ ಮುಂದೂಡಿಕೆ -
ಕರ್ನಾಟಕ ವಿದ್ಯುತ್ ನಿಗಮ ಬೆಳಕಿನ ಸಂಸ್ಥೆಗೆ ಕತ್ತಲೆಯ ಛಾಯೆ: ಸರ್ಕಾರಿ ನಿರ್ಲಕ್ಷದ ಒಳನೋಟ -
ಕೃಷಿಕರಿಗೆ ವರದಾನವಾದ ಶೈಲಜಾ ವಿಠಲ್ ಆವಿಷ್ಕರಿಸಿದ 35 ಕೃಷಿ ಯಂತ್ರೋಪಕರಣ, ಸಣ್ಣ ರೈತರಿಗೆ ದೊಡ್ಡ ಲಾಭ -
Elnaaz Norouzi: ಭಾರತದಲ್ಲೇ ನೆಲೆಸಿದ್ದಾರೆ ಇರಾನ್ ಸುಂದರಿ, ಮತ್ತೆ ಅಲ್ಲಿಗೆ ಕಾಲಿಟ್ಟರೆ ನನ್ನ ಕೊಲ್ತಾರೆ ಎಂದ ನಟಿ ಎಲ್ನಾಜ್ -
Saaniya Chandok: ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ಕುಟುಂಬಕ್ಕೆ ಸೊಸೆಯಾಗಿ ಬಂದ ಸಾನಿಯಾ ಚಾಂದೋಕ್ ಯಾರು?












Click it and Unblock the Notifications