ಬಿಜೆಪಿ ಕಳ್ಕೊಂಡಿದ್ದೆಷ್ಟು, ಕಾಂಗ್ರೆಸ್ ಗಳಿಸಿದ್ದೆಷ್ಟು? ಇಲ್ಲಿದೆ ಲೆಕ್ಕಾಚಾರ
Recommended Video

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶವನ್ನು ಮುಂದಿಟ್ಟುಕೊಂಡು ಪೋಸ್ಟ್ ಮಾರ್ಟಂ ಆರಂಭವಾಗಿದೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಗಳಿಸಿದ್ದೆಷ್ಟು? ಆ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ಆಗಿದ್ದೇನು ಅನ್ನೋದರ ಪೋಸ್ಟ್ ಮಾರ್ಟಂ ಇದು. ಹಾಗೆ ಲೆಕ್ಕಾಚಾರ ನೋಡುವಾಗ ಯಾರಿಗೆಷ್ಟು ಲಾಭ-ನಷ್ಟ ಎಂಬ ವರದಿ ಇಲ್ಲಿದೆ.
ಈ ಐದು ರಾಜ್ಯಗಳಲ್ಲಿ ಬಂದ 2013ರ ಚುನಾವಣೆ ಫಲಿತಾಂಶದ ಲೆಕ್ಕಾಚಾರ ನೋಡಿದರೆ ಬಿಜೆಪಿ ಶೇ 50ರಷ್ಟು ಸ್ಥಾನಗಳನ್ನು ಕಳೆದುಕೊಂಡಿದೆ. ಮತ್ತೊಂದು ಇವೇ ರಾಜ್ಯಗಳಲ್ಲಿ ಕಾಂಗ್ರೆಸ್ ಶೇ 80ರಷ್ಟು ಸೀಟುಗಳನ್ನು ಹೆಚ್ಚು ಪಡೆದಿದೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಈ ರಾಜ್ಯಗಳಲ್ಲಿ ಒಟ್ಟು 679 ಸ್ಥಾನಗಳಲ್ಲಿ 382ರಲ್ಲಿ ಜಯ ಸಾಧಿಸಿತ್ತು.
2018ರಲ್ಲಿ ಅದು 192ಕ್ಕೆ ಕುಸಿತವಾಗಿದೆ. ಅಂದರೆ ಕಳೆದ ಸಲಕ್ಕೆ ಹೋಲಿಸಿದರೆ ಶೇ 50ರಷ್ಟು ಇಳಿಕೆ. ಇನ್ನು ಕಾಂಗ್ರೆಸ್ ವಿಚಾರಕ್ಕೆ ಬಂದರೆ, 2013ರಲ್ಲಿ ಈ ಐದು ರಾಜ್ಯಗಳಲ್ಲಿ 165 ಸ್ಥಾನ ಪಡೆದಿತ್ತು. ಈ ಬಾರಿ 303 ಸ್ಥಾನ ಗಳಿಸುವ ಮೂಲಕ ಶೇ 83ರಷ್ಟು ಹೆಚ್ಚಾಗಿ ಸೀಟುಗಳನ್ನು ಗೆದ್ದಿದೆ.

ರಾಜಸ್ತಾನ ವಿಧಾನಸಭಾ ಚುನಾವಣಾ ಫಲಿತಾಂಶದ ಹೋಲಿಕೆ
ರಾಜಸ್ತಾನದಲ್ಲಿ 2013ರಲ್ಲಿ ಬಿಜೆಪಿಯು 200 ಸ್ಥಾನಗಳಲ್ಲಿ 163ರಲ್ಲಿ ಜಯ ಸಾಧಿಸಿತ್ತು. ಆದರೆ ಈ ಬಾರಿ 73 ಕಡೆ ಮಾತ್ರ ಗೆಲ್ಲಲು ಸಾಧ್ಯವಾಗಿದೆ. ಆ ಬಾರಿ 21 ಸ್ಥಾನ ಗಳಿಸಲು ಸಾಧ್ಯವಾಗಿದ್ದ ಕಾಂಗ್ರೆಸ್ ತೆಕ್ಕೆಯಲ್ಲಿ ಈ ಬಾರಿ 102 ಸೀಟುಗಳು. ಇನ್ನು ಮಧ್ಯಪ್ರದೇಶದ ಲೆಕ್ಕಾಚಾರವನ್ನು ನೋಡೋಣ.

ಮಧ್ಯಪ್ರದೇಶ, ಛತ್ತೀಸ್ ಗಢ ಚುನಾವಣೆ ಫಲಿತಾಂಶದ ಹೋಲಿಕೆ
2013ರಲ್ಲಿ ಮಧ್ಯಪ್ರದೇಶದ ಒಟ್ಟು 230 ವಿಧಾನಸಭಾ ಸ್ಥಾನಗಳ ಪೈಕಿ 165 ಬಿಜೆಪಿ ಪಾಲಾಗಿತ್ತು. ಕಾಂಗ್ರೆಸ್ 58 ಕ್ಷೇತ್ರಗಳಲ್ಲಿ ಜಯಿಸಿತ್ತು. 2018ರಲ್ಲಿ ಕೈ ಪಕ್ಷಕ್ಕೆ 114 ಸ್ಥಾನಗಳು ಬಂದಿವೆ. ಬಿಜೆಪಿ ಪಾಲಿಗೆ 106 ಕಡೆ ಗೆಲುವು ಸಿಕ್ಕಿದೆ. ಛತ್ತೀಸ್ ಗಢದ ಒಟ್ಟು 90 ಸ್ಥಾನಗಳ ಪೈಕಿ 49ರಲ್ಲಿ 2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಿತ್ತು. ಆ ಸಲ ಕಾಂಗ್ರೆಸ್ 39 ಸ್ಥಾನಗಳಲ್ಲಿ ಜಯಿಸಿತ್ತು. 2018ರಲ್ಲಿ ಬಿಜೆಪಿ 13ಕ್ಕೆ ಕುಸಿದರೆ. ಕಾಂಗ್ರೆಸ್ 62ಕ್ಕೆ ನೆಗೆದಿದೆ.

ತೆಲಂಗಾಣದಲ್ಲಿ ಯಾವ ರೀತಿ ಫಲಿತಾಂಶ ಬಂದಿದೆ?
ತೆಲಂಗಾಣದಲ್ಲಿ 2013ರಲ್ಲಿ (ಆಗ ಅವಿಭಜಿತ ಆಂಧ್ರಪ್ರದೇಶವಾಗಿತ್ತು) ಬಿಜೆಪಿಯು 5 ಸ್ಥಾನಗಳಲ್ಲಿ ಜಯ ಸಾಧಿಸಲು ಸಾಧ್ಯವಾಗಿತ್ತು. ಕಾಂಗ್ರೆಸ್ ಗೆ 13 ಸೀಟು ಸಿಕ್ಕಿತ್ತು. 2018ರಲ್ಲಿ ತೆಲಂಗಾಣದ ಒಟ್ಟು ಸದಸ್ಯತ್ವ ಬಲದ 119 ಸ್ಥಾನಗಳಲ್ಲಿ 1ರಲ್ಲಿ ಮಾತ್ರ ಜಯ ಸಾಧಿಸಲು ಬಿಜೆಪಿಗೆ ಸಾಧ್ಯವಾಗಿದೆ. ಕಾಂಗ್ರೆಸ್ ಮೈತ್ರಿ ಕೂಟ 20 ಕಡೆ ಗೆಲುವು ದಾಖಲಿಸಿದೆ.

ಮಿಜೋರಾಂ ವಿಧಾನಸಭೆಯಲ್ಲಿ ಏನಾಗಿದೆ?
ಮಿಜೋರಾಂನ ಒಟ್ಟು ಸದಸ್ಯ ಬಲ 40ರ ಪೈಕಿ 2013ರಲ್ಲಿ 34 ಸ್ಥಾನಗಳು ಕಾಂಗ್ರೆಸ್ ವಶವಾಗಿದ್ದವು. ಆ ಮೂಲಕ ಭರ್ಜರಿ ಜಯ ದಾಖಲಿಸಿತ್ತು. ಆ ಚುನಾವಣೆಯಲ್ಲಿ ಒಂದು ಸ್ಥಾನ ಕೂಡ ಅಲ್ಲಿ ಬಿಜೆಪಿ ಗೆದ್ದಿರಲಿಲ್ಲ. 2018ರಲ್ಲಿ ಅಂತೂ ಖಾತೆ ತೆರೆಯಲು ಸಾಧ್ಯವಾದ ಬಿಜೆಪಿ 1 ಕ್ಷೇತ್ರದಲ್ಲಿ ಜಯ ಸಾಧಿಸಿದೆ. ಆದರೆ ಕಾಂಗ್ರೆಸ್ ಪಕ್ಷವು 15 ಸ್ಥಾನಗಳಿಗೆ ಕುಸಿದು ಹೋಗಿದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications